ಎದುರಾಳಿ ಕೊಲೆಗೆ ಸ್ಕೆಚ್ ಹಾಕಿ ರೆಡಿ ಮಾಡಿದ್ದ ಹುಡುಗರಿಂದಲೇ ದಿನೇಶ್ ಕೊಲೆ
ಹಂತಕರ ವಿರುದ್ಧ ಬಾಣಸವಾಡಿ, ರಾಮಮೂರ್ತಿ ಠಾಣೆಯಲ್ಲಿ ಕೇಸ್ ದಾಖಲು
ತನಿಖೆಯಲ್ಲಿ ಬಾಣಸವಾಡಿ ಪೊಲೀಸರಿಗೆ ಆಘಾತಕಾರಿ ಮಾಹಿತಿ ಬಯಲು!
ಬೆಂಗಳೂರು: ರೌಡಿಶೀಟರ್ ದಿನೇಶ್ ಮರ್ಡರ್ ಕೇಸ್ನಲ್ಲಿ ಪೊಲೀಸ್ರು ಬರೋಬ್ಬರಿ 12 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧನವಾಗಿರೋ ಆರೋಪಿಗಳಲ್ಲಿ ಇಬ್ಬರು ರೌಡಿಶೀಟರ್ಸ್ ಎಂದು ತಿಳಿದು ಬಂದಿದೆ. ಇವರು ಹಳೆ ವೈಷಮ್ಯ ಮತ್ತು ಹಣಕಾಸಿನ ವಿಚಾರಕ್ಕಾಗಿ ಕೊಲೆ ಮಾಡಿದ್ದಾಗಿ ಪೊಲೀಸ್ರ ಮುಂದೆ ಹಂತಕರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು, ದಿನೇಶ್ನನ್ನು ಹತ್ಯೆಗೈದ ಹಂತಕರ ವಿರುದ್ಧ ಹಲವಾರು ಕೇಸ್ಗಳಿವೆ. ಕೊತ್ತನೂರು, ಬಾಣಸವಾಡಿ, ರಾಮಮೂರ್ತಿ ನಗರ ಠಾಣೆಯಲ್ಲಿ ಹಲವು ಕೇಸುಗಳು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕೇವಲ ಹಣದ ವಿಚಾರಕ್ಕೆ ನಡೆದಿರೋ ಕೊಲೆಯೋ? ಅಥವಾ ಇದರ ಹಿಂದಿನ ಉದ್ದೇಶವೇನು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಏನಿದು ಕೇಸ್..?
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರೌಡಿ ಶೀಟರ್ ಕಂ ಸುಪಾರಿ ಕಿಲ್ಲರ್ ಆಗಿರೋ ದಿನೇಶ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಸುಪಾರಿ ಕಿಲ್ಲರ್ ಹತ್ಯೆಗೆ ಸ್ಕೆಚ್ ಹೇಗೆ ಹಾಕಲಾಗಿತ್ತು ಎಂಬ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಕೊಲೆಯಾದ ದಿನೇಶ್ ಎದುರಾಳಿ ತಂಡದ ರೌಡಿ ಶೀಟರ್ ದಿಲೀಪ್ ಹತ್ಯೆಗೆ ಸ್ಕೆಚ್ ಹಾಕಿ ತನ್ನ ಟೀಮ್ ಅನ್ನು ರೆಡಿ ಮಾಡಿಕೊಂಡಿದ್ದ. ಆ ಹಿನ್ನೆಲೆಯಲ್ಲಿ ಸತೀಶ್, ಅರವಿಂದ್, ಗೌತಮ್ ಸೇರಿ ಒಟ್ಟು 10 ಜನರನ್ನು ಕರೆಸಿಕೊಂಡಿದ್ದ. ಆದರೆ ಆ 10 ಜನರು ದಿನೇಶ್ನ ವಿರೋಧಿಯಾಗಿರೋ ರೌಡಿ ದಿಲೀಪ್ ಜೊತೆಗೆ ಸಂಪರ್ಕದಲ್ಲಿ ಇದ್ದರು. ವಿಪರ್ಯಾಸ ಎಂದರೆ ಯಾವ ಹುಡುಗರನ್ನು ಕರೆಸಿಕೊಂಡಿದ್ದನೋ ಅದೇ ಗ್ಯಾಂಗ್ನಿಂದ ದಿನೇಶ್ ಕೊಲೆಯಾಗಿದ್ದಾನೆ.
ಇದನ್ನೂ ಓದಿ: ರೌಡಿಶೀಟರ್ ದಿನೇಶ್ ಕೊಲೆ ಕೇಸ್ಗೆ ಹೊಸ ಟ್ವಿಸ್ಟ್.. ಸಿನಿಮೀಯ ರೀತಿ ಸ್ಕೆಚ್ ಹಾಕಿ ಮುಗಿಸಿದ ಹಂತಕರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎದುರಾಳಿ ಕೊಲೆಗೆ ಸ್ಕೆಚ್ ಹಾಕಿ ರೆಡಿ ಮಾಡಿದ್ದ ಹುಡುಗರಿಂದಲೇ ದಿನೇಶ್ ಕೊಲೆ
ಹಂತಕರ ವಿರುದ್ಧ ಬಾಣಸವಾಡಿ, ರಾಮಮೂರ್ತಿ ಠಾಣೆಯಲ್ಲಿ ಕೇಸ್ ದಾಖಲು
ತನಿಖೆಯಲ್ಲಿ ಬಾಣಸವಾಡಿ ಪೊಲೀಸರಿಗೆ ಆಘಾತಕಾರಿ ಮಾಹಿತಿ ಬಯಲು!
ಬೆಂಗಳೂರು: ರೌಡಿಶೀಟರ್ ದಿನೇಶ್ ಮರ್ಡರ್ ಕೇಸ್ನಲ್ಲಿ ಪೊಲೀಸ್ರು ಬರೋಬ್ಬರಿ 12 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧನವಾಗಿರೋ ಆರೋಪಿಗಳಲ್ಲಿ ಇಬ್ಬರು ರೌಡಿಶೀಟರ್ಸ್ ಎಂದು ತಿಳಿದು ಬಂದಿದೆ. ಇವರು ಹಳೆ ವೈಷಮ್ಯ ಮತ್ತು ಹಣಕಾಸಿನ ವಿಚಾರಕ್ಕಾಗಿ ಕೊಲೆ ಮಾಡಿದ್ದಾಗಿ ಪೊಲೀಸ್ರ ಮುಂದೆ ಹಂತಕರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು, ದಿನೇಶ್ನನ್ನು ಹತ್ಯೆಗೈದ ಹಂತಕರ ವಿರುದ್ಧ ಹಲವಾರು ಕೇಸ್ಗಳಿವೆ. ಕೊತ್ತನೂರು, ಬಾಣಸವಾಡಿ, ರಾಮಮೂರ್ತಿ ನಗರ ಠಾಣೆಯಲ್ಲಿ ಹಲವು ಕೇಸುಗಳು ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಕೇವಲ ಹಣದ ವಿಚಾರಕ್ಕೆ ನಡೆದಿರೋ ಕೊಲೆಯೋ? ಅಥವಾ ಇದರ ಹಿಂದಿನ ಉದ್ದೇಶವೇನು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಏನಿದು ಕೇಸ್..?
ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರೌಡಿ ಶೀಟರ್ ಕಂ ಸುಪಾರಿ ಕಿಲ್ಲರ್ ಆಗಿರೋ ದಿನೇಶ್ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಸುಪಾರಿ ಕಿಲ್ಲರ್ ಹತ್ಯೆಗೆ ಸ್ಕೆಚ್ ಹೇಗೆ ಹಾಕಲಾಗಿತ್ತು ಎಂಬ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ಕೊಲೆಯಾದ ದಿನೇಶ್ ಎದುರಾಳಿ ತಂಡದ ರೌಡಿ ಶೀಟರ್ ದಿಲೀಪ್ ಹತ್ಯೆಗೆ ಸ್ಕೆಚ್ ಹಾಕಿ ತನ್ನ ಟೀಮ್ ಅನ್ನು ರೆಡಿ ಮಾಡಿಕೊಂಡಿದ್ದ. ಆ ಹಿನ್ನೆಲೆಯಲ್ಲಿ ಸತೀಶ್, ಅರವಿಂದ್, ಗೌತಮ್ ಸೇರಿ ಒಟ್ಟು 10 ಜನರನ್ನು ಕರೆಸಿಕೊಂಡಿದ್ದ. ಆದರೆ ಆ 10 ಜನರು ದಿನೇಶ್ನ ವಿರೋಧಿಯಾಗಿರೋ ರೌಡಿ ದಿಲೀಪ್ ಜೊತೆಗೆ ಸಂಪರ್ಕದಲ್ಲಿ ಇದ್ದರು. ವಿಪರ್ಯಾಸ ಎಂದರೆ ಯಾವ ಹುಡುಗರನ್ನು ಕರೆಸಿಕೊಂಡಿದ್ದನೋ ಅದೇ ಗ್ಯಾಂಗ್ನಿಂದ ದಿನೇಶ್ ಕೊಲೆಯಾಗಿದ್ದಾನೆ.
ಇದನ್ನೂ ಓದಿ: ರೌಡಿಶೀಟರ್ ದಿನೇಶ್ ಕೊಲೆ ಕೇಸ್ಗೆ ಹೊಸ ಟ್ವಿಸ್ಟ್.. ಸಿನಿಮೀಯ ರೀತಿ ಸ್ಕೆಚ್ ಹಾಕಿ ಮುಗಿಸಿದ ಹಂತಕರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ