/newsfirstlive-kannada/media/post_attachments/wp-content/uploads/2024/10/bbk-1130.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮನೆಯಲ್ಲಿ ಅಚ್ಚರಿಯ ಸಂಗತಿ ನಡೆದಿದೆ. ಯಾವಾಗ ಯಾರು ಬಿಗ್ಬಾಸ್ ಮನೆಯಿಂದ ಅಚ್ಚರಿ ರೀತಿಯಲ್ಲಿ ಆಚೆ ಬರುತ್ತಾರೆ ಅಂತ ಗೊತ್ತಾಗೋದಿಲ್ಲ. ಅದರಲ್ಲೂ ಹಲವಾರು ಅಚ್ಚರಿಯ ಘಟನೆಗಳು ಬಿಗ್ಬಾಸ್ನಲ್ಲಿ ನಡೆದಿದೆ.
ಇದನ್ನೂ ಓದಿ:BIGG BOSS ಡೋರ್ ಉಡೀಸ್ ಮಾಡ್ತೀನಿ ಎಂದಿದ್ದ ಜಗದೀಶ್.. ಕಿಚ್ಚನ ಮಾತಿಗೆ ಫುಲ್ ಸೈಲೆಂಟ್
ಆದರೆ ಈ ಬಾರಿಯ ಬಿಗ್ಬಾಸ್ ಸೀಸನ್ 11ರಲ್ಲಿ ಮತ್ತೊಂದು ಅಚ್ಚರಿಯ ಸಂಗತಿ ನಡೆದಿದೆ. ಹೌದು, ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ಸಂದರ್ಭದಲ್ಲಿ ಗ್ರ್ಯಾಂಡ್ ಆಗಿ ವೇದಿಕೆಗೆ ಆಗಮಿಸಿ, ರಾಯಲ್ ಲುಕ್ನಲ್ಲಿ ಬಿಗ್ಬಾಸ್ ಮನೆಯ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದರಂತೆ ಒಂದು ವಾರ ಬಿಗ್ಬಾಸ್ ಮನೆಯ ಸ್ವರ್ಗದಲ್ಲಿ ಆರಾಮದಾಯಕವಾಗಿ ಇದ್ದುಕೊಂಡಿದ್ದ ಲಾಯರ್ ಜಗದೀಶ್ ಈಗ ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಬಿಗ್ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ ಹಂಸ ಅವರು ತಮ್ಮ ಇಮ್ಯುನಿಟಿ ಮೂಲಕ ಕಿಚ್ಚ ಸುದೀಪ್ ಮುಂದೆಯೇ ನರಕದಲ್ಲಿದ್ದ ಸ್ಪರ್ಧಿ ರಂಜಿತ್ ಅವರನ್ನು ಸ್ವರ್ಗಕ್ಕೆ ಕರೆಸಿಕೊಂಡಿದ್ದರು. ಜೊತೆಗೆ ಸ್ವರ್ಗದಲ್ಲಿ ಕಾಲ ಕಳೆಯುತ್ತಿದ್ದ ಲಾಯರ್ ಜಗದೀಶ್ ಅವರನ್ನು ನೇರವಾಗಿ ನರಕಕ್ಕೆ ಕಳುಹಿಸಲಾಗಿದೆ. ಸದ್ಯ ಮುಂದಿನ ವಾರದವರೆಗೂ ಲಾಯರ್ ಜಗದೀಶ್ ನರಕದಲ್ಲಿ ಹೇಗೆ ಕಾಲ ಕಳೆಯುತ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ