/newsfirstlive-kannada/media/post_attachments/wp-content/uploads/2025/04/Devdutt_Padikkal_1-1-1.jpg)
RCB ಐಪಿಎಲ್ ಸೀಸನ್ 18ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಇದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಂತಕ್ಕೆ ದಾಪುಗಾಲಿಡೋ ತವಕದಲ್ಲಿದೆ.
ಇಷ್ಟು ವರ್ಷ.. ಈ ಹಂತದಲ್ಲಿ ಆರ್ಸಿಬಿ ಫ್ಯಾನ್ಸ್ ಕ್ಯಾಲ್ಕುಲೇಟರ್ ಹಿಡಿದು ಲೆಕ್ಕಾಚಾರ ಹಾಕ್ತಿದ್ರು. ಆದ್ರೆ, ಈ ಬಾರಿ ಎಲ್ಲಾ ಬದಲಾಗಿದೆ. ರಗಡ್ ಪರ್ಫಾಮೆನ್ಸ್ ನೀಡಿ ಎದುರಾಳಿಗಳನ್ನ ರುಬ್ಬಿ ಬಿಸಾಕ್ತಿರೋ ಆರ್ಸಿಬಿ ಇನ್ನೊಂದು ಪಂದ್ಯ ಗೆದ್ರೆ ಸಾಕು ಪ್ಲೇ ಆಫ್ ಸ್ಪಾಟ್ ಫಿಕ್ಸ್ ಆಗಲಿದೆ. ಈ ಖುಷಿಯ ವಿಚಾರದ ನಡುವೆಯೇ RCB ಫ್ಯಾನ್ಸ್ಗೆ ಆಘಾತ ಎದುರಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ಗೆ ಬೆಂಗಳೂರು ಕನೆಕ್ಷನ್.. ಉಗ್ರರ ನೆಲೆ ಧ್ವಂಸ ಮಾಡಿದ್ದು ಕರ್ನಾಟಕದ ಡ್ರೋಣ್..!
RCB ಪರ ಸಾಲಿಡ್ ಫಾರ್ಮ್ನಲ್ಲಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಈಗಾಗಲೇ ಗಾಯಗೊಂಡಿರುವ ಫಿಲ್ ಸಾಲ್ಟ್ ಅವರು ಕಂಪ್ಲೀಟ್ ಫಿಟ್ ಆಗಿಲ್ಲ. ಈ ಮಧ್ಯೆ ಗಾಯಗೊಂಡಿರುವ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಕೂಡ ಈ ಸೀಸನ್ನಿಂದ ಔಟ್ ಆಗಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ಫ್ಯಾನ್ಸ್ಗೆ ಬಿಗ್ ಶಾಕ್.. ದಿಢೀರ್ ನಿವೃತ್ತಿ ಘೋಷಿಸಿದ ಬಳಿಕ ಏನಂದ್ರು?
ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು ಇಂಪ್ಯಾಕ್ಟ್ ಫುಲ್ ಪರ್ಫಾಮೆನ್ಸ್ ನೀಡ್ತಾ ಇದ್ದ ಪಡಿಕ್ಕಲ್ ಆರ್ಸಿಬಿಯ ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿಸಿದ್ರು. 10 ಪಂದ್ಯ 247 ರನ್ಗಳಿಸಿದ್ದ ಪಡಿಕ್ಕಲ್ ಇದೀಗ ಟೂರ್ನಿಯಿಂದ ಹೊರಬಿದ್ದಾರೆ. ಪಡಿಕ್ಕಲ್ ಹೊರಬಿದ್ದಿರೋದು ಆರ್ಸಿಬಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
ಗಾಯಾಳು ದೇವದತ್ ಪಡಿಕ್ಕಲ್ ಬದಲಾಗಿ RCB ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನ ತಂಡಕ್ಕೆ ಕರೆ ತಂದಿದೆ. ಮಯಾಂಕ್ ಅಗರ್ವಾಲ್ ಅವರಿಗೆ ಮತ್ತೊಮ್ಮೆ RCB ಚಾನ್ಸ್ ಕೊಟ್ಟಿರೋದು ಖುಷಿಯ ವಿಚಾರವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ