/newsfirstlive-kannada/media/post_attachments/wp-content/uploads/2024/10/bigg-boss33.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ತುಂಬಾ ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿತ್ತು. ಬಿಗ್ಬಾಸ್ ಮನೆಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. 10 ಸ್ಪರ್ಧಿಗಳು ಸ್ವರ್ಗದಲ್ಲಿ ಇದ್ದರೆ, ಉಳಿದ 7 ಜನರು ನರಕದಲ್ಲಿ ಕಾಲ ಕಳೆಯುತ್ತಿದ್ದರು.
ಇದನ್ನೂ ಓದಿ: ಹಾವು ಕೊಂ*ದ 24 ಗಂಟೆಯಲ್ಲೇ ಗುಡಿ ನಿರ್ಮಾಣ.. ಆದ್ರೂ ಮಕ್ಕಳಿಗೆ ಪದೇ ಪದೆ ಸರ್ಪ ಕಾಣುತ್ತಿರುವುದು ಏಕೆ?
ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಮೊದಲ ವಾರವೇ ಸ್ಪರ್ಧಿಗಳ ನಡುವೆ ಜಗಳ ಆಗಿತ್ತು. ಪದೇ ಪದೇ ಸ್ಪರ್ಧಿಗಳು ನಿಯಮ ಉಲ್ಲಂಘನೆ ಮಾಡುತ್ತಿದ್ದರು. ಅದಕ್ಕೆ ಬಿಗ್ಬಾಸ್ ಕೂಡ ಶಿಕ್ಷೆ ನೀಡುತ್ತಿದ್ದರು. ಹೀಗೆ ಬಿಗ್ಬಾಸ್ ಮೊದಲ ದಿನದಿಂದಲೇ ಲಾಯರ್ ಜಗದೀಶ್ ಅವರು ಸಖತ್ ಸೌಂಡ್ ಮಾಡುತ್ತಿದ್ದರು. ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ಮಾಡುತ್ತಾ ಸುದ್ದಿಯಲ್ಲಿ ಇರುತ್ತಿದ್ದರು.
ಹಂಸ, ಮಾನಸ, ಭವ್ಯಾ ಗೌಡ, ಉಗ್ರಂ ಮಂಜು, ಗೋಲ್ಡ್ ಸುರೇಶ್ ಹೀಗೆ ಮನೆಯ ಎಲ್ಲರ ಸದಸ್ಯರ ಜೊತೆಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇನ್ನು ನಿನ್ನೆ ನಡೆದ ಎಪಿಸೋಡ್ನಲ್ಲಿ ಮನೆಯ ಎಲ್ಲರ ಜೊತೆ ಜಗದೀಶ್ ಅವರು ಗಲಾಟೆ ಮಾಡಿಕೊಂಡಿದ್ದಾರೆ. ಜೊತೆಗೆ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು.
ಇದೇ ಗಲಾಟೆಯ ಮಧ್ಯೆ ನಟ ರಂಜಿತ್ ಲಾಯರ್ ಜಗದೀಶ್ ಅವರನ್ನು ಜೋರಾಗಿ ತಳ್ಳಿದ್ದರು. ಹೀಗಾಗಿ ಬಿಗ್ಬಾಸ್ ನಿರ್ಧಾರದ ಮೇಲೆ ಲಾಯರ್ ಜಗದೀಶ್ ಅವರನ್ನು ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದಾರೆ. ಬಳಿಕ ಎಲ್ಲರನ್ನು ಮತ್ತೆ ಕರೆದ ಬಿಗ್ಬಾಸ್ ನಟ ರಂಜಿತ್ ಅವರನ್ನು ಕೂಡ ಆಚೆ ಕಳುಹಿಸಿದ್ದಾರೆ. ಆಗ ಮನೆಯ ಉಳಿದ ಸದಸ್ಯರು ಕೂಡ ಎಷ್ಟೇ ಕೇಳಿಕೊಂಡರು ಬಿಗ್ಬಾಸ್ ಕಡೆಯಿಂದ ಏನೂ ಪ್ರತಿಕ್ರಿಯೆ ಸಿಕ್ಕಿಲ್ಲ.
ಇದನ್ನೂ ಓದಿ:BIG BREAKING: ಬಿಗ್ ಬಾಸ್ಗೆ ಗುಡ್ ಬೈ.. ಕೊನೆಗೂ ಮನೆಯಿಂದ ಹೊರ ಬಂದ ಜಗದೀಶ್!
ಇನ್ನೂ, ಈ ವಾರದಲ್ಲಿ ಇಬ್ಬರು ಸ್ಪರ್ಧಿಗಳು ಬಿಗ್ಬಾಸ್ ಮೆನಯಿಂದ ಆಚೆ ಬಂದಿದ್ದಾರೆ. ಹೀಗಾಗಿ ಭಾನುವಾರದ ಎಪಿಸೋಡ್ನಲ್ಲಿ ನಾಮಿನೇಷನ್ ಪ್ರಕ್ರಿಯೆ ಇರುತ್ತಾ ಅಥವಾ ಇಲ್ಲವಾ ಎಂಬ ಗೊಂದಲ ಮನೆಮಾಡಿದೆ. ಇನ್ನೂ ಭಾನುವಾರದ ಎಪಿಸೋಡ್ನಲ್ಲಿ ಓರ್ವ ಸ್ಪರ್ಧಿ ನಾಮಿನೇಟ್ ಆದ್ರೂ ಆಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ