/newsfirstlive-kannada/media/post_attachments/wp-content/uploads/2024/09/karthik-mahesh.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ವಿನ್ನರ್​ ಕಾರ್ತಿಕ್ ಮಹೇಶ್ ಹೆಚ್ಚಾಗಿ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಬಿಗ್​ಬಾಸ್​ ವಿನ್ನರ್​ ಕಾರ್ತಿಕ್ ಮಹೇಶ್ ಮೇಲೆ ಏನು ಮಾಡ್ತಿದ್ದಾರೆ ಅಂತ ಅಭಿಮಾನಿಗಳು ಯೋಚನೆ ಮಾಡುತ್ತಾ ಇರುತ್ತಾರೆ.
/newsfirstlive-kannada/media/post_attachments/wp-content/uploads/2024/07/karthik.jpg)
ಸಿನಿಮಾಗಳ ಮೂಲಕ ಮಿಂಚೋಕೆ ತಯಾರಿ ಮಾಡಿಕೊಳ್ತಿದ್ದಾರೆ ನಟ ಕಾರ್ತಿಕ್ ಮಹೇಶ್​. ಈ ನಡುವೆ ಮುದ್ದಾದ ಅಳಿಯನಿಗೆ ಈಗಿನಿಂದಲೇ ನೀತಿ ಪಾಠ ಹೇಳಲು ಶುರು ಮಾಡಿದ್ದಾರೆ ಕಾರ್ತಿಕ್ ಮಹೇಶ್. ಕಾರ್ತಿಕ್​ ಬಿಗ್​ಬಾಸ್​ ಮನೆಯಲ್ಲಿದ್ದಾಗ ತಂಗಿಗೆ ಮಗು ಬಗ್ಗೆಯೇ ಹೆಚ್ಚಾಗಿ ಮಾತಾಡ್ತಿದ್ದರು. ಆ ಪುಟಾಣಿ ದೊಡ್ಡದಾಗಿದ್ದು, ಕಾರ್ತಿಕ್ ಅವರು​ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಮುದ್ದಿನ ಅಳಿಯನಿಗಾಗಿ ಮಿಸಲಿಟ್ಟಿದ್ದಾರೆ. ಮೊನ್ನೆಯಷ್ಟೇ ತಮ್ಮ ತಂಗಿಯ ಮಗನ ನಾಮಕರಣ ಸಮಾರಂಭ ಮಾಡಿದ್ರು. ಮುದ್ದಾದ ಅಳಿಯನಿಗೆ ಪಾರ್ಥ ಎಂದು ಹೆಸರು ಇಟ್ಟಿದ್ದರು.
View this post on Instagram
ಅಳಿಯನ ನಾಮಕರಣ ಸಮಾರಂಭದಲ್ಲಿ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು ಭಾಗಿಯಾಗಿ ಆ ಸಂಭ್ರಮವನ್ನು ದುಪ್ಪಟ್ಟು ಮಾಡಿದ್ರು. ಇದೀಗ ಬಿಗ್​ಬಾಸ್​ ವಿನ್ನರ್ ಕಾರ್ತಿಕ್ ಮಹೇಶ್​ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಅಳಿಯನ ಬಗ್ಗೆ ಒಂದೇ ಸಾಲಿನಲ್ಲಿ ನೂರೆಂಟು ಅರ್ಥ ಬರುವ ಹಾಗೇ ಬರೆದುಕೊಂಡಿದ್ದಾರೆ. ಕ್ಯೂಟ್​ ವಿಡಿಯೋ ಶೇರ್ ಮಾಡಿಕೊಂಡು ಎಂದಿಗೂ ನಿನ್ನ ಗುರಿ ತಪ್ಪದಿರು “ಪಾರ್ಥ” ನಿನ್ನ ಸಾರಥಿ ನಾನಿರುವೆ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us