/newsfirstlive-kannada/media/post_attachments/wp-content/uploads/2024/03/namrutha-8.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ತಮ್ಮ ಜೀವನದಲ್ಲಿ ಒಂದೊಳ್ಳೆ ಇನಿಷಿಯೇಟಿವ್ ತಗೋಳೋದಕ್ಕೆ ಮುಂದಾಗಿದ್ದಾರೆ. ಇಂದು ಮಾರ್ಚ್​ 17. ಸ್ಯಾಂಡಲ್​ವುಡ್​ನ ಪ್ರೀತಿಯ ಪವರ್ ಸ್ಟಾರ್ ಅಪ್ಪು ಅವರ ಹುಟ್ಟುಹಬ್ಬ. ಈ ಸಲುವಾಗಿ ಅವರಿಗೆ ಹಲವಾರು ಕಲಾವಿದರು ಇವತ್ತಿನ ದಿನದಂದು ಬಹಳಷ್ಟು ಒಳ್ಳೆ ಕೆಲಸಗಳನ್ನ ಮಾಡುತ್ತಿದ್ದಾರೆ.
ಇದನ್ನು ಓದಿ: ಗುಡುಗು ಸಮೇತ ಭಾರೀ ಮಳೆ; ಬಿಸಿಲಿನ ಬೇಗೆಗೆ ತತ್ತರಿಸಿದ ಜನರಿಗೆ ತಂಪೆರೆದ ಜಲರಾಯ
/newsfirstlive-kannada/media/post_attachments/wp-content/uploads/2024/03/namrutha-9.jpg)
ಈಗ ಅದೇ ಸಾಲಿನಲ್ಲಿ ನಮ್ರತಾ ಗೌಡ ಕೂಡ ಮಾರ್ಚ್​ 17ರಂದು ಒಂದು ನೂತನ ಕೆಲಸಕ್ಕೆ ಕೈ ಹಾಕಿದ್ದಾರೆ. ಹೌದು, ಪುನೀತ್​ ರಾಜ್​ ಕುಮಾರ್​ ಅವರ ಹುಟ್ಟು ಹಬ್ಬದ ನಿಮಿತ್ತ ಬೀದಿ ಬದಿಯಲ್ಲಿ ಹಸಿವಿನಿಂದ ಬಳಲುವವರಿಗೆ, ಅನಾಥರಿಗೆ, ಎಲ್ಲರಿಗೂ ಹೊಟ್ಟೆ ತುಂಬುವಷ್ಟು ಉಟ ನೀಡಿದ್ದಾರೆ. ಇದು ನಮ್ರತಾ ಅವರೇ ಹೇಳಿರೋ ಹಾಗೆ ಅಪ್ಪು ಸರ್ ಹುಟ್ಟಿದ ಹಬ್ಬ ಪ್ರಯುಕ್ತ ಈ ರೀತಿಯ ಇನಿಷಿಯೇಟಿವ್​ನ ನಾನು ಪ್ರತಿ ತಿಂಗಳು ಮಾಡಬೇಕು ಅಂತಾ ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
View this post on Instagram
ಇನ್ನೂ ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಮ್ರತಾ ಅವರು ಅಪ್ಪು ಅವರ ದೊಡ್ಡ ಅಭಿಮಾನಿ. ಹಾಗಾಗಿನೇ ಈ ರೀತಿಯ ಒಳ್ಳೆ ಉದ್ದೇಶ ಪೂರ್ವಕವಾಗಿರೋ ಕೆಲಸಗಳನ್ನ ವೈಯಕ್ತಿಕವಾಗಿ ಇಂಟ್ರೆಸ್ಟ್ ಕೊಟ್ಟು ಮಾಡುತ್ತಿದ್ದಾರೆ. ನಮ್ರತಾ ಗೌಡ ಅವರ ಈ ಕೆಲಸಕ್ಕೆ ಅಪ್ಪು ಅಭಿಮಾನಿಗಳು ಕೂಡ ಖುಷ್​ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us