newsfirstkannada.com

ಅಂಜಲಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಹಂತಕನಿಗೆ ಸಹಾಯ ಮಾಡಿದ್ದು ಯಾರು ಗೊತ್ತಾ?

Share :

Published May 30, 2024 at 6:15am

    ಗಿರೀಶ್ ಜೊತೆ ಪೋಕ್ಸೋ ಆರೋಪಿ ಅಂಜಲಿ ಹತ್ಯೆಗೆ ಸಂಚು ರೂಪಿಸಿದ್ರಾ?

    ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು ಹುಬ್ಬಳ್ಳಿ ನೇಹಾ, ಅಂಜಲಿ ಕೊಲೆ ಕೇಸ್​

    2022 ಫೆ.16ರಂದು ವಿಜಯ್ ಹಿರೇಮಠ್ ವಿರುದ್ಧ ಪೋಕ್ಸೋ ಕೇಸ್​ ದಾಖಲು

ಹುಬ್ಬಳ್ಳಿ ನೇಹಾ ಹತ್ಯೆಯ ಬಳಿಕ ಅಂಜಲಿ ಕೊಲೆ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಯುವತಿ ಮನೆಗೆ ನುಗ್ಗಿದ್ದ ಪಾಪಿ ಚಾಕುವಿನಿಂದ ಇರಿದು ಇರಿದು ಕೊಂದು ಬಿಟ್ಟಿದ್ದ. ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು. ಅಂಜಲಿ ಹತ್ಯೆಯ ಹಿಂದೆ ಪೋಕ್ಸೋ ಆರೋಪಿಯ ಕೈವಾಡದ ಶಂಕೆ ಇರೋದು ಪತ್ತೆಯಾಗಿದೆ. ನೇಹಾ ಹತ್ಯೆಯಿಂದ ನೊಂದಿದ್ದ ಹುಬ್ಬಳ್ಳಿ ಜನರಿಗೆ ಅಂಜಲಿ ಹತ್ಯೆ ಮತ್ತೊಂದು ಆಘಾತ ನೀಡಿತ್ತು.

ಇದನ್ನೂ ಓದಿ: ವಿದೇಶದಿಂದ ಬರೋ ಮುನ್ನವೇ ಪ್ರಜ್ವಲ್​ ರೇವಣ್ಣ ಮಾಸ್ಟರ್​ ಪ್ಲಾನ್​​.. ಜಾಮೀನಿಗಾಗಿ ಕೋರ್ಟ್​ ಮೊರೆ!

ಒಂದರ ಹಿಂದೆ ಒಂದು ಹತ್ಯೆ ಕಂಡು ಹುಬ್ಬಳ್ಳಿ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ರು. ಪಾಗಲ್ ಪ್ರೇಮಿಗಳ ಅಟ್ಟಹಾಸಕ್ಕೆ ಎರಡು ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆದಿದ್ವು. ಅದರಲ್ಲೂ ಅಂಜಲಿ ಅಂಬಿಗೇರ್ ಹತ್ಯೆಯಿಂದ ಆಕೆ ಅಜ್ಜಿ ಮತ್ತು ಸಹೋದರಿಯರು ಅಕ್ಷರಶಃ ಕಂಗಲಾಗಿ ಹೋಗಿದ್ರು. ಸದ್ಯ ಅಂಜಲಿ ಕೊಂದ ಆರೋಪಿ ಕಂಬಿ ಹಿಂದೆ ಬಂಧಿಯಾಗಿದ್ದಾನೆ. ಆದರೆ ಇದೀಗ ಈ ಕೇಸ್​ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೊಬ್ಬ ಪೋಕ್ಸೋ ಆರೋಪಿ ಕೊಲೆಗಾರ ಗಿರೀಶ್​ಗೆ ಸಹಾಯ ಮಾಡಿರೋದು ಬೆಳಕಿಗೆ ಬಂದಿದೆ. ಅಂಜಲಿಯನ್ನ ಹತ್ಯೆ ಮಾಡಿರೋ ಗಿರೀಶ್ ಜೊತೆ ಪೋಕ್ಸೋ ಆರೋಪಿ ವಿಜಯ್ ಹಿರೇಮಠ ಎಂಬಾತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ವಿಜಯ ಕೈವಾಡವೂ ಇದ್ಯಾ ಅನ್ನೋ ಅನುಮಾನ ಶುರುವಾಗಿದೆ. ಹತ್ಯೆ ಆರೋಪಿ ಗಿರೀಶ್ ಅಲಿಯಾಸ್ ವಿಶ್ವನ ಜೊತೆ ವಿಜಯ್ ಹಿರೇಮಠ ನಿರಂತರವಾಗಿ ಸಂಪರ್ಕದಲ್ಲಿದ್ನಂತೆ. ಹೀಗಾಗಿ ಅಂಜಲಿ ಹತ್ಯೆಗೆ ಈ ವಿಜಯ್ ಹಿರೇಮಠ ಕುಮ್ಮುಕ್ಕು ನೀಡಿದ್ನಾ ಅನ್ನೋ ಶಂಕೆ ಪೊಲೀಸರಿಗೆ ಕಾಡತೊಡಗಿದೆ.

ಈ ವಿಜಯ್ ಹಿರೇಮಠ್ ವಿರುದ್ಧ 2022 ಫೆಬ್ರುವರಿ 16ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅಜಯ್ ವಿರುದ್ದ ಕೇಸ್ ಹಾಕಲಾಗಿತ್ತು. ಕೇಸ್​ಗೆ ಸಂಬಂಧಿಸಿಂದಂತೆ ವಿಜಯ್​ನನ್ನ ಪೊಲೀಸರು ಅರೆಸ್ಟ್ ಕೂಡ ಮಾಡಿದ್ರು. ಸದ್ಯ ಈ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿದೆ. ಈ ಮಧ್ಯೆ ವಿಜಯ್ ಮೇಲೆ ಅಂಜಲಿ ಹತ್ಯೆಗೆ ಸಹಾಯ ಮಾಡಿರುವ ಆರೋಪವೂ ಕೇಳಿ ಬಂದಿದೆ. ಮೈಸೂರಿನಿಂದ ನಸುಕಿನ ಜಾವ ಹುಬ್ಬಳಿಗೆ ಬಂದಿದ್ದ ಗಿರೀಶ್​ ಅಂಜಲಿ ಜೀವ ತೆಗದು ಪರಾರಿಯಾಗಿದ್ದ. ಆದ್ರೆ ಅಂಜಲಿ ಹತ್ಯೆಯಾದ ದಿನದವರೆಗೂ ವಿಜಯ್ ಹಿರೇಮಠ ಗಿರೀಶ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಈ ಗಿರೀಶ್​​ ಮುಂಚೆ ವಿಜಯ್ ಕೂಡ ಅಂಜಲಿಯನ್ನ ಪ್ರೀತಿ ಮಾಡಿದ್ನಂತೆ. ಆಗ ಅಂಜಲಿಗೆ ಕೇವಲ 17 ವರ್ಷವಿತ್ತಂತೆ ಇದೇ ಕಾರಣಕ್ಕೆ ಅಂಜಲಿ ಕುಟುಂಬದವರು ಪೊಲೀಸ್ ದೂರು ಕೊಟ್ಟಿದ್ರಂತೆ. ಆದ್ರೆ ಇದಾದ ಮೇಲೆ ವಿಜಯ್ ಈ ಕಡೆ ಸುಳಿದಿರಲಿಲ್ಲ. ಆದ್ರೆ ಅಂಜಲಿ ಕೊಲೆಯಾದ ಬಳಿಕ ಈ ವಿಜಯ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಹೀಗಾಗಿ ಗಿರೀಶ್​ಗೆ ವಿಜಯ್​ ಸಹಾಯ ಮಾಡಿರುವ ಅನುಮಾನವಿದೆ. ಮೃತ ಅಂಜಲಿ ಸಹೋದರಿ ಯಶೋದ ವಿಜಯ್ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಅಕ್ಕನ ಹತ್ಯೆ ಹಿಂದೆ ವಿಜಯ್ ಕೈವಾಡವಿದೆ ಅಂತ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ಟೈಟು, ಎಣ್ಣೆ ಏಟಲ್ಲಿ ಫೈಟು! ಸ್ಯಾಂಡಲ್​​ವುಡ್​ ನಿರ್ಮಾಪಕನ ಮೂಗು ಬಗಿದ ಆರೋಪ​

ಇಲ್ಲಿ ಇನ್ನೂ ಒಂದು ವಿಚಾರ ಹೇಳಲೇಬೇಕು. ಈ ವಿಜಯ್ ಹಿರೇಮಠ್ ಈ ಹಿಂದೆ ಹತ್ಯೆಯಾಗಿದ್ದ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಬಳಿ ಆಪ್ತ ಸಹಾಯಕನಾಗಿದ್ನಂತೆ. ಆದ್ರೆ ಅಂಜಲಿ ಹತ್ಯೆಯಾದ ಬಳಿಕ ವಿಜಯ್ ನಾಪತ್ತೆಯಾಗಿದ್ದಾನೆ. ಹೀಗಾಗಿ ನಾಪತ್ತೆಯಾದ ಅಜಯ್​ನ ಪತ್ತೆ ಹಚ್ಚುವಂತೆ ದಲಿತ ಸಂಘಟನೆ ಆಗ್ರಹಿಸಿದ್ದು, ಸಿಐಡಿ ಡಿಜಿಜಿ ಡಾ.ಎಂ.ಎ ಸಲೀಂ ಅವರಿಗೆ ಮನವಿ ಸಲ್ಲಿಸಿದೆ. ಅಂಜಲಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಈ ವಿಜಯ್ ಅಂಜಲಿ ಹತ್ಯೆಗೆ ಸಹಾಯ ಮಾಡಿದ್ನಾ? ಗಿರೀಶ್​ಗೆ ಕುಮ್ಮಕ್ಕು ನೀಡಿದ್ನಾ ಅನ್ನೋದು ತನಿಖೆ ಬಳಿಕವಷ್ಟೆ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಇಂಥಾ ಕೃತ್ಯ ಎಸಗೋ ಪಾಪಿಗಳಿಗೆ ಎಚ್ಚರಿಕೆ ನೀಡಿದಂತಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಜಲಿ ಕೊಲೆ ಕೇಸ್​ಗೆ ಬಿಗ್​ ಟ್ವಿಸ್ಟ್​​.. ಹಂತಕನಿಗೆ ಸಹಾಯ ಮಾಡಿದ್ದು ಯಾರು ಗೊತ್ತಾ?

https://newsfirstlive.com/wp-content/uploads/2024/05/anjali6.jpg

    ಗಿರೀಶ್ ಜೊತೆ ಪೋಕ್ಸೋ ಆರೋಪಿ ಅಂಜಲಿ ಹತ್ಯೆಗೆ ಸಂಚು ರೂಪಿಸಿದ್ರಾ?

    ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು ಹುಬ್ಬಳ್ಳಿ ನೇಹಾ, ಅಂಜಲಿ ಕೊಲೆ ಕೇಸ್​

    2022 ಫೆ.16ರಂದು ವಿಜಯ್ ಹಿರೇಮಠ್ ವಿರುದ್ಧ ಪೋಕ್ಸೋ ಕೇಸ್​ ದಾಖಲು

ಹುಬ್ಬಳ್ಳಿ ನೇಹಾ ಹತ್ಯೆಯ ಬಳಿಕ ಅಂಜಲಿ ಕೊಲೆ ಪ್ರಕರಣ ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಯುವತಿ ಮನೆಗೆ ನುಗ್ಗಿದ್ದ ಪಾಪಿ ಚಾಕುವಿನಿಂದ ಇರಿದು ಇರಿದು ಕೊಂದು ಬಿಟ್ಟಿದ್ದ. ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು. ಅಂಜಲಿ ಹತ್ಯೆಯ ಹಿಂದೆ ಪೋಕ್ಸೋ ಆರೋಪಿಯ ಕೈವಾಡದ ಶಂಕೆ ಇರೋದು ಪತ್ತೆಯಾಗಿದೆ. ನೇಹಾ ಹತ್ಯೆಯಿಂದ ನೊಂದಿದ್ದ ಹುಬ್ಬಳ್ಳಿ ಜನರಿಗೆ ಅಂಜಲಿ ಹತ್ಯೆ ಮತ್ತೊಂದು ಆಘಾತ ನೀಡಿತ್ತು.

ಇದನ್ನೂ ಓದಿ: ವಿದೇಶದಿಂದ ಬರೋ ಮುನ್ನವೇ ಪ್ರಜ್ವಲ್​ ರೇವಣ್ಣ ಮಾಸ್ಟರ್​ ಪ್ಲಾನ್​​.. ಜಾಮೀನಿಗಾಗಿ ಕೋರ್ಟ್​ ಮೊರೆ!

ಒಂದರ ಹಿಂದೆ ಒಂದು ಹತ್ಯೆ ಕಂಡು ಹುಬ್ಬಳ್ಳಿ ಜನ ಅಕ್ಷರಶಃ ಬೆಚ್ಚಿ ಬಿದ್ದಿದ್ರು. ಪಾಗಲ್ ಪ್ರೇಮಿಗಳ ಅಟ್ಟಹಾಸಕ್ಕೆ ಎರಡು ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆದಿದ್ವು. ಅದರಲ್ಲೂ ಅಂಜಲಿ ಅಂಬಿಗೇರ್ ಹತ್ಯೆಯಿಂದ ಆಕೆ ಅಜ್ಜಿ ಮತ್ತು ಸಹೋದರಿಯರು ಅಕ್ಷರಶಃ ಕಂಗಲಾಗಿ ಹೋಗಿದ್ರು. ಸದ್ಯ ಅಂಜಲಿ ಕೊಂದ ಆರೋಪಿ ಕಂಬಿ ಹಿಂದೆ ಬಂಧಿಯಾಗಿದ್ದಾನೆ. ಆದರೆ ಇದೀಗ ಈ ಕೇಸ್​ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೊಬ್ಬ ಪೋಕ್ಸೋ ಆರೋಪಿ ಕೊಲೆಗಾರ ಗಿರೀಶ್​ಗೆ ಸಹಾಯ ಮಾಡಿರೋದು ಬೆಳಕಿಗೆ ಬಂದಿದೆ. ಅಂಜಲಿಯನ್ನ ಹತ್ಯೆ ಮಾಡಿರೋ ಗಿರೀಶ್ ಜೊತೆ ಪೋಕ್ಸೋ ಆರೋಪಿ ವಿಜಯ್ ಹಿರೇಮಠ ಎಂಬಾತ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ವಿಜಯ ಕೈವಾಡವೂ ಇದ್ಯಾ ಅನ್ನೋ ಅನುಮಾನ ಶುರುವಾಗಿದೆ. ಹತ್ಯೆ ಆರೋಪಿ ಗಿರೀಶ್ ಅಲಿಯಾಸ್ ವಿಶ್ವನ ಜೊತೆ ವಿಜಯ್ ಹಿರೇಮಠ ನಿರಂತರವಾಗಿ ಸಂಪರ್ಕದಲ್ಲಿದ್ನಂತೆ. ಹೀಗಾಗಿ ಅಂಜಲಿ ಹತ್ಯೆಗೆ ಈ ವಿಜಯ್ ಹಿರೇಮಠ ಕುಮ್ಮುಕ್ಕು ನೀಡಿದ್ನಾ ಅನ್ನೋ ಶಂಕೆ ಪೊಲೀಸರಿಗೆ ಕಾಡತೊಡಗಿದೆ.

ಈ ವಿಜಯ್ ಹಿರೇಮಠ್ ವಿರುದ್ಧ 2022 ಫೆಬ್ರುವರಿ 16ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಅಜಯ್ ವಿರುದ್ದ ಕೇಸ್ ಹಾಕಲಾಗಿತ್ತು. ಕೇಸ್​ಗೆ ಸಂಬಂಧಿಸಿಂದಂತೆ ವಿಜಯ್​ನನ್ನ ಪೊಲೀಸರು ಅರೆಸ್ಟ್ ಕೂಡ ಮಾಡಿದ್ರು. ಸದ್ಯ ಈ ಪ್ರಕರಣ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿದೆ. ಈ ಮಧ್ಯೆ ವಿಜಯ್ ಮೇಲೆ ಅಂಜಲಿ ಹತ್ಯೆಗೆ ಸಹಾಯ ಮಾಡಿರುವ ಆರೋಪವೂ ಕೇಳಿ ಬಂದಿದೆ. ಮೈಸೂರಿನಿಂದ ನಸುಕಿನ ಜಾವ ಹುಬ್ಬಳಿಗೆ ಬಂದಿದ್ದ ಗಿರೀಶ್​ ಅಂಜಲಿ ಜೀವ ತೆಗದು ಪರಾರಿಯಾಗಿದ್ದ. ಆದ್ರೆ ಅಂಜಲಿ ಹತ್ಯೆಯಾದ ದಿನದವರೆಗೂ ವಿಜಯ್ ಹಿರೇಮಠ ಗಿರೀಶ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಈ ಗಿರೀಶ್​​ ಮುಂಚೆ ವಿಜಯ್ ಕೂಡ ಅಂಜಲಿಯನ್ನ ಪ್ರೀತಿ ಮಾಡಿದ್ನಂತೆ. ಆಗ ಅಂಜಲಿಗೆ ಕೇವಲ 17 ವರ್ಷವಿತ್ತಂತೆ ಇದೇ ಕಾರಣಕ್ಕೆ ಅಂಜಲಿ ಕುಟುಂಬದವರು ಪೊಲೀಸ್ ದೂರು ಕೊಟ್ಟಿದ್ರಂತೆ. ಆದ್ರೆ ಇದಾದ ಮೇಲೆ ವಿಜಯ್ ಈ ಕಡೆ ಸುಳಿದಿರಲಿಲ್ಲ. ಆದ್ರೆ ಅಂಜಲಿ ಕೊಲೆಯಾದ ಬಳಿಕ ಈ ವಿಜಯ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ. ಹೀಗಾಗಿ ಗಿರೀಶ್​ಗೆ ವಿಜಯ್​ ಸಹಾಯ ಮಾಡಿರುವ ಅನುಮಾನವಿದೆ. ಮೃತ ಅಂಜಲಿ ಸಹೋದರಿ ಯಶೋದ ವಿಜಯ್ ಮೇಲೆ ಶಂಕೆ ವ್ಯಕ್ತಪಡಿಸಿದ್ದು, ಅಕ್ಕನ ಹತ್ಯೆ ಹಿಂದೆ ವಿಜಯ್ ಕೈವಾಡವಿದೆ ಅಂತ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ ಟೈಟು, ಎಣ್ಣೆ ಏಟಲ್ಲಿ ಫೈಟು! ಸ್ಯಾಂಡಲ್​​ವುಡ್​ ನಿರ್ಮಾಪಕನ ಮೂಗು ಬಗಿದ ಆರೋಪ​

ಇಲ್ಲಿ ಇನ್ನೂ ಒಂದು ವಿಚಾರ ಹೇಳಲೇಬೇಕು. ಈ ವಿಜಯ್ ಹಿರೇಮಠ್ ಈ ಹಿಂದೆ ಹತ್ಯೆಯಾಗಿದ್ದ ನೇಹಾ ಹಿರೇಮಠ ತಂದೆ ನಿರಂಜನ್ ಹಿರೇಮಠ ಬಳಿ ಆಪ್ತ ಸಹಾಯಕನಾಗಿದ್ನಂತೆ. ಆದ್ರೆ ಅಂಜಲಿ ಹತ್ಯೆಯಾದ ಬಳಿಕ ವಿಜಯ್ ನಾಪತ್ತೆಯಾಗಿದ್ದಾನೆ. ಹೀಗಾಗಿ ನಾಪತ್ತೆಯಾದ ಅಜಯ್​ನ ಪತ್ತೆ ಹಚ್ಚುವಂತೆ ದಲಿತ ಸಂಘಟನೆ ಆಗ್ರಹಿಸಿದ್ದು, ಸಿಐಡಿ ಡಿಜಿಜಿ ಡಾ.ಎಂ.ಎ ಸಲೀಂ ಅವರಿಗೆ ಮನವಿ ಸಲ್ಲಿಸಿದೆ. ಅಂಜಲಿ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಈ ವಿಜಯ್ ಅಂಜಲಿ ಹತ್ಯೆಗೆ ಸಹಾಯ ಮಾಡಿದ್ನಾ? ಗಿರೀಶ್​ಗೆ ಕುಮ್ಮಕ್ಕು ನೀಡಿದ್ನಾ ಅನ್ನೋದು ತನಿಖೆ ಬಳಿಕವಷ್ಟೆ ಗೊತ್ತಾಗಲಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಇಂಥಾ ಕೃತ್ಯ ಎಸಗೋ ಪಾಪಿಗಳಿಗೆ ಎಚ್ಚರಿಕೆ ನೀಡಿದಂತಾಗುತ್ತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More