ರಕ್ಷಕ್ ಹಾಗೂ ಕಾರ್ತಿಕ್ ಜೊತೆ ರೀಲ್ಸ್ ಮಾಡೋದು ಬಾಕಿ ಇದೆ
ಟೆಂಪಲ್ ರನ್ ಶುರು ಮಾಡಿಕೊಂಡ ಬಿಗ್ಬಾಸ್ ವಿನಯ್ ಗೌಡ ಟೀಮ್
ದೇವಸ್ಥಾನಕ್ಕೆ ಬಂದಿದ್ದೇವೆ ಒಳ್ಳೆ ಮಾತಾಡೋಣ ಎಂದ ನಮ್ರತಾ ಗೌಡ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಸ್ಪರ್ಧಿಗಳ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಗ್ಬಾಸ್ ಮುಗಿದ ಬಳಿಕ ಎಲ್ಲಾ ಸ್ಪರ್ಧಿಗಳು ಒಂದೆಡೆ ಸೇರಿಕೊಂಡು ಸಖತ್ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದರು. ಬಿಗ್ಬಾಸ್ ಮನೆಯಲ್ಲಿ ಆನೆ ಎಂದೇ ಕರೆಸಿಕೊಂಡು ಫೇಮಸ್ ಆಗಿದ್ದ ವಿನಯ್ ಗೌಡ ಟೀಮ್ ಟೆಂಪಲ್ ರನ್ ಶುರು ಮಾಡಿದ್ದಾರೆ.
ಇದನ್ನು ಓದಿ: BBK10: ಚಾಮುಂಡಿ ಬೆಟ್ಟದಲ್ಲಿ ಬಿಗ್ಬಾಸ್ ವಿನಯ್, ನಮ್ರತಾ, ಮೈಕಲ್, ರಕ್ಷಕ್ ನೋಡಲು ಮುಗಿಬಿದ್ದ ಫ್ಯಾನ್ಸ್!
ಹೌದು, ಬಿಗ್ಬಾಸ್ ಸ್ಪರ್ಧಿಗಳಾದ ನಮ್ರತಾ ಗೌಡ, ವಿನಯ್ ಗೌಡ, ರಕ್ಷಕ್ ಬುಲೆಟ್ ಹಾಗೂ ಮೈಕಲ್ ಈ ನಾಲ್ವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಇವರ ಜೊತೆಗೆ ವಿನಯ್ ಗೌಡ ಅವರ ಪತ್ನಿ ಅಕ್ಷತಾ ಗೌಡ ಹಾಗೂ ಮಗ ರುಷಬ್ ಗೌಡ ಕೂಡ ಆಗಮಿಸಿದ್ದರು. ಇನ್ನೂ ಬಿಗ್ಬಾಸ್ ಸ್ಪರ್ಧಿಗಳು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ದೌಡಾಯಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಆದರೆ ಈ ತಂಡದಲ್ಲಿ ಓರ್ವ ಸ್ಪರ್ಧಿ ಮಾತ್ರ ಮಿಸ್ ಆಗಿದ್ದರು. ಅವರೇ ಸ್ನೇಹಿತ್ ಗೌಡ. ಬಿಗ್ಬಾಸ್ನಿಂದ ಆಚೆ ಬಂದ ಬಳಿಕ ಸ್ನೇಹಿತ್ ನಮ್ರತಾಗೆ ಮೀಟ್ ಆಗಿಲ್ಲ. ಇದೇ ವಿಚಾರವಾಗಿ ನ್ಯೂಸ್ ಫಸ್ಟ್ನೊಂದಿಗೆ ನಮ್ರತಾ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಸ್ನೇಹಿತ್ ಬಗ್ಗೆ ಮಾತಾಡಿದ ನಮ್ರತಾ, ಬಿಗ್ಬಾಸ್ನಿಂದ ಆಚೆ ಬಂದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಜನರನ್ನು ಭೇಟಿ ಆಗಿದ್ದೇನೆ. ಸಾಕಷ್ಟು ಸಿನಿಮಾ ಆಫರ್ಗಳು ಬರ್ತಾ ಇದೆ. ತುಂಬಾ ಖುಷಿ ಆಗುತ್ತಿದೆ ನಮ್ಮ ಟೀಮ್ ಜೊತೆ ಬಂದಿದ್ದೇನೆ. ಇನ್ನು ರಕ್ಷಕ್ ಜೊತೆ ಹಾಗೂ ಕಾರ್ತಿಕ್ ಜೊತೆ ರೀಲ್ಸ್ ಮಾಡೋದು ಬಾಕಿ ಇದೆ. ಈ ವೇಳೆ ಸ್ನೇಹಿತ್ ಅವರ ಹೆಸರು ಹೇಳುತ್ತಿದ್ದಂತೆ ನಗು ನಗುತ್ತಾ ದೇವಸ್ಥಾನಕ್ಕೆ ಬಂದಿದ್ದೇವೆ. ಒಳ್ಳೆ ಮಾತಾಡೋಣ ಅಂತಷ್ಟೇ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಕ್ಷಕ್ ಹಾಗೂ ಕಾರ್ತಿಕ್ ಜೊತೆ ರೀಲ್ಸ್ ಮಾಡೋದು ಬಾಕಿ ಇದೆ
ಟೆಂಪಲ್ ರನ್ ಶುರು ಮಾಡಿಕೊಂಡ ಬಿಗ್ಬಾಸ್ ವಿನಯ್ ಗೌಡ ಟೀಮ್
ದೇವಸ್ಥಾನಕ್ಕೆ ಬಂದಿದ್ದೇವೆ ಒಳ್ಳೆ ಮಾತಾಡೋಣ ಎಂದ ನಮ್ರತಾ ಗೌಡ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಸ್ಪರ್ಧಿಗಳ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಗ್ಬಾಸ್ ಮುಗಿದ ಬಳಿಕ ಎಲ್ಲಾ ಸ್ಪರ್ಧಿಗಳು ಒಂದೆಡೆ ಸೇರಿಕೊಂಡು ಸಖತ್ ಪಾರ್ಟಿ ಮಾಡಿ ಎಂಜಾಯ್ ಮಾಡಿದ್ದರು. ಬಿಗ್ಬಾಸ್ ಮನೆಯಲ್ಲಿ ಆನೆ ಎಂದೇ ಕರೆಸಿಕೊಂಡು ಫೇಮಸ್ ಆಗಿದ್ದ ವಿನಯ್ ಗೌಡ ಟೀಮ್ ಟೆಂಪಲ್ ರನ್ ಶುರು ಮಾಡಿದ್ದಾರೆ.
ಇದನ್ನು ಓದಿ: BBK10: ಚಾಮುಂಡಿ ಬೆಟ್ಟದಲ್ಲಿ ಬಿಗ್ಬಾಸ್ ವಿನಯ್, ನಮ್ರತಾ, ಮೈಕಲ್, ರಕ್ಷಕ್ ನೋಡಲು ಮುಗಿಬಿದ್ದ ಫ್ಯಾನ್ಸ್!
ಹೌದು, ಬಿಗ್ಬಾಸ್ ಸ್ಪರ್ಧಿಗಳಾದ ನಮ್ರತಾ ಗೌಡ, ವಿನಯ್ ಗೌಡ, ರಕ್ಷಕ್ ಬುಲೆಟ್ ಹಾಗೂ ಮೈಕಲ್ ಈ ನಾಲ್ವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಇವರ ಜೊತೆಗೆ ವಿನಯ್ ಗೌಡ ಅವರ ಪತ್ನಿ ಅಕ್ಷತಾ ಗೌಡ ಹಾಗೂ ಮಗ ರುಷಬ್ ಗೌಡ ಕೂಡ ಆಗಮಿಸಿದ್ದರು. ಇನ್ನೂ ಬಿಗ್ಬಾಸ್ ಸ್ಪರ್ಧಿಗಳು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ದೌಡಾಯಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಆದರೆ ಈ ತಂಡದಲ್ಲಿ ಓರ್ವ ಸ್ಪರ್ಧಿ ಮಾತ್ರ ಮಿಸ್ ಆಗಿದ್ದರು. ಅವರೇ ಸ್ನೇಹಿತ್ ಗೌಡ. ಬಿಗ್ಬಾಸ್ನಿಂದ ಆಚೆ ಬಂದ ಬಳಿಕ ಸ್ನೇಹಿತ್ ನಮ್ರತಾಗೆ ಮೀಟ್ ಆಗಿಲ್ಲ. ಇದೇ ವಿಚಾರವಾಗಿ ನ್ಯೂಸ್ ಫಸ್ಟ್ನೊಂದಿಗೆ ನಮ್ರತಾ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಸ್ನೇಹಿತ್ ಬಗ್ಗೆ ಮಾತಾಡಿದ ನಮ್ರತಾ, ಬಿಗ್ಬಾಸ್ನಿಂದ ಆಚೆ ಬಂದ ಬಳಿಕ ಇದೇ ಮೊದಲ ಬಾರಿಗೆ ಇಷ್ಟು ಜನರನ್ನು ಭೇಟಿ ಆಗಿದ್ದೇನೆ. ಸಾಕಷ್ಟು ಸಿನಿಮಾ ಆಫರ್ಗಳು ಬರ್ತಾ ಇದೆ. ತುಂಬಾ ಖುಷಿ ಆಗುತ್ತಿದೆ ನಮ್ಮ ಟೀಮ್ ಜೊತೆ ಬಂದಿದ್ದೇನೆ. ಇನ್ನು ರಕ್ಷಕ್ ಜೊತೆ ಹಾಗೂ ಕಾರ್ತಿಕ್ ಜೊತೆ ರೀಲ್ಸ್ ಮಾಡೋದು ಬಾಕಿ ಇದೆ. ಈ ವೇಳೆ ಸ್ನೇಹಿತ್ ಅವರ ಹೆಸರು ಹೇಳುತ್ತಿದ್ದಂತೆ ನಗು ನಗುತ್ತಾ ದೇವಸ್ಥಾನಕ್ಕೆ ಬಂದಿದ್ದೇವೆ. ಒಳ್ಳೆ ಮಾತಾಡೋಣ ಅಂತಷ್ಟೇ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ