/newsfirstlive-kannada/media/post_attachments/wp-content/uploads/2025/01/TRIVIKRAM.jpg)
- ಫಿನಾಲೆಗೆ ಹೋಗಲು ಈಗ ನಡೆಯುವ ಟಾಸ್ಕ್ಗಳೆ ಮುಖ್ಯನಾ?
- ಸ್ಪರ್ಧಿಗಳು ಆಡುವ ಟಾಸ್ಕ್ ಮೇಲೆ ಫಿನಾಲೆ ಟಿಕೆಟ್ ಖಾತರಿ
- ಟಾಸ್ಕ್ನಲ್ಲಿ ಮಂಜು, ತ್ರಿವಿಕ್ರಮ್ ಹೊಡೆದಾಡಿರುವುದು ಯಾಕೆ?
ಬಿಗ್ ಬಾಸ್ ಶೋ ಇನ್ನೇನು ಕೆಲವು ವಾರಗಳಲ್ಲಿ ಅಂತ್ಯ ಕಾಣಲಿದೆ. ಮನೆ ಒಳಗಿನ ಸ್ಪರ್ಧಿಗಳು ಗ್ರ್ಯಾಂಡ್​ ಫಿನಾಲೆಗೆ ಹೋಗಲು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೇಗೆಂದರೆ ಬಿಗ್ ಬಾಸ್ ಕೊಡುವ ಪ್ರತಿ ಟಾಸ್ಕ್​ನಲ್ಲೂ ಅತ್ಯುತ್ತಮ ಪರ್ಫಾಮೆನ್ಸ್ ನೀಡಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಎದುರಾಳಿಗಳನ್ನು ಹೆದರಿಸಿಕೊಂಡು ಮನೆಯೊಳಗೆ ಟಾಸ್ಕ್​ ಆಡುತ್ತಿದ್ದಾರೆ. ಅದರಂತೆ ಬಿಗ್​ಬಾಸ್​ನಲ್ಲಿ ಸರಣಿ ಟಾಸ್ಕ್​ಗಳು ಆರಂಭವಾಗಿವೆ.
ಮನೆಯಲ್ಲಿರುವ ಎಲ್ಲ 9 ಸ್ಪರ್ಧಿಗಳಿಗೆ ಬಿಗ್ ಬಾಸ್ ಸರಣಿ ಟಾಸ್ಕ್​ಗಳನ್ನು ನೀಡಲಿದ್ದಾರೆ. ಈ ಟಾಸ್ಕ್​ಗಳಲ್ಲಿ ಹೆಚ್ಚು ಚೆನ್ನಾಗಿ ಆಡಿ, ಯಾವುದೇ ಮೋಸ ಮಾಡದೇ ಗೆಲುವು ಸಾಧಿಸಬೇಕು. ಟಾಸ್ಕ್​ಗಳಲ್ಲಿ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸಿ ಗೆಲುವನ್ನು ಪಡೆಯುವ ಸ್ಪರ್ಧಿಗಳಿಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್​ ಬಿಗ್ ಬಾಸ್ ನೀಡುತ್ತಾರೆ. ಅಂದರೆ ಸ್ಪರ್ಧಿಗಳು ಆಡುವ ಟಾಸ್ಕ್​ ಮೇಲೆ ಅವರ ಫಿನಾಲೆ ಟಿಕೆಟ್ ಖಾತರಿಯಾಗುತ್ತದೆ ಎಂದು ಬಿಗ್​ಬಾಸ್ ಹೇಳಿದ್ದಾರೆ.
ಟಾಸ್ಕ್​ನಲ್ಲಿ ಚೆನ್ನಾಗಿ ಆಡದೇ ಇರುವವರು ಫಿನಾಲೆಗೆ ಹೋಗುವ ಆಸೆಯನ್ನು ಕೈಬಿಡಬೇಕು ಆಗುತ್ತದೆ. ಏನೇ ಆಗಲಿ ರಜತ್ ಮನೆಯ ಕ್ಯಾಪ್ಟನ್ ಆದ ಮೇಲೆ ಬಿಗ್​ಬಾಸ್​ ಮನೆಯಲ್ಲಿ ಹೊಸ ಹೊಸ ಟಾಸ್ಕ್​ಗಳು ವೇಗ ಪಡೆದುಕೊಂಡಿವೆ. ಫಿನಾಲೆಗೆ ಹೋಗುವ ಆಸೆಯಿಂದ ಎಲ್ಲರೂ ಟಾಸ್ಕ್​ ಪೂರ್ಣಗೊಳಿಸುವ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇಷ್ಟು ದಿನ ಆಡಿದ್ದಕ್ಕಿಂತ ಈ ಕೊನೆ ಮೂರು ವಾರಗಳಲ್ಲಿ 9 ಸ್ಪರ್ಧಿಗಳು ಆಡುವ ಟಾಸ್ಕ್ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿರುತ್ತವೆ.
ಇನ್ನು ಇಂದಿನ ಟಾಸ್ಕ್​ನಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಮಧ್ಯೆ ಸಖತ್ ಟಾಕ್ ವಾರ್ ನಡೆದಿದೆ. ಟಾಸ್ಕ್​ನಲ್ಲಿ ತ್ರಿವಿಕ್ರಮ್​ ಮುಖ ಮುಖಕ್ಕೆ ಉಗ್ರಂ ಮಂಜು ಹೊಡೆದಿದ್ದಾರೆ. ಇದಕ್ಕೆ ಕೋಪಗೊಂಡಿರುವ ತ್ರಿವಿಕ್ರಮ್ ಅಷ್ಟು ಜೋರಾಗಿ ಹೊಡೆದರೆ ಹೆಂಗೆ ಎಂದು ಪ್ರಶ್ನೆ ಮಾಡಿದ್ದಲ್ಲದೇ ನಾನು ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮಂಜು ನಾನು ಎಲ್ಲಿ ತಳ್ಳಾಡಿದೆ, ಎಲ್ಲಿ ಹೊಡೆದಾಡಿದೆ ಎಂದು ಕೇಳಿದ್ದಾರೆ. ಬಳಿಕ ಟಾಸ್ಕ್​ನಲ್ಲಿ ಉಗ್ರಂ ಮಂಜುಗೆ ತ್ರಿವಿಕ್ರಮ್ ಓಡಾಡಿಸಿ ಹೊಡೆದಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಮಾಡಿದ್ರಾ ಎನ್ನುವ ಪ್ರಶ್ನೆ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ