Advertisment

ಭಾರತೀಯರಿಗೆ ಕೇಂದ್ರದಿಂದ ಭರ್ಜರಿ ಗುಡ್​ನ್ಯೂಸ್​​; ಸದ್ಯದಲ್ಲೇ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿ

author-image
Ganesh Nachikethu
Updated On
ಟೀ ಅಂಗಡಿ ಮಾಲೀಕನಿಗೆ ಬಂಪರ್​​; ಬರೋಬ್ಬರಿ 999 ಕೋಟಿ ರೂ. ಜಮಾ; ಆಮೇಲೇನಾಯ್ತು?
Advertisment
  • ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಗುಡ್​ನ್ಯೂಸ್​​
  • ಜನಸ್ನೇಹಿ ಯೋಜನೆ ಘೋಷಣೆ ಮಾಡಲು ಮುಂದಾದ ಕೇಂದ್ರ!
  • ನಾಗರಿಕರಿಗೆ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗೆ ನಿರ್ಧಾರ

ದೆಹಲಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್​​ನಲ್ಲಿ ಮಧ್ಯಮವರ್ಗದವರಿಗೆ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೇರಿಸಿ ಬಂಪರ್​ ಗಿಫ್ಟ್​ ನೀಡಿತ್ತು. ಈ ಬೆನ್ನಲ್ಲೇ ಜನಸಾಮಾನ್ಯರಿಗೆ ಉಪಯೋಗ ಆಗೋ ಜನಸ್ನೇಹಿ ಯೋಜನೆ ಘೋಷಣೆ ಮಾಡಲು ಮುಂದಾಗಿದೆ.

Advertisment

ಅಸಂಘಟಿತ ವಲಯ ಸೇರಿ ಎಲ್ಲಾ ನಾಗರಿಕರಿಗೆ ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸಾರ್ವತ್ರಿಕ ಪಿಂಚಣಿ ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರ ಈಗಾಗಲೇ ಕೆಲಸ ಮಾಡುತ್ತಿದೆ ಎಂದು ಕಾರ್ಮಿಕ ಸಚಿವಾಲಯದ ಮೂಲಗಳು ತಿಳಿಸಿವೆ.

ಏನಿದು ಸ್ಕೀಮ್​​?

ಸಾರ್ವತ್ರಿಕ ಪಿಂಚಣಿ ಯೋಜನೆ ಸಂಬಳ ಪಡೆಯುವ ಎಲ್ಲಾ ಉದ್ಯೋಗಿಗಳಿಗೂ ಸಿಗಲಿದೆ. ಹಾಗೆಯೇ ಸ್ವಯಂ ಉದ್ಯೋಗಿಗಳಿಗೂ ಮುಕ್ತವಾಗಿರುತ್ತದೆ. ಈ ಹೊಸ ಯೋಜನೆ ಪ್ರಾವಿಡೆಂಟ್​​​ ಫಂಡ್​​ ಆರ್ಗನೈಜೇಷನ್​​ ಅಸ್ತಿತ್ವದಲ್ಲಿರೋ ಎಲ್ಲಾ ಯೋಜನೆಗಳಿಗಿಂತಲೂ ಭಿನ್ನವಾಗಿರಲಿದೆ. ಸಾರ್ವತ್ರಿಕ ಪಿಂಚಣಿ ಯೋಜನೆಯಲ್ಲಿ ಉಳಿತಾಯ ಅಥವಾ ಕೊಡುಗೆ ವ್ಯಕ್ತಿಯ ಆಧಾರದ ಮೇಲೆ ಇರುತ್ತವೆ. ಸರ್ಕಾರದಿಂದ ಯಾವುದೇ ಕೊಡುಗೆ ನೀಡಲಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

ಸಾರ್ವತ್ರಿಕ ಪಿಂಚಣಿ ಯೋಜನೆ ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರ ಬಲವರ್ಧನೆ. ಜತೆಗೆ ಅಸ್ತಿತ್ವದಲ್ಲಿರೋ ಕೆಲವು ಯೋಜನೆಗಳನ್ನು ಸೇರಿಸುವ ಮೂಲಕ ದೇಶದಲ್ಲಿ ಉಳಿತಾಯ ಹೆಚ್ಚಿಸುವುದು. ಇದು ನಾಗರಿಕರಿಗೆ ಸುರಕ್ಷಿತ ಯೋಜನೆ ಆಗಿದೆ.

Advertisment

ಇದನ್ನೂ ಓದಿ:ಪಾಕ್​ ತಂಡದ ಕ್ರಿಕೆಟ್​ ಕೋಚ್​​​ ಆಗೋ ಬಯಕೆ ವ್ಯಕ್ತಪಡಿಸಿದ ಯುವರಾಜ್​ ಸಿಂಗ್​ ತಂದೆ; ಏನಂದ್ರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment