newsfirstkannada.com

BBK10: ಬಿಗ್​ ಬಾಸ್​ ಮನೆಯಲ್ಲಿ ರೇಡಿಯೋ ಪ್ರೋಗ್ರಾಂ .. ರೇಡಿಯೋ ಜಾಕಿಯಾದ ತುಕಾಲಿ, ಕಾರ್ತಿಕ್​!

Share :

Published January 25, 2024 at 2:42pm

Update January 25, 2024 at 2:43pm

    ರೇಡಿಯೋ ಜಾಕಿಯಾದ ತುಕಾಲಿ ಸಂತೋಷ್​

    ಸಂಗೀತಾ ಶೃಂಗೇರಿಗೆ ಹೆಂಗೆ ಪಂಚ್​ ಕೊಟ್ರು ಗೊತ್ತಾ?

    ಸಂಗೀತಾ ದೊಡ್ಡ ತಲೆ ನೋವಂತೆ! ಯಾರು ಹೇಳಿದ್ದು?

ಬಿಗ್​ ಬಾಸ್​​ ಸ್ಪರ್ಧಿಗಳು ರೇಡಿಯೋ ಜಾಕಿಯಾದರೆ ಹೇಗಿರುತ್ತೆ? ಇಂತಹದೊಂದು ಅವಕಾಶವನ್ನ ಬಿಗ್​ ಬಾಸ್​ ತೆರೆದಿಟ್ಟಿದ್ದಾರೆ. ಫಿನಾಲೆ ವಾರದಲ್ಲಿ ಕಾಲ ಕಳೆಯುತ್ತಿರುವ ಮನೆಯ ಸ್ಪರ್ಧಿಗಳಿಗೆ ರೆಡಿಯೋ ಜಾಕಿಯಾಗಲು ಅವಕಾಶ ನೀಡಿದ್ದಾರೆ.

ಕಾರ್ತಿಕ್​ ಮತ್ತು ತುಕಾಲಿ ರೆಡಿಯೋ ಜಾಕಿಯಾಗಿ ಸಹ ಸ್ಪರ್ಧಿಗಳನ್ನು ಮಾತನಾಡಿಸುವುದರ ಜೊತೆಗೆ ನಗೆಗಡಲಲ್ಲಿ ತೇಲಾಡುವಂತೆ ಮಾಡಿದ್ದಾರೆ. ಅದರಲ್ಲೂ ತುಕಾಲಿಯಂತು ತಮಾಷೆಯಾಗಿ ಮಾತನಾಡಿದ್ದಾರೆ. ಇವರ ಮಾತಿಗೆ ಮನೆಯಲ್ಲಿ ಸಹ ಸ್ಪರ್ಧಿಯ ಮುಖದಲ್ಲಿ ನಗು ತಂದಿದ್ದಾರೆ.

ತುಕಾಲಿ ಸಂತೋಷ್​ ವರ್ತೂರನ್ನು ಮಾತನಾಡಿಸಿದ್ದು, ಈ ವೇಳೆ ಸಂಗೀತಾ ಬರೀ ಅವರನ್ನೇ ಮಾತನಾಡಿಸೋದ ಎಂದು ಕೇಳಿದ್ದಾರೆ. ಅತ್ತ ಕಾರ್ತಿಕ್​ಗೂ ತುಕಾಲಿ ಪ್ರಶ್ನೆ ಕೇಳಿದ್ದು, ‘ತಲೆ ನೋವು’ ಟೈಟಲನ್ನು ಯಾರಿಗೆ ಕೊಡ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್​ರವರು ಸಂಗೀತಾ ಹೆಸರನ್ನು ಸೂಚಿಸಿದ್ದಾರೆ.

 

ಇನ್ನು ಕಾರ್ತಿಕ್​ ಪರಿಸ್ಥಿತಿಯನ್ನು ಕಂಡು ನನಗೊಂದು ಹಾಡು ನೆನಪಿಗೆ ಬರುತ್ತಿದೆ. ‘ಏನೋ ಮಾಡಲು ಹೋಗಿ ಏನು ಮಾಡಿದೆ ನೀನು’ ಎಂಬ ಹಾಡನ್ನು ತುಕಾಲಿ ಕಾರ್ತಿಕ್​ಗೆ ಹಾಡಿದ್ದಾರೆ.

ಒಟ್ಟಿನಲ್ಲಿ ಇಂದಿನ ಎಪಿಸೋಡ್​ನಲ್ಲಿ ಬಿಗ್ ಬಾಸ್​​ ಮನೆಯಲ್ಲಿ ರೆಡಿಯೋ ಜಾಕಿಯಾಗಿ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ರೇಡಿಯೋ ಜಾಕಿ ಸಂಭಾಷಣೆ ಮತ್ತು ಮನೆ ಮಂದಿಯ ಹರಟೆ ಹೇಗಿರಲಿದೆ ಎಂಬುದನ್ನು ಕಾಣೋ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

BBK10: ಬಿಗ್​ ಬಾಸ್​ ಮನೆಯಲ್ಲಿ ರೇಡಿಯೋ ಪ್ರೋಗ್ರಾಂ .. ರೇಡಿಯೋ ಜಾಕಿಯಾದ ತುಕಾಲಿ, ಕಾರ್ತಿಕ್​!

https://newsfirstlive.com/wp-content/uploads/2024/01/bigg-boss-13.jpg

    ರೇಡಿಯೋ ಜಾಕಿಯಾದ ತುಕಾಲಿ ಸಂತೋಷ್​

    ಸಂಗೀತಾ ಶೃಂಗೇರಿಗೆ ಹೆಂಗೆ ಪಂಚ್​ ಕೊಟ್ರು ಗೊತ್ತಾ?

    ಸಂಗೀತಾ ದೊಡ್ಡ ತಲೆ ನೋವಂತೆ! ಯಾರು ಹೇಳಿದ್ದು?

ಬಿಗ್​ ಬಾಸ್​​ ಸ್ಪರ್ಧಿಗಳು ರೇಡಿಯೋ ಜಾಕಿಯಾದರೆ ಹೇಗಿರುತ್ತೆ? ಇಂತಹದೊಂದು ಅವಕಾಶವನ್ನ ಬಿಗ್​ ಬಾಸ್​ ತೆರೆದಿಟ್ಟಿದ್ದಾರೆ. ಫಿನಾಲೆ ವಾರದಲ್ಲಿ ಕಾಲ ಕಳೆಯುತ್ತಿರುವ ಮನೆಯ ಸ್ಪರ್ಧಿಗಳಿಗೆ ರೆಡಿಯೋ ಜಾಕಿಯಾಗಲು ಅವಕಾಶ ನೀಡಿದ್ದಾರೆ.

ಕಾರ್ತಿಕ್​ ಮತ್ತು ತುಕಾಲಿ ರೆಡಿಯೋ ಜಾಕಿಯಾಗಿ ಸಹ ಸ್ಪರ್ಧಿಗಳನ್ನು ಮಾತನಾಡಿಸುವುದರ ಜೊತೆಗೆ ನಗೆಗಡಲಲ್ಲಿ ತೇಲಾಡುವಂತೆ ಮಾಡಿದ್ದಾರೆ. ಅದರಲ್ಲೂ ತುಕಾಲಿಯಂತು ತಮಾಷೆಯಾಗಿ ಮಾತನಾಡಿದ್ದಾರೆ. ಇವರ ಮಾತಿಗೆ ಮನೆಯಲ್ಲಿ ಸಹ ಸ್ಪರ್ಧಿಯ ಮುಖದಲ್ಲಿ ನಗು ತಂದಿದ್ದಾರೆ.

ತುಕಾಲಿ ಸಂತೋಷ್​ ವರ್ತೂರನ್ನು ಮಾತನಾಡಿಸಿದ್ದು, ಈ ವೇಳೆ ಸಂಗೀತಾ ಬರೀ ಅವರನ್ನೇ ಮಾತನಾಡಿಸೋದ ಎಂದು ಕೇಳಿದ್ದಾರೆ. ಅತ್ತ ಕಾರ್ತಿಕ್​ಗೂ ತುಕಾಲಿ ಪ್ರಶ್ನೆ ಕೇಳಿದ್ದು, ‘ತಲೆ ನೋವು’ ಟೈಟಲನ್ನು ಯಾರಿಗೆ ಕೊಡ್ತೀರಾ? ಎಂದು ಕೇಳಿದ್ದಾರೆ. ಅದಕ್ಕೆ ಕಾರ್ತಿಕ್​ರವರು ಸಂಗೀತಾ ಹೆಸರನ್ನು ಸೂಚಿಸಿದ್ದಾರೆ.

 

ಇನ್ನು ಕಾರ್ತಿಕ್​ ಪರಿಸ್ಥಿತಿಯನ್ನು ಕಂಡು ನನಗೊಂದು ಹಾಡು ನೆನಪಿಗೆ ಬರುತ್ತಿದೆ. ‘ಏನೋ ಮಾಡಲು ಹೋಗಿ ಏನು ಮಾಡಿದೆ ನೀನು’ ಎಂಬ ಹಾಡನ್ನು ತುಕಾಲಿ ಕಾರ್ತಿಕ್​ಗೆ ಹಾಡಿದ್ದಾರೆ.

ಒಟ್ಟಿನಲ್ಲಿ ಇಂದಿನ ಎಪಿಸೋಡ್​ನಲ್ಲಿ ಬಿಗ್ ಬಾಸ್​​ ಮನೆಯಲ್ಲಿ ರೆಡಿಯೋ ಜಾಕಿಯಾಗಿ ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ರೇಡಿಯೋ ಜಾಕಿ ಸಂಭಾಷಣೆ ಮತ್ತು ಮನೆ ಮಂದಿಯ ಹರಟೆ ಹೇಗಿರಲಿದೆ ಎಂಬುದನ್ನು ಕಾಣೋ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

Load More