ನಟ ಅಲ್ಲು ಅರ್ಜುನ್​​ ಅರೆಸ್ಟ್​ ಕೇಸ್​ಗೆ ಬಿಗ್​ ಟ್ವಿಸ್ಟ್; ಯೂಟರ್ನ್​​ ಹೊಡೆದ ದೂರುದಾರ ಏನಂದ್ರು?

author-image
Ganesh Nachikethu
Updated On
ನಟ ಅಲ್ಲು ಅರ್ಜುನ್​​ ಅರೆಸ್ಟ್​ ಕೇಸ್​ಗೆ ಬಿಗ್​ ಟ್ವಿಸ್ಟ್; ಯೂಟರ್ನ್​​ ಹೊಡೆದ ದೂರುದಾರ ಏನಂದ್ರು?
Advertisment
  • ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಬಲಿ ಕೇಸ್​​
  • 14 ದಿನಗಳ ಕಾಲ ಅಲ್ಲು ಅರ್ಜುನ್​ ಅವರಿಗೆ ನ್ಯಾಯಾಂಗ ಬಂಧನ
  • ಕೇಸ್​ ವಾಪಸ್​ ಪಡೆಯುತ್ತೇನೆ ಎಂದ ದೂರುದಾರ ಏನಂದ್ರು ಗೊತ್ತಾ?

ಹೈದರಾಬಾದ್​​: ನನ್ನ ಮಗ ಅಲ್ಲು ಅರ್ಜುನ್​​ ಫ್ಯಾನ್​​. ಪುಷ್ಪ-2 ಸಿನಿಮಾ ನೋಡಬೇಕು ಎಂದಿದ್ದಕ್ಕೆ ನನ್ನ ಮಗನನ್ನು ಸಂಧ್ಯಾ ಥಿಯೇಟರ್​​ಗೆ ಕರೆದುಕೊಂಡು ಹೋಗಿದ್ದೆ. ಆಗ ಈ ಘಟನೆ ನಡೆದಿದೆ. ಅಲ್ಲು ಅರ್ಜುನ್​ ಅವರಿಗೂ ಈ ಕೇಸ್​ಗೂ ಸಂಬಂಧವೇ ಇಲ್ಲ. ನಾನು ಬೇಕಾದ್ರೆ ಕೇಸ್​ ವಾಪಸ್​ ಪಡೆಯುತ್ತೇನೆ. ಪೊಲೀಸ್ರು ನಮಗೆ ಏನು ತಿಳಿಸದೆ ಅಲ್ಲು ಅರ್ಜುನ್​ ಅವರನ್ನು ಅರೆಸ್ಟ್​ ಮಾಡಿದ್ದಾರೆ ಎಂದು ಮೃತ ಮಹಿಳೆ ರೇವತಿ ಪತಿ ಭಾಸ್ಕರ್​​ ಅವರು ಹೇಳಿದ್ದಾರೆ.

ನನಗೆ ಈ ವಿಷಯವೇ ಗೊತ್ತಿಲ್ಲ. ಅಲ್ಲು ಅರ್ಜುನ್​ ಅವರನ್ನು ಅರೆಸ್ಟ್​ ಮಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ನಾನು ಮೊಬೈಲ್​​ನಲ್ಲಿ ವಿಡಿಯೋ ನೋಡಿದ್ದೇನೆ. ಅಲ್ಲು ಅರ್ಜುನ್​ ಅವರಿಗೂ ಕೇಸ್​ಗೂ ಯಾವುದೇ ಸಂಬಂಧ ಇಲ್ಲ ಎಂದು ಪುನರುಚ್ಚರಿಸಿದರು.

ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತಕ್ಕೆ ಮಹಿಳೆ ಬಲಿಯಾಗಿದ್ದ ಕೇಸ್​​ನಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್​ ಮಾಡಿದ ನಂತರ ಪೊಲೀಸ್ರು ಅಲ್ಲು ಅರ್ಜುನ್​ ಅವರನ್ನು ಹೈದರಾಬಾದ್​​ ನಾಂಪಲ್ಲಿ ಕೋರ್ಟ್​​ನಲ್ಲಿ ಹಾಜರುಪಡಿಸಿದ್ರು. ಕೋರ್ಟ್​ ಈಗ ಮಹತ್ವದ ಆದೇಶ ಹೊರಡಿಸಿದ್ದು, 14 ದಿನಗಳ ಕಾಲ ಅಲ್ಲು ಅರ್ಜುನ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಅಲ್ಲು ಅರ್ಜು ಅರೆಸ್ಟ್​

ಇಂದು ಬೆಳಿಗ್ಗೆ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್​ ಮನೆಗೆ ಹೋಗಿ ಅರೆಸ್ಟ್​ ಮಾಡಿದ್ದಾರೆ. ಕಾಫಿ ಕುಡಿಯುತ್ತಿದ್ದ ಅಲ್ಲು ಅರ್ಜುನ್​ ಅವರನ್ನು ಪೊಲೀಸ್ರು ಬಂಧಿಸಿದ್ದಾರೆ. ಮೃತ ಮಹಿಳೆ ರೇವತಿ ಪತಿ ನೀಡಿದ ದೂರಿನ ಆಧಾರದ ಮೇರೆಗೆ ಅಲ್ಲು ಅರ್ಜುನ್​ ಅವರನ್ನು ಅರೆಸ್ಟ್​ ಮಾಡಲಾಗಿದೆ.

ಈಗಾಗಲೇ ಕೇಸ್​ ಸಂಬಂಧ ಸಂಧ್ಯಾ ಥಿಯೇಟರ್​ ಮಾಲೀಕ, ಮ್ಯಾನೇಜರ್ ಹಾಗೂ ಅಲ್ಲು ಅರ್ಜುನ್ ಜೊತೆಗೆ ಇದ್ದ ಬೌನ್ಸರ್​ಗಳನ್ನು ಬಂಧಿಸಲಾಗಿದೆ. ಅಲ್ಲು ಅರ್ಜುನ್ ವಿರುದ್ಧ 105, 118 (1) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ:ಮಹಿಳೆ ಜೀವ ತೆಗೆದ ಕೇಸ್​; ನಟ ಅಲ್ಲು ಅರ್ಜುನ್​ಗೆ 14 ದಿನ ನ್ಯಾಯಾಂಗ ಬಂಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment