/newsfirstlive-kannada/media/post_attachments/wp-content/uploads/2024/10/Dhanraj-achar-BBK11-4.jpg)
ಬಿಗ್​ ಬಾಸ್​​ ಸೀಸನ್​ 11 ಬಾರಿ ಕುತೂಹಲದಿಂದ ಸಾಗುತ್ತಿದೆ. ಇದರ ನಡುವೆ ಬಿಗ್​ ಬಾಸ್​ ಮಾಡಿದ ಕರೆ ಸ್ಪರ್ಧಿಗಳಿಗೆ ಶಾಕ್​ ನೀಡಿದರೆ, ಅತ್ತ ನಾನು ಈ ಮನೆಯಿಂದ ಹೊರಟು ಹೋಗುತ್ತೇನೆ ಎಂಬ ಮಾತು ಎಲ್ಲರನ್ನು ತಲೆ ಕೆಡಿಸುವಂತೆ ಮಾಡಿದೆ. ಇದರ ನಡುವೆ ಕ್ಯಾಪ್ಟನ್​ ಶಿಶರ್​ಗೆ ಬಿಗ್​ ಬಾಸ್​ ನಾಮಿನೇಟ್​ ಮಾಡುವ ಆಯ್ಕೆಯೊಂದನ್ನು ನೀಡಿದ್ದು, ಈ ವೇಳೆ ಧನ್​ರಾಜ್​ ಆಚಾರ್​ ಅವರನ್ನು ನಾಮಿನೇಟ್​ ಮಾಡಿದ್ದಾರೆ.
ಧನ್​ರಾಜ್​ ಆಚಾರ್​ ಅವರನ್ನು ನಾಮಿನೇಟ್​ ಮಾಡಿದ ಬಳಿಕ ಅವರು ಬಿಗ್​ ಬಾಸ್​ ಮನೆಯಲ್ಲಿ ಇನ್ನೂ ಕನ್ಫ್ಯೂಶನ್​ನಲ್ಲಿ ಇದ್ದಾರೆ. ಆಟಗಾರನೋ? ಅಥವಾ ಅತಿಥಿಯೋ? ಎಂಬ ಗೊಂದಲದಲ್ಲಿ ಇದ್ದಾರೆ ಎಂದು ಶಿಶಿರ್​ ಕಾರಣ ತಿಳಿಸಿದ್ದಾರೆ.
ಇದನ್ನೂ ಓದಿ: ದರ್ಶನ್​ಗೆ ಯಾಕೆ ಸಿಕ್ಕಿಲ್ಲ ಬೇಲ್​? ಜಾಮೀನು ನಿರಾಕರಿಸಲು ಇದೇನಾ ಕಾರಣ!
ಬಳಿಕ ಮನೆ ಮಂದಿಯ ಮುಂದೆ ಈ ವಿಚಾರವನ್ನು ತಿಳಿಸುತ್ತಾ, ಧನ್​ರಾಜ್​ ಮುಂದೆಯೇ ನೀವು ಎಲ್ಲೋ ಕಳೆದು ಹೋಗಿದ್ದೀರಾ ಎಂಬುದು ನನ್ನ ಅನಿಸಿಕೆ ಎಂದು ಶಿಶಿರ್​ ಹೇಳಿದ್ದಾರೆ.
ಅತಿಥಿಯೋ, ಆಟಗಾರನೋ? ಫುಲ್ ಕನ್ಫ್ಯೂಶನ್ !
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/bXav8KymaC
— Colors Kannada (@ColorsKannada)
ಅತಿಥಿಯೋ, ಆಟಗಾರನೋ? ಫುಲ್ ಕನ್ಫ್ಯೂಶನ್ !
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/bXav8KymaC— Colors Kannada (@ColorsKannada) October 15, 2024
">October 15, 2024
ಇದನ್ನೂ ಓದಿ: ಜಾಮೀನಿಗಾಗಿ ದರ್ಶನ್​ ಮತ್ತೆ ಸರ್ಕಸ್​! ಮುಂದಿರೋ ಆಯ್ಕೆಗಳು ಬರೀ ಮೂರು! ಸಿಗುತ್ತಾ ಬೇಲು?
ಶಿಶಿರ್​ ಮಾಡಿರುವ ನಾಮಿನೇಟ್​ ಪ್ರಕ್ರಿಯೆಯಿಂದ ಟೆನ್ಶನ್​ಗೆ ಒಳಗಾದ ಧನ್​ರಾಜ್​ ಒಬ್ಬರೇ ಕುಳಿತು ಕಣ್ಣೀರು ಹಾಕಿದ್ದಾರೆ. ನಾನೇ ಅನ್​ಫಿಟ್​ ಅನಿಸೋಕೆ ಶುರುವಾಗಿ ಹೋಗಿದೆ ಎಂದು ಹೇಳಿದ್ದಾರೆ. ಈ ವೇಳೆ ಹಂಸಾ ಮತ್ತು ಐಶ್ವರ್ಯಾರವರು ಧನ್​ರಾಜ್​ ಕಣ್ಣೀರು ಹಾಕೋದನ್ನು ನೋಡಿ ಸಮಾಧಾನ ಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us