Bigg Boss ಮನೆಯಲ್ಲಿ ಕಣ್ಣೀರು ಹಾಕಿದ ಲಾಯರ್​ ಜಗದೀಶ್​​.. ಅವರನ್ನ ಸಮಾಧಾನ ಮಾಡಿರೋದು ಯಾರು?

author-image
AS Harshith
Updated On
ಎಲ್ಲೆಲ್ಲೂ ಲಾಯರ್ ಜಗದೀಶ್ ಬಗ್ಗೆ ಮಾತುಕಥೆ; ಕಿಚ್ಚನ ಪಂಚಾಯ್ತಿಯಲ್ಲಿ ಕಾದಿದ್ಯಾ ಮಾರಿಹಬ್ಬ
Advertisment
  • ಭಾರೀ ಕುತೂಹಲದಿಂದ ಸಾಗುತ್ತಿದೆ BBK11
  • ಲಾಯರ್​ ಜಗದೀಶ್​​ ಕಣ್ಣೀರಿಗೆ ಕಾರಣ ಯಾರು?
  • ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿನ ಕಂಬನಿ ಸುರಿಸಿದ ಜಗದೀಶ್​

ಬಿಗ್​​ ಬಾಸ್​ ಸೀಸನ್​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ದಿನವೂ ಜಗಳ, ಕೂಗಾಟ, ಕಣ್ಣೀರು ಕಾಣಿಸುತ್ತಿದೆ. ಇದೀಗ ಲಾಯರ್​ ಜಗದೀಶ್​​ ಕೂಡ ದೊಡ್ಮನೆಯಲ್ಲಿ ಕಣ್ಣೀರು ಸುರಿಸಿದ್ದಾರೆ. ಸದ್ಯ ಅವರ ಕಣ್ಣೀರಿಗೆ ಕಾರಣರಾದವರು ಯಾರು? ಇಲ್ಲಿದೆ ಓದಿ.

ಲಾಯರ್​​ ಜಗದೀಶ್​ ಮತ್ತು ಐಶ್ವರ್ಯಾರವರು ಬಿಗ್​ ಬಾಸ್​​ ಮನೆಯಲ್ಲಿ ತಮ್ಮ ಪೋಷಕರನ್ನು ನೆನೆಸಿಕೊಂಡಿದ್ದಾರೆ. ಜಗದೀಶ್​​ ತನ್ನ ತಾಯಿ-ತಂದೆಯನ್ನು ನೆನೆದು, ನಾನು ತುಂಬಾ ಲಕ್ಕಿ. ಆದ್ರೆ ತುಂಬಾ ದಿನ ಇರಲಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಕೆಂಡಸಂಪಿಗೆ ಸೀರಿಯಲ್‌ ಬಗ್ಗೆ ನಟಿ ಅಮೃತಾ ರಾಮಮೂರ್ತಿ ಪೋಸ್ಟ್​; ಏನದು?

ಜಗದೀಶ್​​ ಕಣ್ಣೀರು ಸುರಿಸಿದ್ದನ್ನು ಕಂಡು ಐಶ್ವರ್ಯಾ ಸಮಧಾನ ಪಡಿಸಿದ್ದಾರೆ. ನನಗೂ ನಿಮ್ಮಹಾಗೆಯೇ ಆಗಿತ್ತು. ನಿಮ್ಮಷ್ಟು ಅನುಭವ ಇಲ್ಲದೆ ಇರಬಹುದು. ಚಿಕ್ಕ ವಯಸ್ಸಿನಲ್ಲೇ ಬೇರೆಯೇ ಅನುಭವ ಅನುಭವಿಸಿದ್ದೇನೆ. ಕೈ ಹಿಡಿದು ನಡೆಸೋಕೆ ಯಾರು ಬರಲಿಲ್ಲ. ಅದಕ್ಕೆ ಆ ಸಮಯದಲ್ಲಿ ಸಿವಿಕ್​ ಸೆನ್ಸ್​ ಮತ್ತು ಎಜುಕೇಶನ್​ ಹೆಲ್ಪ್​ ಆಗುತ್ತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭರತನಾಟ್ಯ ಮಾಡುತ್ತಾ ಬಂದ ಸಂಗೀತಾ ಶೃಂಗೇರಿ; ಧರೆಗಿಳಿದ ದೇವತೆ ನೀವು ಎಂದ ಫ್ಯಾನ್ಸ್

ಅಂದಹಾಗೆಯೇ ಬಿಗ್​ ಬಾಸ್​ ಪ್ರಾರಂಭವಾಗಿ ಮೊದಲ ವಾರಂತ್ಯದತ್ತ ಬರುತ್ತಿದೆ. ಅಭಿಮಾನಿಗಳು ಕಿಚ್ಚನ ಪಂಚಾಯ್ತಿ ಕಾಣಲು ಎದುರು ನೋಡುತ್ತಿದ್ದಾರೆ. ಅದರಲ್ಲೂ ಸ್ಪರ್ಧಿಗಳ ನಡತೆ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲತೆ ಎಲ್ಲರಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment