/newsfirstlive-kannada/media/post_attachments/wp-content/uploads/2024/10/BBK11-3.jpg)
ಬಿಗ್ಬಾಸ್ ಗೆಲ್ಲಲು ದೊಡ್ಮನೆಯಲ್ಲಿ ಸ್ಪರ್ಧಿಗಳು ಮಾಡ್ತಿರುವ ಮನರಂಜನೆಯ ಹೈಡ್ರಾಮಾಗಳು ಸರಿ-ತಪ್ಪುಗಳ ಚರ್ಚೆಗಳನ್ನು ಹುಟ್ಟುಹಾಕಿದೆ. ಅದರ ಮಧ್ಯೆ ಇಂದು ರಾತ್ರಿ 9 ಗಂಟೆಯಿಂದ ಪ್ರಸಾರವಾಗುವ ‘ವಾರದ ಕತೆ ಕಿಚ್ಚನ ಜೊತೆ’ ಎಪಿಸೋಡ್ ತುಂಬಾನೇ ಕುತೂಹಲವಾಗಿದೆ.
ಬಿಗ್ಬಾಸ್ ಸೀಸನ್-11 ಶುರುವಾಗಿ ಒಂದು ವಾರ ಕಳೆದಿದ್ದು, ಇಂದು ಮೊದಲ ಪಂಚಾಯ್ತಿ ನಡೆಯುತ್ತಿದೆ. ಒಂದು ವಾರದಲ್ಲಿ ನಡೆದ ಸ್ಪರ್ಧಿಗಳ ಮನರಂಜನೆಯ ಕಥಾವಸ್ತು ಇಟ್ಕೊಂಡು, ಸರಿ, ತಪ್ಪುಗಳ ಬಗ್ಗೆ ಕಿಚ್ಚ ಸುದೀಪ್ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಸುದೀಪ್, ಯಾರಿಗೆಲ್ಲ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಯಾರಿಗೆಲ್ಲ ಕಿವಿ ಮಾತು ಹೇಳಲಿದ್ದಾರೆ ಅನ್ನೋದ್ರ ಬಗ್ಗೆ ಅಭಿಮಾನಿಗಳು ಚರ್ಚೆ ಮಾಡ್ತಿದ್ದಾರೆ.
ಇದನ್ನೂ ಓದಿ:BBK11: ಧನರಾಜ್ ಆಚಾರ್ಯ ಡೈಲಾಗ್ಗೆ ಬಿಗ್ಬಾಸ್ ಮನೆಮಂದಿ ಫುಲ್ ಖುಷ್.. ವಿಡಿಯೋ ಇಲ್ಲಿದೆ
ಅಲ್ಲದೇ ರಾತ್ರಿ 9 ಗಂಟೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ತಪ್ಪು ಮಾಡಿದ, ತಪ್ಪಾಗಿ ಮಾತನಾಡಿದ ಕೆಲವು ಸ್ಪರ್ಧಿಗಳಿಗೆ ಸಹಜವಾಗಿಯೇ ತಳಮಳ ಶುರುವಾಗಿದೆ. ಕಿಚ್ಚ ಸುದೀಪ್ ಎಲ್ಲಿ ಮುಖವಾಡ ಕಳಚಿಡುತ್ತಾರೋ ಎಂಬ ಭಯ ಕಾಡಿದೆ.
ಈ ಮಧ್ಯೆ ವಾಹಿನಿ ಕಲರ್ಸ್ ಕನ್ನಡ ಪ್ರೊಮೋ ಒಂದನ್ನು ಬಿಟ್ಟು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸ್ವರ್ಗ ಇರಲಿ, ನರಕಾನೇ ಇರಲಿ ಎಲ್ಲಿದ್ದರೂ ಎಲಿಮಿನೇಷನ್ ತಪ್ಪಿದ್ದಲ್ಲ. ಮನೆಯಿಂದ ಆಚೆ ಹೋಗಲು 9 ಸ್ಪರ್ಧಿಗಳು ನಾಮಿನೇಷನ್ ಆಗಿದ್ದಾರೆ. ಅವರೆಲ್ಲರ ಮೇಲೂ ಎಲಿಮಿನೇಷನ್ ತೂಗುಗತ್ತಿ ಇದೆ ಎಂದು ಪ್ರೋಮೋದಲ್ಲಿ ಹೇಳಲಾಗಿದೆ.
ಇದನ್ನೂ ಓದಿ:BBK11: ‘ಸುದೀಪ್ ಸರ್ ಇವರನ್ನೇ ಒದ್ದು ಹೊರಗಡೆ ಹಾಕ್ತಾರೆ‘; ಬಿಗ್ಬಾಸ್ ಮನೆಯಲ್ಲಿ ಏನಾಗ್ತಿದೆ?
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ