ಅರಮನೆ ಮೈದಾನ ಭೂ-ಸ್ವಾಧೀನ ವಿವಾದ; ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ

author-image
Ganesh
Updated On
ಅರಮನೆ ಮೈದಾನ ಭೂ-ಸ್ವಾಧೀನ ವಿವಾದ; ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ
Advertisment
  • ಬೆಂಗಳೂರು ಅರಮನೆ ಮೈದಾನ ಭೂಸ್ವಾಧೀನ ವಿವಾದ
  • ರಸ್ತೆ ಅಗಲೀಕರಣಕ್ಕೆ ಅಂತ 15.36 ಎಕರೆ ಭೂಮಿ ಸ್ವಾಧೀನ
  • 3 ಸಾವಿರ ಕೋಟಿಯ ಟಿಡಿಆರ್ ನೀಡುವಂತೆ ಸೂಚನೆ

ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ವಿವಾದದಲ್ಲಿ ಕರ್ನಾಟಕ ಸರ್ಕಾರಕ್ಕೆ ಭಾರೀ ಹಿನ್ನಡೆ ಆಗಿದೆ. ಮೈಸೂರು ರಾಜಮನೆತನಕ್ಕೆ ಈ ಕೂಡಲೇ 3 ಸಾವಿರ ಕೋಟಿಯ ಟಿಡಿಆರ್ (Transferable Development Rights) ನೀಡುವಂತೆ ಸೂಚಿಸಿದೆ.

ಮಹತ್ವದ ವಿಚಾರಣೆಯಲ್ಲಿ ಇವತ್ತು ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್​, ಬೆಂಗಳೂರು ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ 3400 ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (TDR) ಅನ್ನು ಮೈಸೂರಿನ ರಾಜವಂಶಸ್ಥರಿಗೆ ನೀಡಬೇಕು ಎಂದು ಆದೇಶ ನೀಡಿದೆ.

ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಹಣೆಗೆ ‘ಸಿಂಧೂರ’ವಿಟ್ಟು ಐಶ್ವರ್ಯ ರೈ ಹೊಸ ಲುಕ್​.. ಇದರ ಅರ್ಥ ಏನು?

ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಅರಮನೆ ಮೈದಾನದ ಭೂಮಿಯನ್ನು ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಇದೇ ವಿಚಾರಕ್ಕೆ ಹಿಂದೆ ವಿಚಾರಣೆ ನಡೆಸಿದ್ದ ಕೋರ್ಟ್, ಒಂದು ವಾರದ ಒಳಗಾಗಿ ಟಿಡಿಆರ್​ ಠೇವಣಿ ಇಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಕೋರ್ಟ್​ನ ಆದೇಶದಂತೆ ಸರ್ಕಾರ ಸುಪ್ರೀಂಕೋರ್ಟ್​ ರಿಜಿಸ್ಟ್ರಾರ್​​​ನಲ್ಲಿ 3400 ಕೋಟಿ ಹಣವನ್ನು ಇಟ್ಟಿತ್ತು. ಇದಕ್ಕೆ ರಾಜಮನೆತನದ ಪರ ವಕೀಲರು ವಿರೋಧಿಸಿದ್ದರು.

ಅದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ, ಟಿಡಿಆರ್​ ಅನ್ನು ಮೈಸೂರು ರಾಜಮನೆತನಕ್ಕೆ ನಿಡಬಾರದು ಅಂತಾ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಟಿಡಿಆರ್​ ಮೈಸೂರು ರಾಜಮನೆತನಕ್ಕೆ ನೀಡುವಂತೆ ಮಹತ್ವದ ಆದೇಶ ನೀಡಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದೆ.

ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್​ ಅಲ್ಲವೇ ಅಲ್ಲ.. RCBಗೆ ಅಸಲಿ ವಿಲನ್ ಯಾರು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment