newsfirstkannada.com

BREAKING: ಬಿಗ್​ಬಾಸ್​ ಸ್ಪರ್ಧಿ ತುಕಾಲಿ ಸಂತೋಷ್​ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ

Share :

Published March 13, 2024 at 10:04pm

Update March 13, 2024 at 10:25pm

    ಇತ್ತೀಚಿಗಷ್ಟೇ ಹೊಸ ಕಾರನ್ನು ಖರೀದಿಸಿದ್ದ ತುಕಾಲಿ ಸಂತೋಷ್​

    ಆಟೋ ಡಿಕ್ಕಿಯಿಂದ ಅಪಘಾತಕ್ಕಿಡಾದ ಬಿಗ್​ಬಾಸ್​ ಸ್ಪರ್ಧಿ ಕಾರು

    ಮದ್ಯ ಸೇವಿಸಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದ ಆಟೋ

ತುಮಕೂರು: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್​ ಕಾರು ಅಪಘಾತಕ್ಕೀಡಾಗಿದೆ. ಈ ಘಟನೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ನಡೆದಿದೆ.

ಇದನ್ನು ಓದಿ: ಯದುವೀರ್​​ಗೆ ಬಿಜೆಪಿ ಟಿಕೆಟ್​​.. ಅಂದು ಘರ್ಜಿಸಿದ್ದ ಪ್ರತಾಪ್​​ ಸಿಂಹ ಇಂದು ಮಾಡಿದ್ದೇನು?

ಇತ್ತೀಚಿಗಷ್ಟೇ ತುಕಾಲಿ ಸಂತೋಷ್​ ಹೊಸ ಕಾರನ್ನು ಖರೀದಿಸಿದ್ದರು. ಇದೀಗ ಅದೇ ಕಿಯಾ ಕಾರಿಗೆ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದೆ. ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿತ್ತು. ಅದೇ ಮಾರ್ಗದಲ್ಲಿ ಕುಣಿಗಲ್​ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ಈ ವೇಳೆ ತುಕಾಲಿ ಸಂತೋಷ್ ಕಾರಿಗೆ ಆಟೋ ಚಾಲಕ ಜಗದೀಶ್ ಎಂಬಾತ ಡಿಕ್ಕಿ ಹೊಡೆದಿದ್ದಾನೆ. ಆಟೋ ಚಾಲನೆ ವೇಳೆ ಚಾಲಕ ಜಗದೀಶ್ ಮಧ್ಯೆ ಸೇವಿಸಿದ್ದ ಎನ್ನಲಾಗಿದೆ.

ಇನ್ನೂ ಅಪಘಾತಕ್ಕೀಡಾದ ಕಾರಿನಲ್ಲಿ ತುಕಾಲಿ ಸಂತೋಷ್​ ಹಾಗೂ ಅವರ ಪತ್ನಿ ಮಾನಸ ಇದ್ದರು. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಆಟೋ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಚಾಲಕ ಜಗದೀಶ್ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಈ ಘಟನೆ ಸಂಬಂಧ ತುಕಾಲಿ ಸಂತೋಷ್ ಕಾರು ಹಾಗೂ ಆಟೋವನ್ನ ಕುಣಿಗಲ್ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಬಿಗ್​ಬಾಸ್​ ಸ್ಪರ್ಧಿ ತುಕಾಲಿ ಸಂತೋಷ್​ ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ

https://newsfirstlive.com/wp-content/uploads/2024/03/tukali-santhu.jpg

    ಇತ್ತೀಚಿಗಷ್ಟೇ ಹೊಸ ಕಾರನ್ನು ಖರೀದಿಸಿದ್ದ ತುಕಾಲಿ ಸಂತೋಷ್​

    ಆಟೋ ಡಿಕ್ಕಿಯಿಂದ ಅಪಘಾತಕ್ಕಿಡಾದ ಬಿಗ್​ಬಾಸ್​ ಸ್ಪರ್ಧಿ ಕಾರು

    ಮದ್ಯ ಸೇವಿಸಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದ ಆಟೋ

ತುಮಕೂರು: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ತುಕಾಲಿ ಸಂತೋಷ್​ ಕಾರು ಅಪಘಾತಕ್ಕೀಡಾಗಿದೆ. ಈ ಘಟನೆ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ನಡೆದಿದೆ.

ಇದನ್ನು ಓದಿ: ಯದುವೀರ್​​ಗೆ ಬಿಜೆಪಿ ಟಿಕೆಟ್​​.. ಅಂದು ಘರ್ಜಿಸಿದ್ದ ಪ್ರತಾಪ್​​ ಸಿಂಹ ಇಂದು ಮಾಡಿದ್ದೇನು?

ಇತ್ತೀಚಿಗಷ್ಟೇ ತುಕಾಲಿ ಸಂತೋಷ್​ ಹೊಸ ಕಾರನ್ನು ಖರೀದಿಸಿದ್ದರು. ಇದೀಗ ಅದೇ ಕಿಯಾ ಕಾರಿಗೆ ವೇಗವಾಗಿ ಬಂದ ಆಟೋವೊಂದು ಡಿಕ್ಕಿ ಹೊಡೆದಿದೆ. ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿತ್ತು. ಅದೇ ಮಾರ್ಗದಲ್ಲಿ ಕುಣಿಗಲ್​ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ಈ ವೇಳೆ ತುಕಾಲಿ ಸಂತೋಷ್ ಕಾರಿಗೆ ಆಟೋ ಚಾಲಕ ಜಗದೀಶ್ ಎಂಬಾತ ಡಿಕ್ಕಿ ಹೊಡೆದಿದ್ದಾನೆ. ಆಟೋ ಚಾಲನೆ ವೇಳೆ ಚಾಲಕ ಜಗದೀಶ್ ಮಧ್ಯೆ ಸೇವಿಸಿದ್ದ ಎನ್ನಲಾಗಿದೆ.

ಇನ್ನೂ ಅಪಘಾತಕ್ಕೀಡಾದ ಕಾರಿನಲ್ಲಿ ತುಕಾಲಿ ಸಂತೋಷ್​ ಹಾಗೂ ಅವರ ಪತ್ನಿ ಮಾನಸ ಇದ್ದರು. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಆಟೋ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯ ಚಾಲಕ ಜಗದೀಶ್ ಕುಣಿಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಈ ಘಟನೆ ಸಂಬಂಧ ತುಕಾಲಿ ಸಂತೋಷ್ ಕಾರು ಹಾಗೂ ಆಟೋವನ್ನ ಕುಣಿಗಲ್ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More