/newsfirstlive-kannada/media/post_attachments/wp-content/uploads/2024/10/jagadish5.jpg)
- ಏಕಾಏಕಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದೇಕೆ ಈ ಸ್ಪರ್ಧಿ
- ಬಿಗ್ಬಾಸ್ ಮನೆಗೆ ಅಚ್ಚರಿಯ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದ ಜಗದೀಶ್
- ಬಿಗ್ಬಾಸ್ನಿಂದ ಆಚೆ ಬಂದ ಬೆನ್ನಲ್ಲೇ ಸಾಕಷ್ಟು ಫ್ಯಾನ್ಸ್ ಗಳಿಸಿದ ಲಾಯರ್
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11ರಿಂದ ಇತ್ತೀಚೆಗಷ್ಟೇ ಲಾಯರ್ ಜಗದೀಶ್​ ಆಚೆ ಬಂದಿದ್ದರು. ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಗ್ರ್ಯಾಂಡ್​ ಆಗಿ ಒಪನಿಂಗ್​ ದಿನ ವೇದಿಕೆಗೆ ಅಚ್ಚರಿಯ ರೀತಿಯಲ್ಲಿ ಜಗದೀಶ್ ಎಂಟ್ರಿ ಕೊಟ್ಟಿದ್ದರು.
ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಲಾಯರ್​ ಜಗದೀಶ್​ ಒಂದು ಹವಾ ಕ್ರಿಯೇಟ್ ಮಾಡಿದ್ದರು. ಇದರಿಂದಲೇ ಕ್ರಶ್​ ಆಫ್​ ಕರ್ನಾಟಕ ಪಟ್ಟ ಕೂಡ ಗಿಟ್ಟಿಸಿಕೊಂಡಿದ್ದರು. ಆದರೆ ನಿನ್ನೆ ಬಿಗ್​ಬಾಸ್​ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಗ್​ಬಾಸ್​ ನಟ ರಂಜಿತ್ ಹಾಗೂ ಲಾಯರ್ ಜಗದೀಶ್​ ಅವರನ್ನು ಬಿಗ್​ಬಾಸ್​ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಬಿಗ್​ಬಾಸ್ ಮನೆಯಿಂದ ಆಚೆ ಬಂದ ಬಳಿಕ ಲಾಯರ್​ ಜಗದೀಶ್​ ಅವರು ಕಲರ್ಸ್ ವಾಹಿನಿಯ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.
ಹೌದು, ಈ ಹಿಂದೆ ಜಗದೀಶ್​ ಅವರ ಪತ್ನಿ ಸೌಮ್ಯಾ ಜಗದೀಶ್ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಸವಿರುಚಿ ಸೀಸನ್​ 3ಗೆ ಬಂದಿದ್ದರು. ಇದೀಗ ಲಾಯರ್​ ಜಗದೀಶ್ ಸವಿರುಚಿಗೆ ಎಂಟ್ರಿ ಕೊಟ್ಟಿದ್ದಾರೆ. ಸವಿರುಚಿ ಕಾರ್ಯಕ್ರಮ ಜನಪ್ರಿಯ ಅಡುಗೆ ಕಾರ್ಯಕ್ರಮವಾಗಿದೆ. ಇದೇ ಸವಿರುಚಿ ಕಾರ್ಯಕ್ರಮಕ್ಕೆ ಆಗಮಿಸಿದ ಲಾಯರ್ ರುಚಿ-ರುಚಿಯಾದ ಅಡುಗೆ ಮಾಡಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಅನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ. ಇದೇ ಸವಿರುಚಿಗೆ ಬಂದ ಲಾಯರ್​ ಯಾವ ರೆಸಿಪಿ ಮಾಡಿದ್ದಾರೆ ಅಂತ ಚಾನೆಲ್​ ಬಿಟ್ಟುಕೊಟ್ಟಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ