newsfirstkannada.com

ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಿಸ್ಟ್.. ಹೆಂಡ್ತಿಯರನ್ನು ಕೊಂದ ಗಂಡಂದಿರ ಕ್ರೈಮ್​​ ಕಹಾನಿ!

Share :

Published February 10, 2024 at 6:43am

    ಆತ್ಮಹತ್ಯೆ ಎಂದುಕೊಂಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಕೊಲೆ ಕೇಸ್ ಬೆನ್ನತ್ತಿದ ಪೊಲೀಸರಿಗೆ ಸಿಕ್ತು ಸುಳಿವು

    ಪತ್ನಿಯರನ್ನು ಕೊಲೆ ಮಾಡಿದ ಪತಿಯಂದಿರ ಕಹಾನಿ

ಬೆಂಗಳೂರು: ಇದು ಒಂದು ಕೊಲೆ ಭೇದಿಸಲು ಹೋಗಿ ಮತ್ತೊಂದು ಕೊಲೆ ರಹಸ್ಯ ಭೇದಿಸಿರೋ ರೋಚಕ ಸ್ಟೋರಿ. ಮೊನ್ನೆಯಷ್ಟೇ ನೇಣುಬಿಗಿದ ಸ್ಥಿತಿಯಲ್ಲಿ ಪ್ರೇಮಲತಾ ಎಂಬಾಕೆಯ ಶವ ಪತ್ತೆಯಾಗಿತ್ತು. ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಪತಿ ಜೊತೆ ತಗ್ಲಾಕೊಂಡ ಕೊಲೆಗಾರನ ಮತ್ತೊಂದು ಕೊಲೆಯ ರಹಸ್ಯ ಬಯಲಾಗಿದೆ.

ಆತ್ಮಹತ್ಯೆ ಎಂದುಕೊಂಡ ಕೇಸ್​ಗೆ ಬಿಗ್​ ಟ್ವಿಸ್ಟ್​. ಓರ್ವ ಮಹಿಳೆಯ ಕೊಲೆ ಕೇಸ್​ ಬೆನ್ನತ್ತಿದ್ದ ಪೊಲೀಸರಿಗೆ ಮತ್ತೊಂದು ಮಹಿಳೆಯ ಮರ್ಡರ್​ ಮಿಸ್ಟರಿ ಬಯಲಾದ ಇಂಟರೆಸ್ಟಿಂಗ್​ ಕೇಸ್​. ಇದು ಪತ್ನಿಯರನ್ನ ಕೊಲೆ ಮಾಡಿದ ಪತಿಯಂದಿರ ರೋಚಕ ಕಹಾನಿ.

ಸುಪಾರಿ ಕೊಟ್ಟು ಪತ್ನಿಯನ್ನ ಕೊಲೆ ಮಾಡಿಸಿದ ಪತಿರಾಯ

ಇದೇ ಫೆಬ್ರವರಿ 5 ರಂದು ಮಹಾಲಕ್ಷ್ಮೀ ಲೇಔಟ್​ನ ಶ್ರೀಕಂಠೇಶ್ವರನಗರದಲ್ಲಿ 35 ವರ್ಷದ ಪ್ರೇಮಲತಾ ಎಂಬಾಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ಲು. ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪತಿ ನಾಟಕವಾಡಿದ್ದ. ಸ್ಥಳಕ್ಕೆ ಬಂದು ನೋಡಿದ ಪೊಲೀಸರಿಗೆ ಅನುಮಾನ ಮೂಡಿತ್ತು. ಹೀಗಾಗಿ ಶಿವಶಂಕರ್​ನ ಅರೆಸ್ಟ್​ ಮಾಡಿ ಬಂಧಿಸಿದಾಗ ಸುಪಾರಿ ಕೊಟ್ಟು ಪತ್ನಿಯನ್ನ ಕೊಲೆಗೈದಿರೋದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.

ಮೊದಲಿಗೆ ಪತಿ ಸತ್ಯ ಒಪ್ಪಿಕೊಂಡಿರಲಿಲ್ಲ. ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿದ್ರೂ, ಬಾಯಿಬಿಟ್ಟಿರಲಿಲ್ಲ ಬಳಿಕ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆಯ ಮೂಲೆ ಮೂಲೆಯಲ್ಲು ಸಿಸಿಟಿವಿ ಪತ್ತೆಯಾಗಿತ್ತು. ಬೆಡ್ ರೂಂ ನಲ್ಲಿಯೂ ಸಿಸಿಟಿವಿ ಹಾಕಿಸಿಕೊಂಡಿದ್ದ ಆರೋಪಿ. ಏರಿಯಾದ 200 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಈ ವೇಳೆ ವಿನಯ್ ಅನುಮಾನಸ್ಪದವಾಗಿ ಕಂಡಿದ್ದ. ಸಿಸಿಟಿವಿ ದೃಶ್ಯ ಶಿವಶಂಕರ್​ಗೆ ತೋರಿಸ್ತಿದ್ದಂತೆ ಆತ ವಿನಯ್​ ಅನ್ನೋದನ್ನ ಒಪ್ಪಿಕೊಂಡಿದ್ದ ವಿನಯ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೊಂದು ಕೊಲೆ ರಹಸ್ಯ ಬಯಲಾಗಿದೆ.

ಶಿವಶಂಕರ್​ಗೆ ಪತ್ನಿ ಮೇಲೆ ಅನುಮಾನ, ಕೊಲೆಗೆ ಸ್ಕೇಚ್​

ಅಂದ್ಹಾಗೆ ಶಿವಶಂಕರ್​ಗೆ ಆತನ ಪತ್ನಿ ಮೇಲೆ ಅನುಮಾನ ಹೀಗಾಗಿ ಮನೆ ತುಂಬಾ ಸಿಸಿಟಿವಿ ಹಾಕಿಸಿದ್ದ. ಇಬ್ಬರು ಅದೇ ವಿಚಾರವಾಗಿ ಪರಸ್ಪರ ಜಗಳವಾಡ್ತಿದ್ರು. ಶಿವಶಂಕರ್​ಗೆ ಕೊಲೆ ಮಾಡುವಷ್ಟು ಧೈರ್ಯ ಇರಲಿಲ್ಲ. ಹೀಗಾಗಿ ವಿನಯ್ ಸಹಾಯ ಪಡೆದುಕೊಂಡಿದ್ದ, ಪತ್ನಿ ಮೇಲೆ ಮಾಟ ಮಂತ್ರ ಮಾಡಿಸಿದ್ದ ಅದು ವರ್ಕೌಟ್ ಆಗಿರಲಿಲ್ಲ. ಸ್ವೀಟ್​ನಲ್ಲಿ ಮರ್ಕ್ಯೂರಿಯನ್ನು ಹಾಕಿ ನೀಡಿದ್ದ ಆದರು ಪ್ರೇಮಲತಾ ಸಾವನ್ನಪ್ಪಿರಲಿಲ್ಲ. ಹೇಗಾದ್ರೂ ಮಾಡಿ ಸಾಯಿಸಲೇಬೇಕು ಅಂತ ನಿರ್ಧರಿಸಿದ್ದ ಆರೋಪಿಗಳು ಫೆಬ್ರವರಿ 5 ರಂದು ಮುಹೂರ್ತ ಫಿಕ್ಸ್​ ಮಾಡಿದ್ರು. ಮನೆಗೆ ಎಂಟ್ರಿ ಕೊಟ್ಟ ವಿನಯ್​ ಪ್ರೇಮಲತಾರನ್ನ ಉಸಿರುಗಟ್ಟಿಸಿ ಸಾಯಿಸಿದ್ದ ಬಳಿಕ ಫ್ಯಾನ್​ಗೆ ನೀಣುಬಿಗಿದ ಸ್ಥಿತಿಯಲ್ಲಿ ಶವವನ್ನ ಕಟ್ಟಿದ್ರು.. ನಂತರ ಆರೋಪಿ ವಿನಯ್ ಸ್ಥಳದಿಂದ ಪರಾರಿಯಾಗಿದ್ದ. ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ವಿನಯ್​ ಜೊತೆಗೆ ಮತ್ತೊಂದು ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

ವಿಚಾರಣೆ ವೇಳೆ ಪತ್ನಿ ಕೊಲೆ ರಹಸ್ಯ ಬಾಯ್ಬಿಟ್ಟ ಪಾಪಿ

ಪ್ರೇಮಲತಾ ಕೊಲೆ ವಿಚಾರಣೆ ವೇಳೆ ವಿನಯ್​ ತನ್ನ ಹೆಂಡತಿಯ ಸಾವಿನ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾನೆ. 2023ರಲ್ಲಿ ವಿನಯ್ ಪತ್ನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಗ ಹುಣಸಮಾರನಹಳ್ಳಿ ಪೊಲೀಸರು ಆಕಸ್ಮಿಕ ಸಾವು ಕೇಸ್​ ದಾಖಲಿಸಿಕೊಂಡಿದ್ರು. ಆದ್ರೀಗ, ವಿಚಾರಣೆ ವೇಳೆ ತನ್ನ ಪತ್ನಿಯನ್ನೂ ತಾನೇ ಕೊಲೆಗೈದಿದ್ದಾಗೆ ವಿನಯ್​ ಒಪ್ಪಿಕೊಂಡಿದ್ದಾನೆ. ಹೆಂಡತಿಯನ್ನ ಕೆರೆಗೆ ತಳ್ಳಿ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ. ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಗಾಳಿಗೆ ಬೂದಿ ಸರಿದಾಗ ಕೆಂಡದಂತೆ ಸತ್ಯವೂ ಹೊರಬರಲೇಬೇಕು. ಸತ್ಯಕ್ಕೆ ಸಾವಿಲ್ಲ ಅನ್ನೋದು ಈ ಪ್ರಕರಣದಲ್ಲಿ ಸಾಬೀತಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆತ್ಮಹತ್ಯೆ ಕೇಸ್​ಗೆ ಬಿಗ್ ಟ್ವಿಸ್ಟ್.. ಹೆಂಡ್ತಿಯರನ್ನು ಕೊಂದ ಗಂಡಂದಿರ ಕ್ರೈಮ್​​ ಕಹಾನಿ!

https://newsfirstlive.com/wp-content/uploads/2024/02/BNG_PREMALATHA.jpg

    ಆತ್ಮಹತ್ಯೆ ಎಂದುಕೊಂಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

    ಕೊಲೆ ಕೇಸ್ ಬೆನ್ನತ್ತಿದ ಪೊಲೀಸರಿಗೆ ಸಿಕ್ತು ಸುಳಿವು

    ಪತ್ನಿಯರನ್ನು ಕೊಲೆ ಮಾಡಿದ ಪತಿಯಂದಿರ ಕಹಾನಿ

ಬೆಂಗಳೂರು: ಇದು ಒಂದು ಕೊಲೆ ಭೇದಿಸಲು ಹೋಗಿ ಮತ್ತೊಂದು ಕೊಲೆ ರಹಸ್ಯ ಭೇದಿಸಿರೋ ರೋಚಕ ಸ್ಟೋರಿ. ಮೊನ್ನೆಯಷ್ಟೇ ನೇಣುಬಿಗಿದ ಸ್ಥಿತಿಯಲ್ಲಿ ಪ್ರೇಮಲತಾ ಎಂಬಾಕೆಯ ಶವ ಪತ್ತೆಯಾಗಿತ್ತು. ಈ ಪ್ರಕರಣ ಬೆನ್ನತ್ತಿದ್ದ ಪೊಲೀಸರಿಗೆ ಪತಿ ಜೊತೆ ತಗ್ಲಾಕೊಂಡ ಕೊಲೆಗಾರನ ಮತ್ತೊಂದು ಕೊಲೆಯ ರಹಸ್ಯ ಬಯಲಾಗಿದೆ.

ಆತ್ಮಹತ್ಯೆ ಎಂದುಕೊಂಡ ಕೇಸ್​ಗೆ ಬಿಗ್​ ಟ್ವಿಸ್ಟ್​. ಓರ್ವ ಮಹಿಳೆಯ ಕೊಲೆ ಕೇಸ್​ ಬೆನ್ನತ್ತಿದ್ದ ಪೊಲೀಸರಿಗೆ ಮತ್ತೊಂದು ಮಹಿಳೆಯ ಮರ್ಡರ್​ ಮಿಸ್ಟರಿ ಬಯಲಾದ ಇಂಟರೆಸ್ಟಿಂಗ್​ ಕೇಸ್​. ಇದು ಪತ್ನಿಯರನ್ನ ಕೊಲೆ ಮಾಡಿದ ಪತಿಯಂದಿರ ರೋಚಕ ಕಹಾನಿ.

ಸುಪಾರಿ ಕೊಟ್ಟು ಪತ್ನಿಯನ್ನ ಕೊಲೆ ಮಾಡಿಸಿದ ಪತಿರಾಯ

ಇದೇ ಫೆಬ್ರವರಿ 5 ರಂದು ಮಹಾಲಕ್ಷ್ಮೀ ಲೇಔಟ್​ನ ಶ್ರೀಕಂಠೇಶ್ವರನಗರದಲ್ಲಿ 35 ವರ್ಷದ ಪ್ರೇಮಲತಾ ಎಂಬಾಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ಲು. ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪತಿ ನಾಟಕವಾಡಿದ್ದ. ಸ್ಥಳಕ್ಕೆ ಬಂದು ನೋಡಿದ ಪೊಲೀಸರಿಗೆ ಅನುಮಾನ ಮೂಡಿತ್ತು. ಹೀಗಾಗಿ ಶಿವಶಂಕರ್​ನ ಅರೆಸ್ಟ್​ ಮಾಡಿ ಬಂಧಿಸಿದಾಗ ಸುಪಾರಿ ಕೊಟ್ಟು ಪತ್ನಿಯನ್ನ ಕೊಲೆಗೈದಿರೋದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.

ಮೊದಲಿಗೆ ಪತಿ ಸತ್ಯ ಒಪ್ಪಿಕೊಂಡಿರಲಿಲ್ಲ. ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿದ್ರೂ, ಬಾಯಿಬಿಟ್ಟಿರಲಿಲ್ಲ ಬಳಿಕ ಪೊಲೀಸರು ಮನೆಯಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮನೆಯ ಮೂಲೆ ಮೂಲೆಯಲ್ಲು ಸಿಸಿಟಿವಿ ಪತ್ತೆಯಾಗಿತ್ತು. ಬೆಡ್ ರೂಂ ನಲ್ಲಿಯೂ ಸಿಸಿಟಿವಿ ಹಾಕಿಸಿಕೊಂಡಿದ್ದ ಆರೋಪಿ. ಏರಿಯಾದ 200 ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಈ ವೇಳೆ ವಿನಯ್ ಅನುಮಾನಸ್ಪದವಾಗಿ ಕಂಡಿದ್ದ. ಸಿಸಿಟಿವಿ ದೃಶ್ಯ ಶಿವಶಂಕರ್​ಗೆ ತೋರಿಸ್ತಿದ್ದಂತೆ ಆತ ವಿನಯ್​ ಅನ್ನೋದನ್ನ ಒಪ್ಪಿಕೊಂಡಿದ್ದ ವಿನಯ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತೊಂದು ಕೊಲೆ ರಹಸ್ಯ ಬಯಲಾಗಿದೆ.

ಶಿವಶಂಕರ್​ಗೆ ಪತ್ನಿ ಮೇಲೆ ಅನುಮಾನ, ಕೊಲೆಗೆ ಸ್ಕೇಚ್​

ಅಂದ್ಹಾಗೆ ಶಿವಶಂಕರ್​ಗೆ ಆತನ ಪತ್ನಿ ಮೇಲೆ ಅನುಮಾನ ಹೀಗಾಗಿ ಮನೆ ತುಂಬಾ ಸಿಸಿಟಿವಿ ಹಾಕಿಸಿದ್ದ. ಇಬ್ಬರು ಅದೇ ವಿಚಾರವಾಗಿ ಪರಸ್ಪರ ಜಗಳವಾಡ್ತಿದ್ರು. ಶಿವಶಂಕರ್​ಗೆ ಕೊಲೆ ಮಾಡುವಷ್ಟು ಧೈರ್ಯ ಇರಲಿಲ್ಲ. ಹೀಗಾಗಿ ವಿನಯ್ ಸಹಾಯ ಪಡೆದುಕೊಂಡಿದ್ದ, ಪತ್ನಿ ಮೇಲೆ ಮಾಟ ಮಂತ್ರ ಮಾಡಿಸಿದ್ದ ಅದು ವರ್ಕೌಟ್ ಆಗಿರಲಿಲ್ಲ. ಸ್ವೀಟ್​ನಲ್ಲಿ ಮರ್ಕ್ಯೂರಿಯನ್ನು ಹಾಕಿ ನೀಡಿದ್ದ ಆದರು ಪ್ರೇಮಲತಾ ಸಾವನ್ನಪ್ಪಿರಲಿಲ್ಲ. ಹೇಗಾದ್ರೂ ಮಾಡಿ ಸಾಯಿಸಲೇಬೇಕು ಅಂತ ನಿರ್ಧರಿಸಿದ್ದ ಆರೋಪಿಗಳು ಫೆಬ್ರವರಿ 5 ರಂದು ಮುಹೂರ್ತ ಫಿಕ್ಸ್​ ಮಾಡಿದ್ರು. ಮನೆಗೆ ಎಂಟ್ರಿ ಕೊಟ್ಟ ವಿನಯ್​ ಪ್ರೇಮಲತಾರನ್ನ ಉಸಿರುಗಟ್ಟಿಸಿ ಸಾಯಿಸಿದ್ದ ಬಳಿಕ ಫ್ಯಾನ್​ಗೆ ನೀಣುಬಿಗಿದ ಸ್ಥಿತಿಯಲ್ಲಿ ಶವವನ್ನ ಕಟ್ಟಿದ್ರು.. ನಂತರ ಆರೋಪಿ ವಿನಯ್ ಸ್ಥಳದಿಂದ ಪರಾರಿಯಾಗಿದ್ದ. ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ವಿನಯ್​ ಜೊತೆಗೆ ಮತ್ತೊಂದು ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.

ವಿಚಾರಣೆ ವೇಳೆ ಪತ್ನಿ ಕೊಲೆ ರಹಸ್ಯ ಬಾಯ್ಬಿಟ್ಟ ಪಾಪಿ

ಪ್ರೇಮಲತಾ ಕೊಲೆ ವಿಚಾರಣೆ ವೇಳೆ ವಿನಯ್​ ತನ್ನ ಹೆಂಡತಿಯ ಸಾವಿನ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾನೆ. 2023ರಲ್ಲಿ ವಿನಯ್ ಪತ್ನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಗ ಹುಣಸಮಾರನಹಳ್ಳಿ ಪೊಲೀಸರು ಆಕಸ್ಮಿಕ ಸಾವು ಕೇಸ್​ ದಾಖಲಿಸಿಕೊಂಡಿದ್ರು. ಆದ್ರೀಗ, ವಿಚಾರಣೆ ವೇಳೆ ತನ್ನ ಪತ್ನಿಯನ್ನೂ ತಾನೇ ಕೊಲೆಗೈದಿದ್ದಾಗೆ ವಿನಯ್​ ಒಪ್ಪಿಕೊಂಡಿದ್ದಾನೆ. ಹೆಂಡತಿಯನ್ನ ಕೆರೆಗೆ ತಳ್ಳಿ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ. ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಗಾಳಿಗೆ ಬೂದಿ ಸರಿದಾಗ ಕೆಂಡದಂತೆ ಸತ್ಯವೂ ಹೊರಬರಲೇಬೇಕು. ಸತ್ಯಕ್ಕೆ ಸಾವಿಲ್ಲ ಅನ್ನೋದು ಈ ಪ್ರಕರಣದಲ್ಲಿ ಸಾಬೀತಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More