ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್
ಕೊಲೆ ಕೇಸಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಮತ್ತೊಂದು ಸುಳಿವು
ಪಟ್ಟಣಗೆರೆ ಶೆಡ್ಗೆ ದರ್ಶನ್ರನ್ನು ಕರೆದೊಯ್ದು ಮಹಜರು ನಡೆಸಿದ ಪೊಲೀಸ್ರು
ಬೆಂಗಳೂರು: ಅಭಿಮಾನಿಗಳ ಒಡೆಯ.. ಯಜಮಾನ ದರ್ಶನ್ ಕಸ್ಟಡಿಯಲ್ಲಿದ್ದು ಪೊಲೀಸರಿಂದ ತನಿಖೆ ತೀವ್ರಗೊಂಡಿದೆ. ಪೊಲೀಸರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸ್ತಿದ್ದಾರೆ. ಮೊದಲು ಸುಮನಹಳ್ಳಿ ಬ್ರಿಡ್ಜ್ ಬಳಿ ಶವ ಎಸೆದಿದ್ದ ಜಾಗಕ್ಕೆ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ.
ಪಟ್ಟಣಗೆರೆ ಶೆಡ್ಗೆ ದರ್ಶನ್, ಪವಿತ್ರಾ ಕರೆದೊಯ್ದು ಮಹಜರು!
ಬಳಿಕ ಕೊಲೆ ನಡೆದಿದೆ ಎನ್ನಲಾಗಿರುವ ಪಟ್ಟಣಗೆರೆಯಲ್ಲಿರುವ ಶೆಡ್ಗೆ ನಟ ದರ್ಶನ್, ಪವಿತ್ರಾಗೌಡ ಸೇರಿ ಎಲ್ಲಾ 13 ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಲಾಗಿದೆ. ಸ್ಥಳ ಮಹಜರು ವೇಳೆ ದರ್ಶನ್, ಪವಿತ್ರಾಗೌಡ ಶೆಡ್ನ ಹೊರಗೆ ಕೈ ಕಟ್ಟಿಕೊಂಡು ನಿಂತಿರೋದು ಕಂಡು ಬಂದಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಎಫ್ಎಸ್ಎಲ್ ತಂಡ ಸುಮಾರು 2 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದು ರೇಣುಕಾಸ್ವಾಮಿ ಹತ್ಯೆ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕಿದೆ.
ಘೋರ.. ಭೀಕರ.. ಶವ ಎಸೆದ ಸ್ಥಳದಲ್ಲಿ ಹಂತಕರು!
ಸ್ಯಾಂಡಲ್ವುಡ್ನ ‘ಸರದಾರ’ ಕಾನೂನಿನ ‘ಚೌಕ’ಟ್ಟು ಮೀರಿದ್ದಾರೆ. ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್ಗೆ ಕರಿಯನ ಮನುಷ್ಯತ್ವ ಕೆರಳಿದೆ. ಯುವಕನ ಮೇಲೆ ತೋರಿದ್ದ ‘ಶೌರ್ಯ’ ಹಣೆಬರಹ ಬದಲಿಸಿ ಜೈಲೊಳಗೆ ಬಂಧಿಸಿದೆ. 6 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ನಾನವನಲ್ಲ, ನಂಗೇನೂ ಗೊತ್ತಿಲ್ಲ ಅಂತಿರುವ ‘ಗಜ’ ಗಾಂಭೀರ್ಯದ ನಡೆ ತೋರ್ತಿದ್ದಾರೆ. ಶೆಡ್ವೊಂದರಲ್ಲಿ ಬಡಪಾಯಿ ಮೇಲೆ ಕಲಾಸಿಪಾಳ್ಯ ಗ್ಯಾಂಗ್ ಅಟ್ಟಹಾಸ ಮೆರೆದಿತ್ತು.. ಕಗ್ಗತ್ತಲ ರಾತ್ರಿಯಲ್ಲಿ ಡಿ ಬಾಸ್ ಗ್ಯಾಂಗ್ನ ಮೂವರು ಕಿರಾತಕರು ಜೀಪ್ನಲ್ಲಿ ಶವ ಸಾಗಿಸಿ ರಾಜಕಾಲುವೆ ಬಳಿ ಡಂಪ್ ಮಾಡಿ ಹೋಗಿದ್ದರು. ತನಿಖೆ ಮುಂದುವರಿಸಿರುವ ಪೊಲೀಸರು ರೇಣುಕಾಸ್ವಾಮಿ ಮೃತದೇಹ ಎಸೆದಿದ್ದ ಸುಮನಹಳ್ಳಿ ಬ್ರಿಡ್ಜ್ ಬಳಿಗೆ ನಾಲ್ವರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬೆಂಗಳೂರು ಕಮಿಷನರ್ ಭೇಟಿ
ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯುವ ಮುನ್ನ ವಿಚಾರಣೆ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಭೇಟಿ ಸುಮಾರು 2 ಗಂಟೆಗಳ ಕಾಲ ಮಾಹಿತಿ ಪಡೆದಿದ್ದಾರೆ. ಸಾಕ್ಷ್ಯಗಳು, ಆರೋಪಿಗಳ ಹೇಳಿಕೆಗಳು, ಟೆಕ್ನಿಕಲ್ ಎವಿಡೆನ್ಸ್ ಹಾಗೂ ದರ್ಶನ್, ಪವಿತ್ರಾಗೌಡ ಪಾತ್ರ ಏನು ಎಂಬೆಲ್ಲಾ ವಿಷಯಗಳ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.
ಒಟ್ಟಾರೆ, ರೇಣುಕಾಸ್ವಾಮಿ ಮೇಲೆ ಬೌನ್ಸರ್ಗಳ ಬಲವಾದ ಪಂಚ್ ಆತನ ಜೀವ ತೆಗೆದಿದೆ. ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಪ್ರಕರಣ ಕುರಿತು ಮತ್ತಷ್ಟು ವಿಚಾರಗಳು ಹೊರಬರುವ ಸಾಧ್ಯತೆ ಇದೆ.
ಇದನ್ನೂ ಓದಿ: VIDEO: ದರ್ಶನ್ ಮತ್ತು ಗ್ಯಾಂಗ್ನಿಂದ ಕೊಲೆ ಎನ್ನಲಾದ ಕೇಸ್ಗೆ ಬಿಗ್ ಟ್ವಿಸ್ಟ್.. ಮಹತ್ವದ ಸಾಕ್ಷಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಿತ್ರದುರ್ಗ ಮೂಲದ ಯುವಕ ರೇಣುಕಾ ಸ್ವಾಮಿ ಕೊಲೆ ಕೇಸ್ಗೆ ಬಿಗ್ ಟ್ವಿಸ್ಟ್
ಕೊಲೆ ಕೇಸಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಮತ್ತೊಂದು ಸುಳಿವು
ಪಟ್ಟಣಗೆರೆ ಶೆಡ್ಗೆ ದರ್ಶನ್ರನ್ನು ಕರೆದೊಯ್ದು ಮಹಜರು ನಡೆಸಿದ ಪೊಲೀಸ್ರು
ಬೆಂಗಳೂರು: ಅಭಿಮಾನಿಗಳ ಒಡೆಯ.. ಯಜಮಾನ ದರ್ಶನ್ ಕಸ್ಟಡಿಯಲ್ಲಿದ್ದು ಪೊಲೀಸರಿಂದ ತನಿಖೆ ತೀವ್ರಗೊಂಡಿದೆ. ಪೊಲೀಸರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸ್ತಿದ್ದಾರೆ. ಮೊದಲು ಸುಮನಹಳ್ಳಿ ಬ್ರಿಡ್ಜ್ ಬಳಿ ಶವ ಎಸೆದಿದ್ದ ಜಾಗಕ್ಕೆ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ.
ಪಟ್ಟಣಗೆರೆ ಶೆಡ್ಗೆ ದರ್ಶನ್, ಪವಿತ್ರಾ ಕರೆದೊಯ್ದು ಮಹಜರು!
ಬಳಿಕ ಕೊಲೆ ನಡೆದಿದೆ ಎನ್ನಲಾಗಿರುವ ಪಟ್ಟಣಗೆರೆಯಲ್ಲಿರುವ ಶೆಡ್ಗೆ ನಟ ದರ್ಶನ್, ಪವಿತ್ರಾಗೌಡ ಸೇರಿ ಎಲ್ಲಾ 13 ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಲಾಗಿದೆ. ಸ್ಥಳ ಮಹಜರು ವೇಳೆ ದರ್ಶನ್, ಪವಿತ್ರಾಗೌಡ ಶೆಡ್ನ ಹೊರಗೆ ಕೈ ಕಟ್ಟಿಕೊಂಡು ನಿಂತಿರೋದು ಕಂಡು ಬಂದಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಎಫ್ಎಸ್ಎಲ್ ತಂಡ ಸುಮಾರು 2 ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದು ರೇಣುಕಾಸ್ವಾಮಿ ಹತ್ಯೆ ಬಗ್ಗೆ ಇಂಚಿಂಚೂ ಮಾಹಿತಿ ಕಲೆ ಹಾಕಿದೆ.
ಘೋರ.. ಭೀಕರ.. ಶವ ಎಸೆದ ಸ್ಥಳದಲ್ಲಿ ಹಂತಕರು!
ಸ್ಯಾಂಡಲ್ವುಡ್ನ ‘ಸರದಾರ’ ಕಾನೂನಿನ ‘ಚೌಕ’ಟ್ಟು ಮೀರಿದ್ದಾರೆ. ರೇಣುಕಾಸ್ವಾಮಿಯ ಅಶ್ಲೀಲ ಮೆಸೇಜ್ಗೆ ಕರಿಯನ ಮನುಷ್ಯತ್ವ ಕೆರಳಿದೆ. ಯುವಕನ ಮೇಲೆ ತೋರಿದ್ದ ‘ಶೌರ್ಯ’ ಹಣೆಬರಹ ಬದಲಿಸಿ ಜೈಲೊಳಗೆ ಬಂಧಿಸಿದೆ. 6 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ನಾನವನಲ್ಲ, ನಂಗೇನೂ ಗೊತ್ತಿಲ್ಲ ಅಂತಿರುವ ‘ಗಜ’ ಗಾಂಭೀರ್ಯದ ನಡೆ ತೋರ್ತಿದ್ದಾರೆ. ಶೆಡ್ವೊಂದರಲ್ಲಿ ಬಡಪಾಯಿ ಮೇಲೆ ಕಲಾಸಿಪಾಳ್ಯ ಗ್ಯಾಂಗ್ ಅಟ್ಟಹಾಸ ಮೆರೆದಿತ್ತು.. ಕಗ್ಗತ್ತಲ ರಾತ್ರಿಯಲ್ಲಿ ಡಿ ಬಾಸ್ ಗ್ಯಾಂಗ್ನ ಮೂವರು ಕಿರಾತಕರು ಜೀಪ್ನಲ್ಲಿ ಶವ ಸಾಗಿಸಿ ರಾಜಕಾಲುವೆ ಬಳಿ ಡಂಪ್ ಮಾಡಿ ಹೋಗಿದ್ದರು. ತನಿಖೆ ಮುಂದುವರಿಸಿರುವ ಪೊಲೀಸರು ರೇಣುಕಾಸ್ವಾಮಿ ಮೃತದೇಹ ಎಸೆದಿದ್ದ ಸುಮನಹಳ್ಳಿ ಬ್ರಿಡ್ಜ್ ಬಳಿಗೆ ನಾಲ್ವರು ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬೆಂಗಳೂರು ಕಮಿಷನರ್ ಭೇಟಿ
ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯುವ ಮುನ್ನ ವಿಚಾರಣೆ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಭೇಟಿ ಸುಮಾರು 2 ಗಂಟೆಗಳ ಕಾಲ ಮಾಹಿತಿ ಪಡೆದಿದ್ದಾರೆ. ಸಾಕ್ಷ್ಯಗಳು, ಆರೋಪಿಗಳ ಹೇಳಿಕೆಗಳು, ಟೆಕ್ನಿಕಲ್ ಎವಿಡೆನ್ಸ್ ಹಾಗೂ ದರ್ಶನ್, ಪವಿತ್ರಾಗೌಡ ಪಾತ್ರ ಏನು ಎಂಬೆಲ್ಲಾ ವಿಷಯಗಳ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ.
ಒಟ್ಟಾರೆ, ರೇಣುಕಾಸ್ವಾಮಿ ಮೇಲೆ ಬೌನ್ಸರ್ಗಳ ಬಲವಾದ ಪಂಚ್ ಆತನ ಜೀವ ತೆಗೆದಿದೆ. ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಪ್ರಕರಣ ಕುರಿತು ಮತ್ತಷ್ಟು ವಿಚಾರಗಳು ಹೊರಬರುವ ಸಾಧ್ಯತೆ ಇದೆ.
ಇದನ್ನೂ ಓದಿ: VIDEO: ದರ್ಶನ್ ಮತ್ತು ಗ್ಯಾಂಗ್ನಿಂದ ಕೊಲೆ ಎನ್ನಲಾದ ಕೇಸ್ಗೆ ಬಿಗ್ ಟ್ವಿಸ್ಟ್.. ಮಹತ್ವದ ಸಾಕ್ಷಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ