ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ಆರೋಪ; ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮಾಸ್ಟರ್​​ಮೈಂಡ್..!

author-image
Ganesh
Updated On
ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಸುಪಾರಿ ಆರೋಪ; ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮಾಸ್ಟರ್​​ಮೈಂಡ್..!
Advertisment
  • ರಾಜೇಂದ್ರ ಹತ್ಯೆ ಸುಪಾರಿ ಕೇಸ್​ನ ಎಲ್ಲಾ ಆರೋಪಿಗಳು ಅಂದರ್
  • ಕ್ಯಾತ್ಸಂದ್ರ ಠಾಣೆ ಪೊಲೀಸರ ಮುಂದೆ ಸುಪಾರಿ ಸೋಮ ಸರಂಡರ್​!
  • ಹನಿಟ್ರ್ಯಾಪ್ ಯತ್ನದ ಬಗ್ಗೆ ಹೈಕಮಾಂಡ್​ಗೆ ರಾಜಣ್ಣ ದೂರು!

ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ಎ1 ಆರೋಪಿ ಸೋಮ ಸಹ ಪೊಲೀಸರ ಮುಂದೆ ಶರಣಾಗಿ ಕೇಸ್​ಗೆ ಹೊಸ ಟ್ವಿಸ್ಟ್​ ನೀಡಿದ್ದಾನೆ. ಇತ್ತ ಹನಿಟ್ರ್ಯಾಪ್​ ಹಲ್​ಚಲ್​ ಬಗ್ಗೆ ಹೈಕಮಾಂಡ್​ಗೆ ದೂರು ನೀಡಿರೋ ರಾಜಣ್ಣ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಹಲ್​ಚಲ್​ ಸೃಷ್ಟಿಸಿದ್ದ ಎಂಎಲ್​ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.. ಅವರ ಬಿಟ್ಟು ಇವರ ಬಿಟ್ಟು ಇವಱರು ಅಂತ ಸುಪಾರಿ ಕೇಸ್​ನಲ್ಲಿ ಒಬ್ಬೊಬ್ಬರೇ ಲಾಕ್​ ಆಗ್ತಿದ್ದಾರೆ. ಸದ್ಯ ಸುಪಾರಿ ಕೇಸ್​ನ ಮಾಸ್ಟರ್​ ಮೈಂಡ್​ ಹಾಗೂ ಎ1 ಆರೋಪಿಯಾಗಿರೋ ಸೋಮ ಸಹ ಸರಂಡರ್ ಆಗಿದ್ದಾನೆ.​

publive-image

ಎಲ್ಲಾ ಆರೋಪಿಗಳು ಅಂದರ್!

ಪರಿಷತ್ ಸದಸ್ಯ ಆ‌ರ್. ರಾಜೇಂದ್ರ ಕೊಲೆ ಸಂಚು ಪ್ರಕರಣದ ತನಿಖಾ ತಂಡ ಬದಲಾಗಿದ್ದು ಕಾರ್ಯಾಚರಣೆ ಮಿಂಚಿನ ವೇಗ ಪಡೆದು ಕೊಂಡಿದೆ.. ಇದರ ನಡುವೆ ತಲೆ ಮರೆಸಿಕೊಂಡಿದ್ದ ಎ1 ಆರೋಪಿ ಸೋಮ ಅಲಿಯಾಸ್​​ ಜೈಪುರ ಸೋಮ ಸಹ ತುಮಕೂರಿನ ಕ್ಯಾತ್ಸಂದ್ರ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಆರೋಪಿಗಳಾದ ಸೋಮ ಮತ್ತು ಅಮಿತ್ ಶರಣಾಗಿದ್ದು ಅವರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.. ಈ ಮೂಲಕ ಪ್ರಕರಣದ ಎಲ್ಲಾ ಆರೋಪಿಗಳ ಬಂಧನವಾದಂತಾಗಿದೆ.

ರಾಜೇಂದ್ರ ಹತ್ಯೆಗೆ 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಇನ್ನು ಸೋಮ 5 ಲಕ್ಷ ರೂ. ಅಡ್ವಾನ್ಸ್ ಪಡೆದಿರುವ ಮಾಹಿತಿ ತಿಳಿದುಬಂದಿತ್ತು.. ಹೀಗಾಗಿ ಸುಪಾರಿ ಕೊಟ್ಟಿದ್ಯಾರು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಆಡಿಯೋದಲ್ಲಿ ಮಾತನಾಡಿರುವ ಪುಷ್ಪ ಹಾಗೂ A4 ಆರೋಪಿ ಗುಂಡನಾ ಪ್ರೇಯಸಿ ಯಶೋಧಳನ್ನ ವಶಕ್ಕೆ ಪಡೆಯಲಾಗಿದೆ. ಈ ಇಬ್ಬರಿಂದ ಸಾಕಷ್ಟು ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಧ್ಯರಾತ್ರಿ ಪೈಶಾಚಿಕ ಕೃತ್ಯ.. ಅಣ್ಣನ ಜೊತೆಗೆ ಹೊರಟಿದ್ದ ತಂಗಿಯನ್ನು ಎಳೆದೊಯ್ದು ಅತ್ಯಾಚಾರ!

ಇಂದು ಆರೋಪಿ ಸೋಮ ಹಾಗೂ ಅಮಿತ್​​ನನ್ನ ಮೆಡಿಕಲ್ ಟೆಸ್ಟ್​ಗೆ ಕರೆದೊಯ್ಯಲ್ಲಿರುವ ಪೊಲೀಸರು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಿದ್ದಾರೆ.. ಬಳಿಕ ತುಮಕೂರು ಜಿಲ್ಲಾ ಕೋರ್ಟ್​ಗೆ ಆರೋಪಿಗಳನ್ನ ಹಾಜರು ಪಡಿಸಲಿರುವ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.

ಹೈಕಮಾಂಡ್​ಗೆ ರಾಜಣ್ಣ ದೂರು!

ಇತ್ತ ಪುತ್ರ ರಾಜೇಂದ್ರ ಸುಪಾರಿ ಕೇಸ್​ ಬಗ್ಗೆ ತನಿಖೆ ಚುರುಕುಗೊಂಡಿದ್ರೆ ಅತ್ತ ಸಚಿವ ರಾಜಣ್ಣ ಹನಿಟ್ರ್ಯಾಪ್​ ಯತ್ನದ ಆರೋಪದ ಬಗ್ಗೆ ಹೈಕಮಾಂಡ್​ಗೆ ದೂರು ನೀಡಿದ್ದಾರೆ. ಸಿಎಂ ಮತ್ತು ಡಿಸಿಎಂ ಜೊತೆ ದೆಹಲಿ ಯಾತ್ರೆ ಕೈಗೊಂಡಿರೋ ರಾಜಣ್ಣ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪಿಸಿದರ ಮಾಹಿತಿ ನೀಡಿದ್ರು. ಪಕ್ಷದ ವೇದಿಕೆಯಲ್ಲಿ ಚರ್ಚಿಸದೆ ಸದನದಲ್ಲಿ ಪ್ರಸ್ತಾಪಿಸಿದ್ದಕ್ಕೆ ಹೈಕಮಾಂಡ್ ರಾಜಣ್ಣ ವಿರುದ್ಧ​ ಗರಂ ಆಗಿದ್ದು, ಸದನದಲ್ಲಿ ಹನಿಟ್ರ್ಯಾಪ್ ಪ್ರಸ್ತಾಪದ ಅನಿವಾರ್ಯತೆ ಬಗ್ಗೆ ರಾಜಣ್ಣ ಹೈಕಮಾಂಡ್​ಗೆ ಮನವರಿಕೆ ಮಾಡಿದ್ದಾರೆ.

publive-image

ಒಟ್ನಲ್ಲಿ ಇತ್ತ ಎಂಎಲ್​ಸಿ ರಾಜೇಂದ್ರ ಕೊಲೆ ಸುಪಾರಿ ಪ್ರಕರಣದ ಎಲ್ಲ ಆರೋಪಿಗಳೂ ಪೊಲೀಸರ ಕೈಗೆ ಲಾಕ್ ಆಗಿ ತನಿಕೆ ಚುರುಕುಗೊಂಡಿದೆ. ಅತ್ತ ರಾಜಣ್ಣ ಹನಿಟ್ರ್ಯಾಪ್​ ಯತ್ನದ ಬಗ್ಗೆಯೂ ಹೈಕಮಾಂಡ್​ ಮೊರೆ ಹೋಗಿದ್ದು ಸೂಕ್ತ ತನಿಖೆಗೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ್​, ಉತ್ತರ ಪ್ರದೇಶವೂ ಅಲ್ಲ! ಭಾರತದ ನದಿಗಳ ತವರು ಮನೆ ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment