BBK11: ಮಿಡ್​ ವೀಕ್​ ಎಲಿಮಿನೇಷನ್​ನಲ್ಲಿ ಬಿಗ್​ ಟ್ವಿಸ್ಟ್ ಕೊಟ್ಟ ಬಿಗ್​ಬಾಸ್​; ಗೌತಮಿ ಆಚೆ ಬಂದ್ರಾ?

author-image
Veena Gangani
Updated On
BBK11: ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್​ ಅಷ್ಟೂ ಸ್ಟ್ರಾಂಗ್ ಆಗಿ ಇರಲು ಕಾರಣ ಏನು?
Advertisment
  • ಸಖತ್​ ಸ್ಟ್ರಾಂಗ್​ ಆಗಿ ಆಡುತ್ತಿದ್ದ ಸ್ಪರ್ಧಿ ಮಿಡ್​ ವೀಕ್​ನಲ್ಲಿ ಆಚೆ ಬಂದ್ರಾ?
  • ಬೆಸ್ಟ್​ ಪರ್ಫಾಮನ್ಸ್​ ನೀಡುತ್ತಿದ್ದ ಗೌತಮಿ ಬಿಗ್​ಬಾಸ್​ನಿಂದ ಔಟ್​ ಆದ್ರಾ?
  • ನಾಮಿನೇಷನ್​ನಿಂದ ಸೇಫ್ ಆಗೋದಕ್ಕೆ ಅವಕಾಶ ಕೊಟ್ಟಿದ್ದ ಬಿಗ್​ಬಾಸ್​

ಕನ್ನಡದ ಬಿಗ್​ಬಾಸ್​ ಸೀಸನ್​ 109ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಅಚ್ಚರಿಯ ರೀತಿಯಲ್ಲಿ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಬಂದಿಲ್ಲ. 108 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ನಿನ್ನೆಯ ಮಿಡ್ ವೀಕ್​ ಎಲಿಮಿನೇಷನ್​ನಲ್ಲಿ ಬಿಗ್​ಬಾಸ್​ ಬಿಗ್​ ಟ್ವಿಸ್ಟ್ ಕೊಟ್ಟಿದ್ದಾರೆ.​ ​

ಇದನ್ನೂ ಓದಿ:BBK11: ನಡು ರಾತ್ರಿ ಬಿಗ್ ಬಾಸ್‌ ಸ್ಪರ್ಧಿಗಳಿಗೆ ಬಿಗ್ ಶಾಕ್‌.. ಮನೆಯಿಂದ ಹೊರ ಬಂದವರು ಯಾರು?

ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮಂದಿ ಗೌತಮಿ ಆಚೆ ಬರುತ್ತಾರೆ ಅಂತ ಗುಸು ಗುಸು ಶುರುವಾಗಿತ್ತು. ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮಿಡ್​ ವೀಕ್​ ಎಲಿಮಿನೇಷನ್​ ಮುಂದೂಡಿಕೆ ಮಾಡಿದ್ದಾರೆ. ಹೀಗಾಗಿ ಸಾಕಷ್ಟು ಊಹಾಪೋಹಗಳಿಗೆ ತೆರೆ ಬಿದ್ದಿದ್ದೆ.

ಕನ್ನಡದ ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್​ ಬಿಗ್​ಬಾಸ್​ ಮನೆಯಲ್ಲಿ ಒಂದು ರೇಂಜ್​ಗೆ ಸೌಂಡ್ ಮಾಡಿದ್ದಾರೆ. ಈ ಹಿಂದೆ ಗೌತಮಿ ಅವರ ಪರ್ಫಾಮನ್ಸ್​ ಖಡಕ್​ ಆಗಿ ಇರಬೇಕು ಅಂತ ವೀಕ್ಷಕರು ಕೂಡ ನಿರೀಕ್ಷಿಸುತ್ತಿದ್ದರು. ಬೆನ್ನಲ್ಲೇ ವೀಕ್ಷಕರ ಕನಸ್ಸನ್ನು ಒಂದು ಮಟ್ಟಿಗೆ ನನಸು ಮಾಡಿದ್ರು. ವೀಕ್ಷಕರು ಸುಮಾರು 3 ವರ್ಷಗಳ ಕಾಲ ಗೌತಮಿ ಅವರನ್ನ ಸತ್ಯನ್ನೋ ಖಡಕ್​ ಪಾತ್ರದಲ್ಲಿಯೇ ನೋಡಿದ್ದಾರೆ. ಯಾವುದೇ ಶೋಗೆ ಬಂದ್ರೂ ಅದೇ ಪಾತ್ರದಲ್ಲಿಯೇ ಎಂಟ್ರಿಯಾಗ್ತಿದ್ರು. ಅಲ್ಲೊಂದು ಇಲ್ಲೊಂದು ಸಂದರ್ಶನವೊಂದರಲ್ಲಿ ಬಿಟ್ಟರೆ ಗೌತಮಿ ನಿಜ ಜೀವನಲ್ಲಿ ಹೇಗಿರ್ತಾರೆ ಅನ್ನೋದು ವೀಕ್ಷಕರಿಗೆ ಗೊತ್ತೇ ಇರಲಿಲ್ಲ.

ಬಿಗ್​ಬಾಸ್​ನಲ್ಲಿ ಗೌತಮಿ ಹೇಗಿದ್ದಾರೆ ಅಂತ ಒಂದು ಮಟ್ಟಿಗೆ ವೀಕ್ಷಕರಿಗೆ ಹಾಗೂ ಅಭಿಮಾನಿಗಳಿಗೆ ಗೊತ್ತಾಗಿತ್ತು. ಗೌತಮಿ ಅವರು ಆಡುವ ಟಾಸ್ಕ್​ ನೋಡಿ ಅಭಿಮಾನಿಗಳು ಖುಷಿ ಆಗಿದ್ದರು. ಟಾಸ್ಕ್​ ಅಂತ ಬಂದರೆ ಅವರು ಎಷ್ಟು ಸ್ಟ್ರಾಂಗ್​ ಆಗಿ ಆಡುತ್ತಾರೆ ಅಂತ ಅದನ್ನು ನೋಡಿದ್ದಾರೆ ಅಭಿಮಾನಿಗಳು. ಮತ್ತೊಂದು ವಿಚಾರ ಎಂದರೆ ಗೌತಮಿ ಅವರು ಅಷ್ಟು ಕೂಲ್​ ಆಗಿ ಇರೋದಕ್ಕೆ ಮುಖ್ಯ ಕಾರಣವೇ ಧ್ಯಾನ. ಬಿಗ್​ಬಾಸ್​ ಮನೆಯಲ್ಲಿ ದೇವರ ವಿಗ್ರಹದ ಮುಂದೆ ಕುಳಿತುಕೊಂಡ ಆಗಾಗ ಧ್ಯಾನ ಮಾಡುತ್ತ ಇರುತ್ತಿದ್ದರು. ಯಾವಾಗಲೂ ಧನಾತ್ಮಕವಾಗಿ ಯೋಚನೆ ಮಾಡುತ್ತಾರೆ. ಹೀಗಾಗಿ ಬಿಗ್​ಬಾಸ್​ ಮನೆಯಲ್ಲಿ ಇಷ್ಟು ದಿನ ಗೌತಮಿ ಅವರು ಏಕಾಗ್ರತೆಯಿಂದ ಇರೋದಕ್ಕೆ ಸಾಧ್ಯವಾಗಿದೆ.

publive-image

ಈ ವಾರ ಬಿಗ್​ಬಾಸ್​ ಸ್ಪರ್ಧಿಗಳಿಗೆ ನಾಮಿನೇಷನ್​ನಿಂದ ಸೇಫ್​ ಆಗಲು ಅವಕಾಶವೊಂದನ್ನು ಕೊಟ್ಟಿದ್ದರು. ಆದ್ರೆ ನಿನ್ನೆಯ ಎಲಿಮಿನೇಷನ್​ನಲ್ಲಿ ಗೌತಮಿ ಅವರು ಕೊನೆಯ ಕ್ಷಣದಲ್ಲಿ ಸೇಫ್​ ಆಗಿದ್ದೀರಿ ಅಂತ ಬಿಗ್​ಬಾಸ್​ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಮಧ್ಯ ರಾತ್ರಿ ನಡೆಯಬೇಕಿದ್ದ ಮೀಡ್​ ವೀಕ್​ ಎಲಿಮಿನೇಷನ್​ ಮುಂದೂಡಿಕೆ ಮಾಡಲಾಗಿದೆ. ಬಿಗ್​ಬಾಸ್​ ಮನೆಯಲ್ಲಿ ಗೌತಮಿ, ಭವ್ಯಾ, ಮೋಕ್ಷಿತಾ, ಧನರಾಜ್​, ತ್ರಿವಿಕ್ರಮ್​, ರಜತ್​ ಹಾಗೂ ಹನುಮಂತ ಉಳಿದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment