ತರಕಾರಿ ಕೊಚ್ಚಿದಂತೆ ಡಾಕ್ಟರ್ನನ್ನೇ ಕೊಚ್ಚಿದ
ಜೀವ ಕಾಪಾಡುವ ವೈದ್ಯನ ಮೇಲೆ ಅಟ್ಯಾಕ್!
ಮಚ್ಚಿನಿಂದ ಹಲವು ಬಾರಿ ಕೊಚ್ಚಿ ಹತ್ಯೆಗೆ ಯತ್ನ
ಮುಂಬೈ: ದೇಶ ಎತ್ತ ಸಾಗ್ತಿದೆ. ಅಡುಗೆ ಮನೆಯಲ್ಲಿ ತರಕಾರಿ ಕೊಚ್ಚಿದಂತೆ ಮನುಷ್ಯರನ್ನೇ ಕೊಚ್ಚಿ ಹಾಕ್ತಿರೋ ಪ್ರಕರಣಗಳು ನಡೀತಿವೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಜೀವ ಕಾಪಾಡಬೇಕಾದ ವೈದ್ಯನ ಮೇಲೆಯೇ ಮಚ್ಚು ಮುಗಿಬಿದ್ದಿತ್ತು.
ಮಚ್ಚು ಹಿಡಿದು ತಲೆಗೆ, ಕುತ್ತಿಗೆಗೆ ಹೊಡೆದು ಹಲ್ಲೆ ಮಾಡ್ತಿರೋ ಭೀಭತ್ಸ ಘಟನೆ ನಡೆದಿರೋದು ಮಹಾರಾಷ್ಟ್ರದ ನಾಸಿಕ್ನಲ್ಲಿ. ದುರಂತ ಅಂದ್ರೆ ಈ ಅವಘಡ ಸಂಭವಿಸಿದ್ದು ಹಾಸ್ಪಿಟಲ್ನಲ್ಲಿ.. ಹಲ್ಲೆಗೊಳಗಾಗಿದ್ದು ಓರ್ವ ಡಾಕ್ಟರ್!
ಸ್ವಲ್ಪ ಕೂಡ ಮನುಷ್ಯತ್ವವೇ ಇಲ್ಲ ಅನ್ನೋ ರೀತಿ ಹೇಗೆ ಕೊಚ್ಚಿದ್ದಾರೆ. ಒಂದಲ್ಲ, ಎರಡಲ್ಲ, ಬರೊಬ್ಬರಿ 18 ಬಾರಿ ಮಚ್ಚಿನಿಂದ ಮುಖ ಮತ್ತು ಕುತ್ತಿಗೆ ಭಾಗ ಏಟ್ ಹಾಕಿದ್ದಾನೆ. ಮಹಾರಾಷ್ಟ್ರದ ನಾಸಿಕ್ನ ಪಂಚವಟಿ ಪ್ರದೇಶದ ಆಸ್ಪತ್ರೆಯ 48 ವರ್ಷದ ನಿರ್ದೇಶಕ ಡಾ ಕೈಲಾಸ್ ರಾಠಿ ಅನ್ನೋರ ಮೇಲೆ ಈ ದಾಳಿ ನಡೆದಿದೆ. ಇದಕ್ಕೆ ಕಾರಣ ಓರ್ವ ಮಹಿಳೆಯನ್ನ ಕೆಲಸದಿಂದ ತೆಗೆದಿದ್ದು.
ಮಹಿಳೆಯೋರ್ವಳು ಆಸ್ಪತ್ರೆಯ 12 ಲಕ್ಷ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಳು. ಇದರಿಂದ ಆಕೆಯನ್ನ ಕೆಲಸದಿಂದ ತೆಗೆದುಹಾಕಿ, ಹಣ ವಾಪಸ್ ನೀಡುವಂತೆ ಡಾಕ್ಟರ್ ಸೂಚನೆ ನೀಡಿದ್ರು. ಇದ್ರಿಂದ ಕೋಪಗೊಂಡ ಆಕೆಯ ಪತಿ. ಸೀದಾ ಆಸ್ಪತ್ರೆಯ ಐಸಿಯು ವಾರ್ಡ್ಗೆ ನುಗ್ಗು ವೈದ್ಯನ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಿದ್ದಾನೆ. ಈ ದಾಳಿಯಿಂದ ವೈದ್ಯರ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡ್ತಿದ್ದಾರೆ. ಇನ್ನು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಪೋಲಿಸರು ಇಬ್ಬರನ್ನ ವಿಚಾರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತರಕಾರಿ ಕೊಚ್ಚಿದಂತೆ ಡಾಕ್ಟರ್ನನ್ನೇ ಕೊಚ್ಚಿದ
ಜೀವ ಕಾಪಾಡುವ ವೈದ್ಯನ ಮೇಲೆ ಅಟ್ಯಾಕ್!
ಮಚ್ಚಿನಿಂದ ಹಲವು ಬಾರಿ ಕೊಚ್ಚಿ ಹತ್ಯೆಗೆ ಯತ್ನ
ಮುಂಬೈ: ದೇಶ ಎತ್ತ ಸಾಗ್ತಿದೆ. ಅಡುಗೆ ಮನೆಯಲ್ಲಿ ತರಕಾರಿ ಕೊಚ್ಚಿದಂತೆ ಮನುಷ್ಯರನ್ನೇ ಕೊಚ್ಚಿ ಹಾಕ್ತಿರೋ ಪ್ರಕರಣಗಳು ನಡೀತಿವೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಜೀವ ಕಾಪಾಡಬೇಕಾದ ವೈದ್ಯನ ಮೇಲೆಯೇ ಮಚ್ಚು ಮುಗಿಬಿದ್ದಿತ್ತು.
ಮಚ್ಚು ಹಿಡಿದು ತಲೆಗೆ, ಕುತ್ತಿಗೆಗೆ ಹೊಡೆದು ಹಲ್ಲೆ ಮಾಡ್ತಿರೋ ಭೀಭತ್ಸ ಘಟನೆ ನಡೆದಿರೋದು ಮಹಾರಾಷ್ಟ್ರದ ನಾಸಿಕ್ನಲ್ಲಿ. ದುರಂತ ಅಂದ್ರೆ ಈ ಅವಘಡ ಸಂಭವಿಸಿದ್ದು ಹಾಸ್ಪಿಟಲ್ನಲ್ಲಿ.. ಹಲ್ಲೆಗೊಳಗಾಗಿದ್ದು ಓರ್ವ ಡಾಕ್ಟರ್!
ಸ್ವಲ್ಪ ಕೂಡ ಮನುಷ್ಯತ್ವವೇ ಇಲ್ಲ ಅನ್ನೋ ರೀತಿ ಹೇಗೆ ಕೊಚ್ಚಿದ್ದಾರೆ. ಒಂದಲ್ಲ, ಎರಡಲ್ಲ, ಬರೊಬ್ಬರಿ 18 ಬಾರಿ ಮಚ್ಚಿನಿಂದ ಮುಖ ಮತ್ತು ಕುತ್ತಿಗೆ ಭಾಗ ಏಟ್ ಹಾಕಿದ್ದಾನೆ. ಮಹಾರಾಷ್ಟ್ರದ ನಾಸಿಕ್ನ ಪಂಚವಟಿ ಪ್ರದೇಶದ ಆಸ್ಪತ್ರೆಯ 48 ವರ್ಷದ ನಿರ್ದೇಶಕ ಡಾ ಕೈಲಾಸ್ ರಾಠಿ ಅನ್ನೋರ ಮೇಲೆ ಈ ದಾಳಿ ನಡೆದಿದೆ. ಇದಕ್ಕೆ ಕಾರಣ ಓರ್ವ ಮಹಿಳೆಯನ್ನ ಕೆಲಸದಿಂದ ತೆಗೆದಿದ್ದು.
ಮಹಿಳೆಯೋರ್ವಳು ಆಸ್ಪತ್ರೆಯ 12 ಲಕ್ಷ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಳು. ಇದರಿಂದ ಆಕೆಯನ್ನ ಕೆಲಸದಿಂದ ತೆಗೆದುಹಾಕಿ, ಹಣ ವಾಪಸ್ ನೀಡುವಂತೆ ಡಾಕ್ಟರ್ ಸೂಚನೆ ನೀಡಿದ್ರು. ಇದ್ರಿಂದ ಕೋಪಗೊಂಡ ಆಕೆಯ ಪತಿ. ಸೀದಾ ಆಸ್ಪತ್ರೆಯ ಐಸಿಯು ವಾರ್ಡ್ಗೆ ನುಗ್ಗು ವೈದ್ಯನ ಮೇಲೆ ಮಚ್ಚಿನಿಂದ ಅಟ್ಯಾಕ್ ಮಾಡಿದ್ದಾನೆ. ಈ ದಾಳಿಯಿಂದ ವೈದ್ಯರ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡ್ತಿದ್ದಾರೆ. ಇನ್ನು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಪೋಲಿಸರು ಇಬ್ಬರನ್ನ ವಿಚಾರಣೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ