‘ನಾನು ಯಾಕೆ ಬಿಗ್​ಬಾಸ್​ ಮನೆಯಿಂದ ಆಚೆ ಬಂದೆ..’ ಅಸಲಿ ಕಾರಣ ಬಿಚ್ಚಿಟ್ಟ ಗೋಲ್ಡ್​ ಸುರೇಶ್

author-image
Ganesh
Updated On
‘ನಾನು ಯಾಕೆ ಬಿಗ್​ಬಾಸ್​ ಮನೆಯಿಂದ ಆಚೆ ಬಂದೆ..’ ಅಸಲಿ ಕಾರಣ ಬಿಚ್ಚಿಟ್ಟ ಗೋಲ್ಡ್​ ಸುರೇಶ್
Advertisment
  • ಬಿಗ್​ಬಾಸ್​ ಮನೆಯಿಂದ ಗೋಲ್ಡ್ ಸುರೇಶ್ ದಿಢೀರ್ ಔಟ್
  • ಶೋ ಅರ್ಧಕ್ಕೆ ನಿಲ್ಲಿಸಿ ಹೊರ ಬಂದಿರೋದ್ರ ಕಾರಣ ರಿವೀಲ್
  • ಸುಳ್ಳು ಸುದ್ದಿ ಹಬ್ಬಿಸುತ್ತಿರೋರಿಗೆ ಶುಭ ಹಾರೈಸಿದ ಗೋಲ್ಡ್ ಸುರೇಶ್

ಬಿಗ್​ಬಾಸ್​ ಗೇಮ್​​ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದ ಗೋಲ್ಡ್​ ಸುರೇಶ್ ಇದ್ದಕ್ಕಿದ್ದಂತೆ ದಿಢೀರ್ ಹೊರಬಂದಿದ್ದರು. ಜನಪ್ರಿಯ ರಿಯಾಲಿಟಿ ಶೋನಿಂದ ಯಾಕೆ ಅರ್ಧಕ್ಕೆ ಬಂದಿದ್ದಾರೆ ಎಂಬ ಕುತೂಹಲ ವೀಕ್ಷಕರಲ್ಲಿ ಇನ್ನೂ ಹಾಗೆಯೇ ಇದೆ. ಖುದ್ದು ಗೋಲ್ಡ್​ ಸುರೇಶ್ ಅವರೇ, ತಾವು ಯಾಕೆ ಬಿಗ್​ಬಾಸ್ ಶೋನಿಂದ ಅರ್ಧಕ್ಕೆ ಹೊರಬಂದೆ ಎಂದು ನ್ಯೂಸ್​ಫಸ್ಟ್​ಗೆ ತಿಳಿಸಿದ್ದಾರೆ.

publive-image

ಆ ಮೂಲಕ ಗೋಲ್ಡ್ ಸುರೇಶ್ ಹಾಗೂ ಅವರ ಕುಟುಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ವದಂತಿಗಳಿಗೆ ತೆರೆ ಬಿದ್ದಿದೆ. ನ್ಯೂಸ್​​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು.. ನಾನೊಬ್ಬ ಬಿಸಿನೆಸ್​ಮ್ಯಾನ್. ನನಗೆ ನನ್ನದೆಯಾದ ಅನೇಕ ಬಿಸಿನೆಸ್​ ಇವೆ. ಬಿಗ್​ಬಾಸ್​ಗೆ ಬರುವುದಕ್ಕೂ ಮೊದಲು ಅದರಲ್ಲಿ ಬಿಸಿಯಿದ್ದೆ. ನನ್ನನ್ನು ನಂಬಿ ಹಲವು ಕುಟುಂಬಗಳು ಇವೆ.

ಇದನ್ನೂ ಓದಿ:BBK11 ಮತ್ತೆ ಹೊತ್ತಿಕೊಂಡ ಬೆಂಕಿ! ಗೌತಮಿಯನ್ನು ಸ್ವಿಮ್ಮಿಂಗ್​ ಪೂಲ್​​ಗೆ ತಳ್ಳಿದ ಮೋಕ್ಷಿತಾ..!

publive-image

ಈ ವಿಚಾರ ನನಗೆ ಗೊತ್ತಿತ್ತು. ಬಿಗ್​ಬಾಸ್​ ಮನೆಗೆ ಹೋಗುವುದಕ್ಕೂ ಮೊದಲು ಈ ಬಗ್ಗೆ ಯೋಚಿಸಿದ್ದೆ. ಬಿಗ್​ಬಾಸ್​​ಗೆ ಹೋದರೆ ಬಿಸಿನೆಸ್​ ಯಾರು ನೋಡಿಕೊಳ್ತಾರೆ ಎಂದು ಚಿಂತಿಸಿದ್ದೆ. ತುಂಬಾ ಯೋಚಿಸಿದ ನಂತರ ಮೊದಲ ಬಾರಿಗೆ ನನ್ನ ಧರ್ಮ ಪತ್ನಿಗೆ ಆ ಜವಾಬ್ದಾರಿ ನೀಡಿದ್ದೆ. ಆಕೆಗೆ ಬುಸಿನೆಸ್​​ನಲ್ಲಿ ಯಾವುದೇ ಅನುಭವ ಇರಲಿಲ್ಲ. ನಾನು ಎಲ್ಲವನ್ನೂ ಒಟ್ಟಿಗೆ ಬಿಟ್ಟು ಹೋಗಿದ್ದರಿಂದ ಅವೆಲ್ಲವನ್ನೂ ನಿಭಾಯಿಸೋದು ಆಕೆಗೆ ಕಷ್ಟವಾಗಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಕೆ ಮಾನಸಿಕವಾಗಿ ಕುಗ್ಗಿ ಹೋದಳು. ಇದರಿಂದ ನಾನು ಬಿಗ್​ಬಾಸ್​ ಮನೆಯಿಂದ ಆಚೆ ಬಂದೆ ಎಂದಿದ್ದಾರೆ.

publive-image

ಬಿಗ್​ಬಾಸ್​ ಮನೆಯಿಂದ ಆಚೆ ಬಂದಿರೋ ಬಗ್ಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿರೋರ ಬಗ್ಗೆ ಪ್ರತಿಕ್ರಿಯಿಸಿ.. ಹಾಗೆಲ್ಲ ಮಾಡುತ್ತಿರೋರು ಕೂಡ ನನ್ನ ಸ್ನೇಹಿತರೇ ಎಂದು ಭಾವಿಸುತ್ತೇನೆ. ನನ್ನ ಸ್ನೇಹಿತರಿಗೆ ಒಳ್ಳೆಯದಾಗಲಿ. ನನ್ನ ಜೊತೆಗೆ ಇರೋರೇ ಹಾಗೆ ಮಾಡಿರಬಹುದು. ಯಾರು ಮಾಡಿದ್ದಾರೋ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ:BBK11: ಸ್ಪರ್ಧಿಗಳಿಗೆ ಕಾದಿದ್ಯಾ ಬಿಗ್ ಶಾಕ್​​; ತಮ್ಮನ್ನೇ ತಾವೇ ನಾಮಿನೇಟ್​ ಮಾಡಿಕೊಂಡಿದ್ದೇಕೆ ತ್ರಿವಿಕ್ರಮ್?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment