/newsfirstlive-kannada/media/post_attachments/wp-content/uploads/2024/10/BBK11-6-1.jpg)
ಬಿಗ್​​ ಬಾಸ್​ ಬೆಳ್ಳಂಬೆಳಗ್ಗೆಯೇ ಸ್ಪರ್ಧಿಗಳಿಗೆ ಶಾಕ್​ ನೀಡಿದೆ. ಫೋನ್​ ಕರೆ ಮಾಡಿ ಮನೆಯ ಕ್ಯಾಪ್ಟನ್​ ಜೊತೆ ಮಾತನಾಡಿದ ಬಿಗ್​ ಬಾಸ್​​ ನಾನು ಈ ಮನೆಯಿಂದ ಹೊರಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಬಿಗ್​ ಬಾಸ್​ ಮಾತು ಕ್ಯಾಪ್ಟನ್​ ಸೇರಿ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ.
ಮಾತು ಬಿಗ್​ ಬಾಸ್​ ಮನೆ ಕೆಡಿಸಿತೇ?
ಬೆಳ್ಳಂಬೆಳಗ್ಗೆ ಬಿಗ್​ ಬಾಸ್​ ಫೋನ್​ ಕರೆ ಮಾಡಿದ್ದಾರೆ. ಅತ್ತ ಮನೆಯ ಕ್ಯಾಪ್ಟನ್​ ಶಿಶಿರ್​ ಮನೆಯ ಫೋನ್​ ಸ್ವೀಕರಿಸಿದ್ದಾರೆ​. ನಿಮ್ಮ ಎಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿ ಮಚ್​ ಎಂದು ಬಿಗ್​ ಬಾಸ್​ ಹೇಳಿದ್ದಾರೆ. ಅದಕ್ಕೆ ಉತ್ತರವಾಗಿ ಶಿಶಿರ್​ ಥ್ಯಾಂಕ್ಯೂ ಬಿಗ್​ ಬಾಸ್​ ಎಂದಿದ್ದಾರೆ.
ಶಿಶಿರ್​ ಮಾತಿಗೆ ಕೋಪಗೊಂಡ ಬಿಗ್​ ಬಾಸ್​ ಏನು ಥ್ಯಾಂಕ್ಯೂ ಹೇಳುತ್ತಿದ್ದೀರಲ್ಲ. ಉಡಾಫೆತನ, ಅಪ್ರಮಾಣಿಕ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಸ್​ ಬಾಸ್​ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್​ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಪ್ರಕರಣ; ದರ್ಶನ್​ಗೆ ಬೇಲಾ, ಜೈಲಾ..? ನ್ಯಾಯಾಲಯದಿಂದ ಇಂದು ತೀರ್ಪು
ಸದ್ಯ ಬಿಗ್​ ಬಾಸ್​ ಮಾತು ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ಬ್ರೇಕ್​ ತೆಗೆದುಕೊಳ್ಳುತ್ತೇನೆ ಎಂಬ ಹೇಳಿಕೆಯೂ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕಿಚ್ಚನ ಟ್ವೀಟ್​ ಮತ್ತು ಇದು ಕೊನೆಯ ನಿರೂಪಣೆ ಎಂಬ ಟ್ವೀಟ್​​ಗೆ ತಕ್ಕಂತೆ ಬಿಗ್​ ಬಾಸ್​ನ ಈ ಮಾತು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಕಿಚ್ಚನ ಕೊನೆಯ ಸೀಸನ್​!
ಕಿಚ್ಚ ಸುದೀಪ್​ ನಿನ್ನೆ ಬಿಗ್​ ಬಾಸ್​ ವೀಕ್ಷಕರಿಗೆ ಶಾಕ್​ ನೀಡಿದ್ದಾರೆ. ಸೀಸನ್​ 1 ರಿಂದ 11ರವರೆಗೆ ಕಾರ್ಯಕ್ರಮ ನಿರೂಪಿಸುತ್ತಾ ಬಂದಿರುವ ಸುದೀಪ್​ ಇದೇ ನನ್ನ ಕೊನೆಯ ನಿರೂಪಣೆ ಎಂದು ಹೇಳಿದ್ದಾರೆ. ಆ ಮೂಲಕ ಫ್ಯಾನ್ಸ್​ಗೂ ಶಾಕ್​ ನೀಡಿದ್ದಾರೆ. ಆದರೆ ಬಿಗ್​ ಬಾಸ್​ ಕೂಡ ಅಚ್ಚರಿಯ ಮಾತೊಂದನ್ನ ಆಡಿರೋದು ಎಲ್ಲರನ್ನು ಬಾಯಲ್ಲಿ ಬೆರಳಿಡುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us