/newsfirstlive-kannada/media/post_attachments/wp-content/uploads/2024/12/Drone-Pratap-Arrest-Case.jpg)
ತುಮಕೂರು: ಸುಮ್ಮನಿರಲಾರದೆ ಇರುವೆ ಬಿಟ್ಕೊಂಡ್ರು ಅನ್ನೋ ಹಾಗಾಗಿದೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಕಥೆ. ಸೋಡಿಯಂ ಸ್ಫೋಟಿಸಿ ಅದನ್ನ ಅಪ್ಲೋಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೀವ್ಸ್ ಹೆಚ್ಚಿಸಿಕೊಳ್ಳೋಕೆ ಹೋಗಿ ಈಗ ಕಂಬಿ ಎಣಿಸೋ ಹಾಗಾಗಿದೆ.
ಸೋಡಿಯಂ ಸ್ಫೋಟ ಕೇಸ್ನಲ್ಲಿ ಡ್ರೋನ್ ಪ್ರತಾಪ್ ಜೈಲುಪಾಲು
ನ್ಯಾಯಾಂಗ ಬಂಧನ ಹಿನ್ನೆಲೆ ಮಧುಗಿರಿ ಜೈಲು ಸೇರಿದ ಪ್ರತಾಪ್
ಸೋಡಿಯಂ ಸ್ಫೋಟ ಕೇಸ್ನಲ್ಲಿ ಡ್ರೋನ್ ಪ್ರತಾಪ್ ಜೈಲು ಪಾಲಾಗಿದ್ದಾರೆ. ತುಮಕೂರಿನ ಮಧುಗಿರಿ ಜೆಎಂಎಫ್ಸಿ ಕೋರ್ಟ್ ಡಿಸೆಂಬರ್ 26ರವರೆಗೆ ಡ್ರೋನ್ ಪ್ರತಾಪ್ಗೆ ನ್ಯಾಯಾಂಗ ಬಂಧನ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.
ಇವತ್ತು ಪ್ರತಾಪ್ರನ್ನ ಮಿಡಿಗೇಶಿ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದು, ಡ್ರೋನ್ ಪ್ರತಾಪ್ ಮಧುಗಿರಿ ಜೈಲು ಹಕ್ಕಿ ಆಗಿದ್ದಾರೆ.
ಸ್ಫೋಟದ ವರದಿ ನೀಡಲು ಸೂಚಿಸಿದ ಸಿಎಂ ಕಚೇರಿ
ವರದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ
ಜೈಲು ಪಾಲಾಗಿರೋ ಡ್ರೋನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಖುದ್ದು ಸಿಎಂ ಕಚೇರಿ ಸ್ಫೋಟದ ವರದಿ ನೀಡುವಂತೆ ವರದಿಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ. ಈ ಹಿನ್ನೆಲೆ, ಅಧಿಕಾರಿಗಳು ಮಧುಗಿರಿ ಸಿಪಿಐ ಕಚೇರಿಗೆ ಆಗಮಿಸಿದ ಡ್ರೋನ್ ಪ್ರತಾಪ್ ಕೇಸ್ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಕೃಷಿ ಹೊಂಡಕ್ಕೆ ತೆರಳಿ ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ಗೆ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ಈ ಕೇಸ್ಗೆ ಸಂಬಂಧಪಟ್ಟಂತೆ ಡ್ರೋನ್ ಪ್ರತಾಪ್ನ ಇಬ್ಬರು ಸ್ನೇಹಿತರನ್ನು ಮಿಡಿಗೇಶಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾಮೆರಾ ಮ್ಯಾನ್ ವಿನಯ್, ಹಾಗೂ ಸೋಡಿಯಂ ಕೊಡಿಸಿದ್ದ ಪ್ರಜ್ವಲ್ ಅವರನ್ನ ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿಸಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಫಾರಂ ಹೌಸ್ ಮಾಲೀಕ ಜಿತೇಂದ್ರ ಜೈನ್ಗಾಗಿ ಹುಡುಕಾಟ ಮುಂದುವರೆದಿದೆ.
ಇದನ್ನೂ ಓದಿ: ಭಿಕ್ಷುಕರಿಗೆ ಅಯ್ಯೋ ಅಂದ್ರೆ ಬೀಳುತ್ತೆ ಕೇಸ್.. ದುಡ್ಡು ಕೊಟ್ರೆ ಬರ್ತಾರೆ ಪೊಲೀಸ್; ಕಾರಣ ಏನು ಗೊತ್ತಾ?
ಡ್ರೋನ್ ಪ್ರತಾಪ್ ಜೈಲಲ್ಲಿ ಈಗ ಏನೋ ಮಾಡೋಲು ಹೋಗಿ ಇನ್ನೇನೋ ಆಗೋಯ್ತು ಅಂತ ಹಾಡು ಹೇಳುವಂತೆ ಆಗಿರೋದಂತೂ ಸುಳ್ಳಲ್ಲ. ಡ್ರೋನ್ ಪ್ರತಾಪ್ಗೆ ಪ್ರಕರಣದಲ್ಲಿ ಸದ್ಯಕ್ಕಂತೂ ರಿಲೀಫ್ ಸಿಗೋ ಚಾನ್ಸೇ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ