newsfirstkannada.com

ಎಲಿಮಿನೇಷನ್​ನಿಂದ ಬಚಾವ್​ ಆಗಿದ್ದೇ ತಡ.. ತುಕಾಲಿ ಆಟ ಶುರು; ಸಂಗೀತಾ, ವಿನಯ್​ ವಿರುದ್ಧ ರೊಚ್ಚಿಗೆದ್ದ ಸಂತೋಷ್​!

Share :

Published January 19, 2024 at 8:35am

Update January 19, 2024 at 12:27pm

    ಸಂಗೀತಾ ಮಾತಿಗೆ ತುಕಾಲಿ ಕೆಂಡಾಮಂಡಲ

    ವಿನಯ್​ ಜೊತೆ ವಾಗ್ವಾದಕ್ಕಿಳಿದ ಕಾಮಿಡಿಯನ್​

    ಅವರವರ ಗತ್ತು ಅವರವರಿಗೆ ಗೊತ್ತು ಎಂದ ವರ್ತೂರು ಸಂತೋಷ್

ಬಿಗ್​ ಬಾಸ್​ ಮನೆಯಲ್ಲಿ ಫಿನಾಲೆ ದಿನ ಹತ್ತಿರ ಬರುವಾಗಲೇ ಮಾತಿನ ಯುದ್ಧಗಳು ಶುರುವಾಗಿವೆ. ಟಾಸ್ಕ್​ ವಿಚಾರಕ್ಕೆ ಇದೀಗ ತುಕಾಲಿ ಸಂತೋಷ್​ ಕೆಂಡಾಮಂಡಲರಾಗಿದ್ದಾರೆ. ವೋಟಿಂಗ್​ ಮತ್ತು ಟಾಸ್ಕ್​ ವಿಚಾರದಿಂದ ಬೇಸರಗೊಂಡ ತುಕಾಲಿ ವಾಗ್ವಾದಕ್ಕಿಳಿದಿದ್ದಾರೆ.

ಬಿಗ್​ ಬಾಸ್​ ಟಾಸ್ಕ್​​ವೊಂದನ್ನು ನೀಡಿದ್ದು ಅದಕ್ಕೆ ಸಂಗೀತಾ ಈ ಟಾಸ್ಕ್​ನಲ್ಲಿ ಯಾರು ಅಡಲ್ವೋ ಅವರಿಗೆ ಮುಂದಿನ ಟಾಸ್ಕ್​ನಲ್ಲಿ ಆಡುವ ಅವಕಾಶವಿದೆ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ತುಕಾಲಿ ಸಂತೋಷ್​ ವೋಟಿಂಗ್​ ಅಂತ ಶುರು ಮಾಡ್ತೀರಾ ಹೋಗ್ತಾ ಹೋಗ್ತಾ ಯಾರಿಗೆ ಅವಕಾಶ ಸಿಕ್ಕಿಲ್ಲ ಅವರಿಗೆ ಅವಕಾಶ ಸಿಗಲಿ ಅಂತೀರಾ ಎಂದು ಮಾತಿನಲ್ಲೇ ಯುದ್ಧಕ್ಕಿಳಿದಿದ್ದಾರೆ.

ಸಂಗೀತಾ ಮತ್ತು ತುಕಾಲಿ ಸಂತೋಷ್​ ನಡುವಿನ ಗಲಾಟೆಗೆ ‘ಜೋರಾಗಿ ಮಾತನಾಡಿದ ತಕ್ಷಣ ಏನು ಕಿತ್ತುಕೊಳ್ಳಲು ಆಗುವುದಿಲ್ಲ’ ಎಂದು ಹೇಳುತ್ತಾ ವಿನಯ್​ ಎಂಟ್ರಿ ಕೊಟ್ಟಿದ್ದಾರೆ.

ಅದಕ್ಕೆ ತುಕಾಲಿ ಕೂಡ ರಿಯಾಕ್ಟ್​ ಮಾಡಿದ್ದು ‘ನೀನೇನು ಮಾಡ್ತೀಯಾ?’ ಎಂದಿದ್ದಾನೆ. ಅದಕ್ಕೆ ವಿನಯ್​ ‘ಮೊದಲ ದಿನದಿಂದ ನಿನೇನು ಕಿತ್ತಾಕೊಂಡು ಬಂದಿದ್ದೀಯಾ ಅಂತ ನನಗೆ ಚೆನ್ನಾಗಿ ಗೊತ್ತು’ ಎಂದಿದ್ದಾರೆ.

 

ವಿನಯ್​ ಜೊತೆಗೆ ತುಕಾಲಿ ಜಗಳ ನೋಡಿ ವರ್ತೂರ್​ ಸಂತೋಷ್​ ಮಧ್ಯೆ ಎಂಟ್ರಿ ನೀಡಿದ್ದು, ‘ಅದು ಇದು ಅಂತ ಬಳಸಬೇಡಿ ಅವರವರ ಗತ್ತು ಅವರವರಿಗೆ ಗೊತ್ತು’ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಟಾಸ್ಕ್​ ಮತ್ತು ಆಡಲು ಅವಕಾಶ ಸಿಗದ ವಿಚಾರಕ್ಕೆ ತುಕಾಲಿ ಕೋಪಗೊಂಡಿರೋದಂತು ಸತ್ಯ. ಇಷ್ಟು ದಿನ ಸೈಲೆಂಟಾಗಿದ್ದ ತುಕಾಲಿ ಫಿನಾಲೆ ಸಮಯದಲ್ಲಿ ರೊಚ್ಚಿಗೆದ್ದಿದ್ದಾರೆ. ಆದರೆ ತುಕಾಲಿ ಮತ್ತು ವಿನಯ್​ ಜಗಳ ಎಲ್ಲಿ ಹೋಗಿ ತಲುಪುತ್ತೆ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲಿಮಿನೇಷನ್​ನಿಂದ ಬಚಾವ್​ ಆಗಿದ್ದೇ ತಡ.. ತುಕಾಲಿ ಆಟ ಶುರು; ಸಂಗೀತಾ, ವಿನಯ್​ ವಿರುದ್ಧ ರೊಚ್ಚಿಗೆದ್ದ ಸಂತೋಷ್​!

https://newsfirstlive.com/wp-content/uploads/2024/01/Biggboss.jpg

    ಸಂಗೀತಾ ಮಾತಿಗೆ ತುಕಾಲಿ ಕೆಂಡಾಮಂಡಲ

    ವಿನಯ್​ ಜೊತೆ ವಾಗ್ವಾದಕ್ಕಿಳಿದ ಕಾಮಿಡಿಯನ್​

    ಅವರವರ ಗತ್ತು ಅವರವರಿಗೆ ಗೊತ್ತು ಎಂದ ವರ್ತೂರು ಸಂತೋಷ್

ಬಿಗ್​ ಬಾಸ್​ ಮನೆಯಲ್ಲಿ ಫಿನಾಲೆ ದಿನ ಹತ್ತಿರ ಬರುವಾಗಲೇ ಮಾತಿನ ಯುದ್ಧಗಳು ಶುರುವಾಗಿವೆ. ಟಾಸ್ಕ್​ ವಿಚಾರಕ್ಕೆ ಇದೀಗ ತುಕಾಲಿ ಸಂತೋಷ್​ ಕೆಂಡಾಮಂಡಲರಾಗಿದ್ದಾರೆ. ವೋಟಿಂಗ್​ ಮತ್ತು ಟಾಸ್ಕ್​ ವಿಚಾರದಿಂದ ಬೇಸರಗೊಂಡ ತುಕಾಲಿ ವಾಗ್ವಾದಕ್ಕಿಳಿದಿದ್ದಾರೆ.

ಬಿಗ್​ ಬಾಸ್​ ಟಾಸ್ಕ್​​ವೊಂದನ್ನು ನೀಡಿದ್ದು ಅದಕ್ಕೆ ಸಂಗೀತಾ ಈ ಟಾಸ್ಕ್​ನಲ್ಲಿ ಯಾರು ಅಡಲ್ವೋ ಅವರಿಗೆ ಮುಂದಿನ ಟಾಸ್ಕ್​ನಲ್ಲಿ ಆಡುವ ಅವಕಾಶವಿದೆ ಎಂದು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ತುಕಾಲಿ ಸಂತೋಷ್​ ವೋಟಿಂಗ್​ ಅಂತ ಶುರು ಮಾಡ್ತೀರಾ ಹೋಗ್ತಾ ಹೋಗ್ತಾ ಯಾರಿಗೆ ಅವಕಾಶ ಸಿಕ್ಕಿಲ್ಲ ಅವರಿಗೆ ಅವಕಾಶ ಸಿಗಲಿ ಅಂತೀರಾ ಎಂದು ಮಾತಿನಲ್ಲೇ ಯುದ್ಧಕ್ಕಿಳಿದಿದ್ದಾರೆ.

ಸಂಗೀತಾ ಮತ್ತು ತುಕಾಲಿ ಸಂತೋಷ್​ ನಡುವಿನ ಗಲಾಟೆಗೆ ‘ಜೋರಾಗಿ ಮಾತನಾಡಿದ ತಕ್ಷಣ ಏನು ಕಿತ್ತುಕೊಳ್ಳಲು ಆಗುವುದಿಲ್ಲ’ ಎಂದು ಹೇಳುತ್ತಾ ವಿನಯ್​ ಎಂಟ್ರಿ ಕೊಟ್ಟಿದ್ದಾರೆ.

ಅದಕ್ಕೆ ತುಕಾಲಿ ಕೂಡ ರಿಯಾಕ್ಟ್​ ಮಾಡಿದ್ದು ‘ನೀನೇನು ಮಾಡ್ತೀಯಾ?’ ಎಂದಿದ್ದಾನೆ. ಅದಕ್ಕೆ ವಿನಯ್​ ‘ಮೊದಲ ದಿನದಿಂದ ನಿನೇನು ಕಿತ್ತಾಕೊಂಡು ಬಂದಿದ್ದೀಯಾ ಅಂತ ನನಗೆ ಚೆನ್ನಾಗಿ ಗೊತ್ತು’ ಎಂದಿದ್ದಾರೆ.

 

ವಿನಯ್​ ಜೊತೆಗೆ ತುಕಾಲಿ ಜಗಳ ನೋಡಿ ವರ್ತೂರ್​ ಸಂತೋಷ್​ ಮಧ್ಯೆ ಎಂಟ್ರಿ ನೀಡಿದ್ದು, ‘ಅದು ಇದು ಅಂತ ಬಳಸಬೇಡಿ ಅವರವರ ಗತ್ತು ಅವರವರಿಗೆ ಗೊತ್ತು’ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಟಾಸ್ಕ್​ ಮತ್ತು ಆಡಲು ಅವಕಾಶ ಸಿಗದ ವಿಚಾರಕ್ಕೆ ತುಕಾಲಿ ಕೋಪಗೊಂಡಿರೋದಂತು ಸತ್ಯ. ಇಷ್ಟು ದಿನ ಸೈಲೆಂಟಾಗಿದ್ದ ತುಕಾಲಿ ಫಿನಾಲೆ ಸಮಯದಲ್ಲಿ ರೊಚ್ಚಿಗೆದ್ದಿದ್ದಾರೆ. ಆದರೆ ತುಕಾಲಿ ಮತ್ತು ವಿನಯ್​ ಜಗಳ ಎಲ್ಲಿ ಹೋಗಿ ತಲುಪುತ್ತೆ ಎಂದು ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More