/newsfirstlive-kannada/media/post_attachments/wp-content/uploads/2025/03/yajamana.jpg)
ಯಜಮಾನ ಧಾರಾವಾಹಿಯಲ್ಲಿ ಸಖತ್ ಟ್ವಿಸ್ಟ್ ಒಂದು ವೀಕ್ಷಕರಿಗೆ ಶಾಕ್ ನೀಡಿತ್ತು. ಇದೇನಿದು ರಾಘು ಗುಟ್ಟು ಇಷ್ಟು ಬೇಗ ಬಯಾಲಾಯ್ತಾ? ಝಾನ್ಸಿ ಮುಖವಾಡ ಕಳಚಿಬಿತ್ತಾ? ಎಂಬ ಕನ್ಫ್ಯೂಷನ್ ಕ್ರಿಯೇಟ್ ಆಗಿತ್ತು. ಒಂದಿಷ್ಟು ಜನ ಇದು ಪಕ್ಕಾ ಕನಸೇ ಅಂತಲೂ ಇದ್ರೂ.. ಮತ್ತೊಂದು ಕಡೆ ವೀಕ್ಷಕರು ರಾಘು ಎಲ್ಲಾ ಸತ್ಯ ಹೇಳಿ ಬಿಡು, ಝಾನ್ಸಿನೇ ಇದಕ್ಕೆಲ್ಲಾ ಕಾರಣ ಅಂತ ಹೇಳು ಮರಾಯ ಅಂತ ರಾಘು ಪರ ಬ್ಯಾಟ್ ಬೀಸಿದ್ದರು.
ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಬಣ್ಣಗಳ ಹಬ್ಬವನ್ನು ಆಚರಿಸೋದಿಲ್ಲ ಏಕೆ? ಇಲ್ಲಿದೆ ಆ ಸೀಕ್ರೆಟ್!
ಅಂತೂ ಇಂತೂ ಇದು ರಾಘು ಭಯದಲ್ಲಿ ಕಾಣ್ತಿರೋ ಕನಸು ಅಂತ ನಿನ್ನೆ ಪ್ರೂವ್ ಆಯ್ತು. ಹೌದು, ಯಜಮಾನ ನಿನ್ನೆಯ ಸಂಚಿಕೆಯಲ್ಲಿ ರಾಘವೇಂದ್ರ ಝಾನ್ಸಿ ಕಾಂಟ್ರಾಕ್ಟ್ ಮದುವೆ ಗುಟ್ಟು ಬಯಲಾಯ್ತು ಅಂದಕೊಂಡಿದ ವೀಕ್ಷಕರಿಗೆ ಇದೊಂದು ಕನಸು ಅಂತ ಗೊತ್ತಾಗಿದೆ. ಈಗ ಇರೋ ಪ್ರಶ್ನೆ ರಾಘು ಹೇಗೆ ಈ ಗುಟ್ಟನ್ನ ಕಾಪಾಡಿಕೊಳ್ತಾನೆ ಅಂತ.
ಝಾನ್ಸಿ ಅಂತೂ ನಯಾ ಪೈಸೆ ರಾಘುಗೆ ಸಾಥ್ ಕೊಡ್ತಿಲ್ಲ. ದುಡ್ಡು ಬಿಸಾಕಿದ್ದೀನಿ ನೀನ್ ಉಂಟು ನಿನ್ನ ಸಮಸ್ಯೆ ಉಂಟು ಅಂತ ಕೈ ಎತ್ತಿದ್ದಾಳೆ. ಪಾಪ ರಾಘು ಭಯದಲ್ಲೇ ಮದುವೆ ಮನೆಯಲ್ಲಿ ಓಡಾಡ್ತಿದ್ದಾನೆ. ಗೆಳಯನ ಸಹಕಾರದಿಂದ ಎರಡೂ ಫ್ಯಾಮಿಲಿನ ಮ್ಯಾನೇಜ್ ಮಾಡ್ತಿದ್ದಾನೆ. ಯಜಮಾನ ಇಂಟ್ರಸ್ಟಿಂಗ್ ಸಂಚಿಕೆಗಳು ಮೂಡಿಬರ್ತಿವೆ. ಈ ನಡುವೆ ಸಮಯ ಬದಲಾಗಿದೆ. ಇಷ್ಟು ದಿನ 10 ಗಂಟೆಗೆ ಪ್ರಸಾರವಾಗ್ತಿದ್ದ ಧಾರಾವಾಹಿ ಇನ್ಮುಂದೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಹಾಗೇ ರಾಮಾಚಾರಿ 10 ಗಂಟೆಗೆ, ವಧು 10.30ಕ್ಕೆ ಪ್ರಸಾರವಾಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ