/newsfirstlive-kannada/media/post_attachments/wp-content/uploads/2024/10/jagadish-BBK11-1.jpg)
ಬಿಗ್​​ ಬಾಸ್​ ಸೀಸನ್​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ದಿನವೂ ಜಗಳ, ಕೂಗಾಟ, ಕಣ್ಣೀರು ಕಾಣಿಸುತ್ತಿದೆ. ಇದೀಗ ಲಾಯರ್​ ಜಗದೀಶ್​​ ಕೂಡ ದೊಡ್ಮನೆಯಲ್ಲಿ ಕಣ್ಣೀರು ಸುರಿಸಿದ್ದಾರೆ. ಸದ್ಯ ಅವರ ಕಣ್ಣೀರಿಗೆ ಕಾರಣರಾದವರು ಯಾರು? ಇಲ್ಲಿದೆ ಓದಿ.
ಲಾಯರ್​​ ಜಗದೀಶ್​ ಮತ್ತು ಐಶ್ವರ್ಯಾರವರು ಬಿಗ್​ ಬಾಸ್​​ ಮನೆಯಲ್ಲಿ ತಮ್ಮ ಪೋಷಕರನ್ನು ನೆನೆಸಿಕೊಂಡಿದ್ದಾರೆ. ಜಗದೀಶ್​​ ತನ್ನ ತಾಯಿ-ತಂದೆಯನ್ನು ನೆನೆದು, ನಾನು ತುಂಬಾ ಲಕ್ಕಿ. ಆದ್ರೆ ತುಂಬಾ ದಿನ ಇರಲಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಕೆಂಡಸಂಪಿಗೆ ಸೀರಿಯಲ್ ಬಗ್ಗೆ ನಟಿ ಅಮೃತಾ ರಾಮಮೂರ್ತಿ ಪೋಸ್ಟ್​; ಏನದು?
ಜಗದೀಶ್​​ ಕಣ್ಣೀರು ಸುರಿಸಿದ್ದನ್ನು ಕಂಡು ಐಶ್ವರ್ಯಾ ಸಮಧಾನ ಪಡಿಸಿದ್ದಾರೆ. ನನಗೂ ನಿಮ್ಮಹಾಗೆಯೇ ಆಗಿತ್ತು. ನಿಮ್ಮಷ್ಟು ಅನುಭವ ಇಲ್ಲದೆ ಇರಬಹುದು. ಚಿಕ್ಕ ವಯಸ್ಸಿನಲ್ಲೇ ಬೇರೆಯೇ ಅನುಭವ ಅನುಭವಿಸಿದ್ದೇನೆ. ಕೈ ಹಿಡಿದು ನಡೆಸೋಕೆ ಯಾರು ಬರಲಿಲ್ಲ. ಅದಕ್ಕೆ ಆ ಸಮಯದಲ್ಲಿ ಸಿವಿಕ್​ ಸೆನ್ಸ್​ ಮತ್ತು ಎಜುಕೇಶನ್​ ಹೆಲ್ಪ್​ ಆಗುತ್ತೆ ಎಂದು ಹೇಳಿದ್ದಾರೆ.
View this post on Instagram
ಇದನ್ನೂ ಓದಿ: ಭರತನಾಟ್ಯ ಮಾಡುತ್ತಾ ಬಂದ ಸಂಗೀತಾ ಶೃಂಗೇರಿ; ಧರೆಗಿಳಿದ ದೇವತೆ ನೀವು ಎಂದ ಫ್ಯಾನ್ಸ್
ಅಂದಹಾಗೆಯೇ ಬಿಗ್​ ಬಾಸ್​ ಪ್ರಾರಂಭವಾಗಿ ಮೊದಲ ವಾರಂತ್ಯದತ್ತ ಬರುತ್ತಿದೆ. ಅಭಿಮಾನಿಗಳು ಕಿಚ್ಚನ ಪಂಚಾಯ್ತಿ ಕಾಣಲು ಎದುರು ನೋಡುತ್ತಿದ್ದಾರೆ. ಅದರಲ್ಲೂ ಸ್ಪರ್ಧಿಗಳ ನಡತೆ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲತೆ ಎಲ್ಲರಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ