/newsfirstlive-kannada/media/post_attachments/wp-content/uploads/2024/10/JAGADISH-1.jpg)
ಬಿಗ್​ ಬಾಸ್​​ ಸೀಸನ್​ 11 ಕಾರ್ಯಕ್ರಮದಿಂದ ಲಾಯರ್​ ಜಗದೀಶ್​ ಮತ್ತು ರಂಜಿತ್​ ​ಹೊರಬಂದಿದ್ದಾರೆ. ಕಿಚ್ಚ ನಿರೂಪಣೆಯ ರಿಯಾಲಿಟಿ ಶೋದಲ್ಲಿ ಹೊಡೆದಾಡಿಕೊಂಡ ಹಿನ್ನೆಲೆ ಇಬ್ಬರನ್ನು ಬಿಗ್​ಬಾಸ್​ ಮನೆಯಿಂದ ಹೊರ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಬಿಗ್​ ಬಾಸ್​ ಕನ್ನಡ ಪ್ರಾರಂಭವಾಗಿ 3 ವಾರ ಕಳೆದಿದೆ. ಆದರೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರಾರಂಭದಿಂದಲೂ ಮಾತಿನ ಚಕಮಕಿ ನಡೆಯುತ್ತಾ ಬಂದಿದೆ. ಅದರಲ್ಲೂ ಲಾಯರ್​ ಜಗದೀಶ್​ ಮತ್ತು ಮನೆಯ ಇತರೆ ಸ್ಪರ್ಧಿಗಳ ನಡುವೆ ಕೊಂಚ ವೈಮನಸ್ಸು ಬೆಳೆದಿತ್ತು. ಆದರೀಗ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವಷ್ಟರಮಟ್ಟಿಗೆ ಹೋಗಿದೆ.
ಬಿಗ್​ ಬಾಸ್​ ಮನೆಯಲ್ಲಿ ಏನಾಯ್ತ?
ನಿನ್ನೆ ಎಪಿಸೋಡ್​​ನಲ್ಲೂ ಕೂಡ ಸ್ಪರ್ಧಿಗಳ ನಡುವೆ ದೊಡ್ಡ ಜಗಳವಾಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳ ಏರ್ಪಟ್ಟಿತ್ತು. ಆ ಬಳಿಕ ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಮಾತುಕತೆ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕಿಚ್ಚನ ಕೊನೆಯ ಸೀಸನ್​
ಇತ್ತೀಚೆಗೆ ಕಿಚ್ಚ ಸುದೀಪ್​ ಕೂಡ ಟ್ವೀಟ್​ ಮಾಡಿದ್ದು, ಫ್ಯಾನ್ಸ್​ಗೆ ಶಾಕ್​ ನೀಡಿದ್ದರು. ಬಿಗ್​ ಬಾಸ್​ ಸೀಸನ್​ 11 ನನ್ನ ಕೊನೆಯ ಸೀಸನ್​​ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದಾದ ಬಳಿಕ ಇದೀಗ ಸ್ಪರ್ಧಿಗಳ ನಡುವಿನ ಜಗಳ ಬಿಗ್​ ಬಾಸ್​ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಹುಚ್ಚಾ ವೆಂಕಟ್ ಔಟ್​​
ಹುಚ್ಚಾ ವೆಂಕಟ್​​ ಕೂಡ ಈ ಹಿಂದೆ ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಯೊಬ್ಬರ ಮೇಲೆ ಕೈ ಮಾಡಿದ್ದರು. ಕಿಚ್ಚನ ಕಾರ್ಯಕ್ರಮದಲ್ಲಿಯೇ ಕೈ ಮಿಲಾಯಿಸಿಕೊಂಡಿದ್ದರು. ಇದನ್ನು ನೋಡಿದ ಕಿಚ್ಚ ಸುದೀಪ್​ ನೇರವಾಗಿ ಹುಚ್ಚಾ ವೆಂಕಟ್​ ಅವರನ್ನ ಮನೆಯಿಂದ ಹೊರ ಹಾಕಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us