/newsfirstlive-kannada/media/post_attachments/wp-content/uploads/2025/01/Nimisha-1.jpg)
ದೆಹಲಿ: ಯೆಮೆನ್ ನಾಗರಿಕನ ಕೊಂದ ಕೇಸಲ್ಲಿ ಕೇರಳದ ಪಲಕ್ಕಾಡ್ ಮೂಲದ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರನ್ನು ಉಳಿಸಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭಾರತ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೂಚನೆ
ಪ್ರಿಯಾ ರಕ್ಷಣೆಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಶನಲ್ ಆ್ಯಕ್ಷನ್ ಕೌನ್ಸಿಲ್ ಎಂಬ ಸಂಘಟನೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಈ ಕುರಿತು ಗಮನಹರಿಸಿ ಎಂದು ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದ್ದಾರೆ.
ರಕ್ಷಿಸಲು ಇರುವುದೊಂದೇ ಮಾರ್ಗ
ಹತ್ಯೆಗೀಡಾದ ಯೆಮೆನ್ ವ್ಯಕ್ತಿಯ ಕುಟುಂಬದೊಂದಿಗೆ ಸಂಧಾನ ನಡೆಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಬ್ಲಡ್ ಮನಿ ಪಾವತಿ ಮಾಡುವ ಮೂಲಕ ಪ್ರಿಯಾ ಅವರನ್ನು ರಕ್ಷಿಸಬಹುದು ಎಂದು ಕೂಡ ತಿಳಿಸಿದೆ.
ಬ್ಲಡ್ ಮನಿ ಎಂದರೇನು?
ಯೆಮೆನ್ ಅಧ್ಯಕ್ಷ ರಶದ್ ಅಲ್ ಅಲಿಮಿ ಮರಣ ದಂಡನೆ ಘೋಷಿಸಿದ್ದರು. ಪ್ರಿಯಾರನ್ನು ನೇಣುಗಂಬಕ್ಕೆ ಇನ್ನೂ ಏರಿಸದ ಕಾರಣ ಜೀವ ಉಳಿಸಲು ಅವಕಾಶ ಇದೆ. ಆದರೆ, ಮೃತ ವ್ಯಕ್ತಿ ಕುಟುಂಬಸ್ಥರು ಬ್ಲಡ್ ಮನಿಗೆ ಒಪ್ಪಿಗೆ ನೀಡಬೇಕು. ಸಾವಿಗೆ ಹಣದ ರೂಪದಲ್ಲಿ ಕುಟುಂಬಕ್ಕೆ ನೀಡುವ ಪರಿಹಾರವೇ ಬ್ಲಡ್ ಮನಿ. ಇವರು ಒಪ್ಪಿಗೆ ನೀಡಿದಲ್ಲಿ ಮರಣದಂಡನೆ ತಪ್ಪಲಿದೆ. ಯೆಮೆನ್ನಲ್ಲಿ ಶರಿಯಾ ಕಾನೂನು ಇದೆ. ಕಾನೂನಿನಲ್ಲಿ ಬ್ಲಡ್ ಮನಿಗೆ ಅವಕಾಶವಿದೆ. ಯೆಮೆನ್ ಕಾನೂನುಗಳಿಗೆ ಅನುಸಾರವಾಗಿ ಪ್ರಿಯಾಳ ಜೀವವನ್ನು ಉಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ಇದನ್ನೂ ಓದಿ:ನ್ಯೂ ಇಯರ್ಗೆ ಸೇರಿದ್ದ ಜನರ ಮೇಲೆ ಟ್ರಕ್ ಹತ್ತಿಸಿದ ಚಾಲಕ; ಜೀವ ಬಿಟ್ಟ 10 ಮಂದಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ