/newsfirstlive-kannada/media/post_attachments/wp-content/uploads/2024/08/SUDEEP.jpg)
Bigg Boss Kannada: ಕಿಚ್ಚ ಸುದೀಪ್​ ನಿನ್ನೆ ಬಿಗ್​ ಬಾಸ್​ ವೀಕ್ಷಕರಿಗೆ ಶಾಕ್​ ನೀಡಿದ್ದಾರೆ. ಸೀಸನ್​ 1 ರಿಂದ 11ರವರೆಗೆ ಕಾರ್ಯಕ್ರಮ ನಿರೂಪಿಸುತ್ತಾ ಬಂದಿರುವ ಸುದೀಪ್​ ಇದೇ ನನ್ನ ಕೊನೆಯ ನಿರೂಪಣೆ ಎಂದು ಹೇಳಿದ್ದಾರೆ. ಆ ಮೂಲಕ ಫ್ಯಾನ್ಸ್​ಗೂ ಶಾಕ್​ ನೀಡಿದ್ದಾರೆ. ಆದರೆ ಇದೀಗ ಬಿಗ್​ ಬಾಸ್​ ಕೂಡ ಅಚ್ಚರಿಯ ಮಾತೊಂದನ್ನ ಆಡಿದ್ದಾರೆ. ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಹೌದು. ಬೆಳ್ಳಂಬೆಳಗ್ಗೆ ಬಿಗ್​ ಬಾಸ್ ಫೋನ್​ ಕರೆ ಮಾಡಿದ್ದು, ಅತ್ತ ಮನೆಯ ಕ್ಯಾಪ್ಟನ್​ ಶಿಶಿರ್​ ಫೋನ್​ ಸ್ವೀಕರಿಸಿದ್ದಾರೆ​. ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ, ಥ್ಯಾಂಕ್ಯೂ ವೆರಿ ಮಚ್​ ಎಂದು ಬಿಗ್​ ಬಾಸ್​ ಹೇಳಿದ್ದಾರೆ. ಅದಕ್ಕೆ ಉತ್ತರವಾಗಿ ಶಿಶಿರ್​ ಥ್ಯಾಂಕ್ಯೂ ಬಿಗ್​ ಬಾಸ್​ ಎಂದಿದ್ದಾರೆ.
ಶಿಶಿರ್​ ಮಾತಿಗೆ ಕೋಪಗೊಂಡ ಬಿಗ್​ ಬಾಸ್​ ಏನು ಥ್ಯಾಂಕ್ಯೂ ಹೇಳುತ್ತಿದ್ದೀರಲ್ಲ. ಉಡಾಫೆತನ ಅಪ್ರಮಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಸ್​ ಬಾಸ್​ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಬಿಗ್ ಬಾಸೇ ಮನೆಯಿಂದ ಹೊರಬಂದ್ರೆ, ಮುಂದೇನು?
"ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepa" pic.twitter.com/6z5wUH0y5m
— Colors Kannada (@ColorsKannada)
ಬಿಗ್ ಬಾಸೇ ಮನೆಯಿಂದ ಹೊರಬಂದ್ರೆ, ಮುಂದೇನು?
"ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepa" pic.twitter.com/6z5wUH0y5m— Colors Kannada (@ColorsKannada) October 14, 2024
">October 14, 2024
ಸದ್ಯ ಮನೆಯ ಕ್ಯಾಪ್ಟನ್​ ಮಾತ್ರವಲ್ಲ ಎಲ್ಲರಿಗೂ ಬಿಗ್​ ಬಾಸ್​ ಮಾತು ಶಾಕ್​ ನೀಡಿದಂತಾಗಿದೆ. ಅದರಲ್ಲೂ ಮನೆಯಿಂದ ಹೊರಹೋಗುತ್ತಿದ್ದೇನೆ, ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂಬ ಮಾತು ಅಚ್ಚರಿಗೆ ಕಾರಣವಾಗಿದೆ. ಆದರೆ ಇದಕ್ಕೆಲ್ಲ ಇಂದಿನ ಎಪಿಸೋಡ್​ನಲ್ಲಿ​ ಉತ್ತರ ಸಿಗಲಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us