newsfirstkannada.com

Bigg Boss: ಬಿಗ್​ಬಾಸ್​​ ಮನೆಗೆ ಮತ್ತೆ ಬಂದಿದ್ದೇ ತಪ್ಪಾಯ್ತಾ.. ನಮ್ರತಾ, ​​​ಸ್ನೇಹಿತ್ ಫ್ರೆಂಡ್‌​ಶಿಪ್ ​​ಇಲ್ಲಿಗೆ ಕೊನೆನಾ?

Share :

Published January 19, 2024 at 3:55pm

Update January 19, 2024 at 3:59pm

    ಬಿಗ್​ಬಾಸ್​​ ಸ್ಪರ್ಧಿ ಸ್ನೇಹಿತ್ ನಮ್ರತಾನ ತಿರಸ್ಕಾರ ಮಾಡಿದ್ದು ಸರಿನಾ?

    ಸ್ನೇಹಿತ ಅಂದುಕೊಂಡಿದ್ದ ಸ್ನೇಹಿತ್ ವರ್ತನೆ ಕಂಡು ನಮ್ರತಾಗೆ ಬೇಸರ

    ಕಾರ್ತಿಕ್-ನಮ್ರತಾ ಗೆಳತನ ಹೊರಗಡೆ ನೆಗೆಟಿವ್ ಆಗಿ ಕಾಣಿಸ್ತಾ ಇದಿಯಾ?

ಬಿಗ್​​ಬಾಸ್ ಮನೆಯಲ್ಲಿ ಈ ಮೊದಲು ಎಲಿಮಿನೇಟ್ ಆದ 7 ಕಂಟೆಸ್ಟೆಂಟ್​ ರೀ ಎಂಟ್ರಿ ಕೊಟ್ಟಿದ್ದರು. ಇವರುಗಳ ರೀ ಎಂಟ್ರಿಯಿಂದ ಬಿಗ್​ಮನೆ ಸದಸ್ಯರಿಗೆ ಫುಲ್ ಖುಷಿ ಆಗಿತ್ತು. ಜೊತೆಗೆ ನಮ್ರತಾಗೆ ಎಲಿಮಿನೇಟ್ ಆಗಿರೋ ಸದಸ್ಯರು ಹೊರಗಡೆಯಿಂದ ಬಂದು ಹೇಳಿದ ವಿಚಾರಗಳನ್ನು ಕೇಳಿ ಗೊಂದಲದ ಜೊತೆಗೆ ಬೇಸರವೂ ಆಗಿದ್ದಾರೆ. ಅದರಲ್ಲೂ ಜೀವದ ಸ್ನೇಹಿತ ಅಂದುಕೊಂಡಿದ್ದ ಸ್ನೇಹಿತ್ ವರ್ತನೆ ನಮ್ರತಾಗೆ ಇನ್ನಷ್ಟು ಬೇಸರವನ್ನುಂಟು ಮಾಡಿದೆ. ಇದರಿಂದ ಬಿಗ್​ಬಾಸ್ ಮನೆಯಲ್ಲಿ ನಮ್ರತಾ ಕಣ್ಣೀರು ಹರಿಸಿದ್ದಾರೆ.

ಟ್ವಿಸ್ಟ್ ಕೊಡುವ ಸಲುವಾಗಿ ಈ ವಾರ ಬಿಗ್​ಬಾಸ್ ಎಲಿಮಿನೇಟ್ ಆದ 7 ಕಂಟೆಸ್ಟೆಂಟ್​ಗಳನ್ನು ಮನೆಗೆ ಕರಿಸಿದ್ರು. ಕಾರ್ತಿಕ್- ನಮ್ರತಾ ಗೆಳತನ ಹೊರಗಡೆ ನೆಗೆಟಿವ್ ಆಗಿ ಕಾಣಿಸುತ್ತಿದ್ದು ಮೈಕಲ್, ಇಶಾನಿ, ರಕ್ಷಕ್ ಈ ಬಗ್ಗೆ ನಮ್ರತಾ ಜೊತೆ ಹೇಳಿಕೊಂಡಿದ್ದಾರೆ. ನಂತರ ಈ ವಿಷಯದ ಕುರಿತು ನಮ್ರತಾ- ಸ್ನೇಹಿತ್ ಇಬ್ಬರ ನಡುವೆ ಮಾತುಕತೆ ನಡೆದಿದೆ. ಸ್ನೇಹಿತ್ ನಮ್ರತಾ ಬೇಸರದಿಂದಿರುವುದನ್ನು ಕಂಡು ನೀವು ತುಂಬಾ ಟಾರ್ಗೆಟೆಡ್ ಫೀಲ್​ನಲ್ಲಿದ್ದೀರಿ ನನಗೆ ಇದು ಗೊತ್ತಾಗುತ್ತಿದೆ ಅಂತಾ ಹೇಳಿದ್ದಾರೆ. ನಿಮಗೇನು ಎಲ್ಲ ಗೊತ್ತಿಲ್ಲ ಎಂಬುದಾಗಿ ನಮ್ರತಾ ಉತ್ತರಿಸಿದ್ದು 3 ವಿಷಯದ ಕುರಿತು ಮಾತುಕತೆ ಕೂಡ ನಡೆಸಿದ್ದಾರೆ.

ನೀವು ನನ್ನ ಸಲುವಾಗಿ ಫೈಟ್ ಮಾಡೋದು ನಂಗಿಷ್ಟ ಆಗೋಲ್ಲ ಎಂಬುದಾಗಿ ನಮೃತಾ ಸ್ನೇಹಿತ್​ಗೆ ಮುಖಕ್ಕೆ ಹೊಡೆದಂತೆ ಹೇಳಿದ್ದರು. ನಂಗೆ ನಿಮ್ ಜೊತೆ ಮಾತನಾಡೋಕೆ ಇಷ್ಟ ಇಲ್ಲ. ಆದ್ರು ನಾಳೆ ಮನೆಯಿಂದ ಹೊರಡುತ್ತೀರಿ ಅಲ್ವಾ ಮಾತನಾಡೋಣ ಅಂತಾ ಹೇಳಿದ್ದಾರೆ. ನಂತ್ರ ನಾನು ಈ ಮನೆಯಿಂದ ಹೊರ ಬಂದ ಮೇಲೆ ನಿಮ್ ಜೊತೆ ಮಾತನಾಡುವುದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಆಗ ನಮ್ರತಾ ಸ್ನೇಹಿತ್​ಗೆ ನೀವು ಎಲ್ಲರ ಮನೆಯವರನ್ನು ಭೇಟಿ ಮಾಡಿದ್ದೀರಿ. ಆದ್ರೆ, ನನ್ನ ಫ್ಯಾಮಿಲಿಯವರನ್ನ ಕ್ಯಾಂಟೆಕ್ಟ್ ಮಾಡಿಲ್ಲ. ಇದು ನಿಮಗೆ ಸಿಲ್ಲಿ ಇರ್ಬೋದು ಆದ್ರೆ ನಂಗಲ್ಲ ಅಂತಾರೆ. ಇದಕ್ಕೆ ಸ್ನೇಹಿತ್ ನನ್ನನ್ನೇ ಫಸ್ಟ್ ಎಲ್ಲರೂ ಕ್ಯಾಂಟೆಕ್ಟ್ ಮಾಡಿದ್ದು. ನಾನು ಯಾರನ್ನೂ ಕ್ಯಾಂಟೆಕ್ಟ್ ಮಾಡಿಲ್ಲ ಅಂತಾ ಉತ್ತರಿಸಿದ್ರು. ಆದ್ರೆ ಸ್ನೇಹಿತ್ ವಿನಯ್ ಮಾತ್ರ ಗೆಲ್ಲಬೇಕು ಅಂತಾ ದೇವರ ತಾಯ್ತ ತಂದಿರೋದಕ್ಕೆ ನಮ್ರತಾ ಬೇಸರಗೊಂಡರು.

ನಮೃತಾ ಹೊರಗಡೆ ಏನೇ ನಡೆದಿದ್ರು ನನ್ನ ಕಾರ್ತಿಕ್ ಮಧ್ಯೆ ಏನೇ ಇದ್ರು ಕೈ ಇಟ್ಕೊಂಡಿದ್ರು, ಕಚಗುಳಿ ಮಾಡಿದ್ರು ಆದ್ರೆ ನೀವು ನನ್ನನ್ನು ಜಡ್ಜ್ ಮಾಡ್ತೀರಾ ಎಂದು ಯಾವತ್ತು ಅಂದುಕೊಂಡಿರಲಿಲ್ಲ ಎಂದು ಅಳುತ್ತಾರೆ. ಅದಕ್ಕೆ ಸ್ನೇಹಿತ್ ನಾನು ಹಾಗೇ ಜಡ್ಜ್ ಮಾಡಿಲ್ಲ ಎಂಬುದಾಗಿ ಉತ್ತರಿಸಿದ್ದರು. ನೀವು ಮಾತನಾಡಿದ್ದು ಅದನ್ನ ನಂಗೆ ತಲುಪಿಸಿದ್ದ ರೀತಿ ನನಗೆ ಬೇಸರ ಆಗಿದ್ದೆ ಜಾಸ್ತಿ. ಆಗಲೇ ನನಗೆ ಅಳು ಬಂದಿದ್ದು ಹಾಗಾಗಿ ಈ ಮೂರು ವಿಷಯವನ್ನು ನಾನು ಎಂದು ಮರೆಯುವುದಿಲ್ಲ.

ನಾನು ಗೆಲ್ತಿನೋ ಬಿಡ್ತಿನೋ, ಗೆಲ್ಲೋ ಅರ್ಹತೆ ಇದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ ನೀವು ನನ್ನನ್ನು ಡೀಮೋಟಿವೇಟ್ ಮಾಡಿದ್ರಿ ಎಂದು ಬೇಸರ ವ್ಯಕ್ತಪಡಿಸಿದ್ರು. ನಾನು ಇಲ್ಲಿಂದ ಆಚೆ ಹೋದ ಮೇಲೆ ನಿಮ್ಮ ಯಾರು ಮುಖಗಳನ್ನ ನೋಡಲ್ಲ ಎಂದು ಕಣ್ಣೀರು ಸುರಿಸಿದ್ದಾರೆ. ಹಾಗಾದ್ರೆ ನಮ್ರತಾ – ಸ್ನೇಹಿತ್ ನಡುವಿನ ಫ್ರೆಂಡ್​ಶಿಪ್​ಗೆ ಇಲ್ಲಿಂದನೇ ಬ್ರೇಕ್ ಬೀಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bigg Boss: ಬಿಗ್​ಬಾಸ್​​ ಮನೆಗೆ ಮತ್ತೆ ಬಂದಿದ್ದೇ ತಪ್ಪಾಯ್ತಾ.. ನಮ್ರತಾ, ​​​ಸ್ನೇಹಿತ್ ಫ್ರೆಂಡ್‌​ಶಿಪ್ ​​ಇಲ್ಲಿಗೆ ಕೊನೆನಾ?

https://newsfirstlive.com/wp-content/uploads/2023/12/bigg-boss-2023-12-05T173204.046.jpg

    ಬಿಗ್​ಬಾಸ್​​ ಸ್ಪರ್ಧಿ ಸ್ನೇಹಿತ್ ನಮ್ರತಾನ ತಿರಸ್ಕಾರ ಮಾಡಿದ್ದು ಸರಿನಾ?

    ಸ್ನೇಹಿತ ಅಂದುಕೊಂಡಿದ್ದ ಸ್ನೇಹಿತ್ ವರ್ತನೆ ಕಂಡು ನಮ್ರತಾಗೆ ಬೇಸರ

    ಕಾರ್ತಿಕ್-ನಮ್ರತಾ ಗೆಳತನ ಹೊರಗಡೆ ನೆಗೆಟಿವ್ ಆಗಿ ಕಾಣಿಸ್ತಾ ಇದಿಯಾ?

ಬಿಗ್​​ಬಾಸ್ ಮನೆಯಲ್ಲಿ ಈ ಮೊದಲು ಎಲಿಮಿನೇಟ್ ಆದ 7 ಕಂಟೆಸ್ಟೆಂಟ್​ ರೀ ಎಂಟ್ರಿ ಕೊಟ್ಟಿದ್ದರು. ಇವರುಗಳ ರೀ ಎಂಟ್ರಿಯಿಂದ ಬಿಗ್​ಮನೆ ಸದಸ್ಯರಿಗೆ ಫುಲ್ ಖುಷಿ ಆಗಿತ್ತು. ಜೊತೆಗೆ ನಮ್ರತಾಗೆ ಎಲಿಮಿನೇಟ್ ಆಗಿರೋ ಸದಸ್ಯರು ಹೊರಗಡೆಯಿಂದ ಬಂದು ಹೇಳಿದ ವಿಚಾರಗಳನ್ನು ಕೇಳಿ ಗೊಂದಲದ ಜೊತೆಗೆ ಬೇಸರವೂ ಆಗಿದ್ದಾರೆ. ಅದರಲ್ಲೂ ಜೀವದ ಸ್ನೇಹಿತ ಅಂದುಕೊಂಡಿದ್ದ ಸ್ನೇಹಿತ್ ವರ್ತನೆ ನಮ್ರತಾಗೆ ಇನ್ನಷ್ಟು ಬೇಸರವನ್ನುಂಟು ಮಾಡಿದೆ. ಇದರಿಂದ ಬಿಗ್​ಬಾಸ್ ಮನೆಯಲ್ಲಿ ನಮ್ರತಾ ಕಣ್ಣೀರು ಹರಿಸಿದ್ದಾರೆ.

ಟ್ವಿಸ್ಟ್ ಕೊಡುವ ಸಲುವಾಗಿ ಈ ವಾರ ಬಿಗ್​ಬಾಸ್ ಎಲಿಮಿನೇಟ್ ಆದ 7 ಕಂಟೆಸ್ಟೆಂಟ್​ಗಳನ್ನು ಮನೆಗೆ ಕರಿಸಿದ್ರು. ಕಾರ್ತಿಕ್- ನಮ್ರತಾ ಗೆಳತನ ಹೊರಗಡೆ ನೆಗೆಟಿವ್ ಆಗಿ ಕಾಣಿಸುತ್ತಿದ್ದು ಮೈಕಲ್, ಇಶಾನಿ, ರಕ್ಷಕ್ ಈ ಬಗ್ಗೆ ನಮ್ರತಾ ಜೊತೆ ಹೇಳಿಕೊಂಡಿದ್ದಾರೆ. ನಂತರ ಈ ವಿಷಯದ ಕುರಿತು ನಮ್ರತಾ- ಸ್ನೇಹಿತ್ ಇಬ್ಬರ ನಡುವೆ ಮಾತುಕತೆ ನಡೆದಿದೆ. ಸ್ನೇಹಿತ್ ನಮ್ರತಾ ಬೇಸರದಿಂದಿರುವುದನ್ನು ಕಂಡು ನೀವು ತುಂಬಾ ಟಾರ್ಗೆಟೆಡ್ ಫೀಲ್​ನಲ್ಲಿದ್ದೀರಿ ನನಗೆ ಇದು ಗೊತ್ತಾಗುತ್ತಿದೆ ಅಂತಾ ಹೇಳಿದ್ದಾರೆ. ನಿಮಗೇನು ಎಲ್ಲ ಗೊತ್ತಿಲ್ಲ ಎಂಬುದಾಗಿ ನಮ್ರತಾ ಉತ್ತರಿಸಿದ್ದು 3 ವಿಷಯದ ಕುರಿತು ಮಾತುಕತೆ ಕೂಡ ನಡೆಸಿದ್ದಾರೆ.

ನೀವು ನನ್ನ ಸಲುವಾಗಿ ಫೈಟ್ ಮಾಡೋದು ನಂಗಿಷ್ಟ ಆಗೋಲ್ಲ ಎಂಬುದಾಗಿ ನಮೃತಾ ಸ್ನೇಹಿತ್​ಗೆ ಮುಖಕ್ಕೆ ಹೊಡೆದಂತೆ ಹೇಳಿದ್ದರು. ನಂಗೆ ನಿಮ್ ಜೊತೆ ಮಾತನಾಡೋಕೆ ಇಷ್ಟ ಇಲ್ಲ. ಆದ್ರು ನಾಳೆ ಮನೆಯಿಂದ ಹೊರಡುತ್ತೀರಿ ಅಲ್ವಾ ಮಾತನಾಡೋಣ ಅಂತಾ ಹೇಳಿದ್ದಾರೆ. ನಂತ್ರ ನಾನು ಈ ಮನೆಯಿಂದ ಹೊರ ಬಂದ ಮೇಲೆ ನಿಮ್ ಜೊತೆ ಮಾತನಾಡುವುದಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಆಗ ನಮ್ರತಾ ಸ್ನೇಹಿತ್​ಗೆ ನೀವು ಎಲ್ಲರ ಮನೆಯವರನ್ನು ಭೇಟಿ ಮಾಡಿದ್ದೀರಿ. ಆದ್ರೆ, ನನ್ನ ಫ್ಯಾಮಿಲಿಯವರನ್ನ ಕ್ಯಾಂಟೆಕ್ಟ್ ಮಾಡಿಲ್ಲ. ಇದು ನಿಮಗೆ ಸಿಲ್ಲಿ ಇರ್ಬೋದು ಆದ್ರೆ ನಂಗಲ್ಲ ಅಂತಾರೆ. ಇದಕ್ಕೆ ಸ್ನೇಹಿತ್ ನನ್ನನ್ನೇ ಫಸ್ಟ್ ಎಲ್ಲರೂ ಕ್ಯಾಂಟೆಕ್ಟ್ ಮಾಡಿದ್ದು. ನಾನು ಯಾರನ್ನೂ ಕ್ಯಾಂಟೆಕ್ಟ್ ಮಾಡಿಲ್ಲ ಅಂತಾ ಉತ್ತರಿಸಿದ್ರು. ಆದ್ರೆ ಸ್ನೇಹಿತ್ ವಿನಯ್ ಮಾತ್ರ ಗೆಲ್ಲಬೇಕು ಅಂತಾ ದೇವರ ತಾಯ್ತ ತಂದಿರೋದಕ್ಕೆ ನಮ್ರತಾ ಬೇಸರಗೊಂಡರು.

ನಮೃತಾ ಹೊರಗಡೆ ಏನೇ ನಡೆದಿದ್ರು ನನ್ನ ಕಾರ್ತಿಕ್ ಮಧ್ಯೆ ಏನೇ ಇದ್ರು ಕೈ ಇಟ್ಕೊಂಡಿದ್ರು, ಕಚಗುಳಿ ಮಾಡಿದ್ರು ಆದ್ರೆ ನೀವು ನನ್ನನ್ನು ಜಡ್ಜ್ ಮಾಡ್ತೀರಾ ಎಂದು ಯಾವತ್ತು ಅಂದುಕೊಂಡಿರಲಿಲ್ಲ ಎಂದು ಅಳುತ್ತಾರೆ. ಅದಕ್ಕೆ ಸ್ನೇಹಿತ್ ನಾನು ಹಾಗೇ ಜಡ್ಜ್ ಮಾಡಿಲ್ಲ ಎಂಬುದಾಗಿ ಉತ್ತರಿಸಿದ್ದರು. ನೀವು ಮಾತನಾಡಿದ್ದು ಅದನ್ನ ನಂಗೆ ತಲುಪಿಸಿದ್ದ ರೀತಿ ನನಗೆ ಬೇಸರ ಆಗಿದ್ದೆ ಜಾಸ್ತಿ. ಆಗಲೇ ನನಗೆ ಅಳು ಬಂದಿದ್ದು ಹಾಗಾಗಿ ಈ ಮೂರು ವಿಷಯವನ್ನು ನಾನು ಎಂದು ಮರೆಯುವುದಿಲ್ಲ.

ನಾನು ಗೆಲ್ತಿನೋ ಬಿಡ್ತಿನೋ, ಗೆಲ್ಲೋ ಅರ್ಹತೆ ಇದೆಯೋ ಇಲ್ವೋ ಗೊತ್ತಿಲ್ಲ. ಆದ್ರೆ ನೀವು ನನ್ನನ್ನು ಡೀಮೋಟಿವೇಟ್ ಮಾಡಿದ್ರಿ ಎಂದು ಬೇಸರ ವ್ಯಕ್ತಪಡಿಸಿದ್ರು. ನಾನು ಇಲ್ಲಿಂದ ಆಚೆ ಹೋದ ಮೇಲೆ ನಿಮ್ಮ ಯಾರು ಮುಖಗಳನ್ನ ನೋಡಲ್ಲ ಎಂದು ಕಣ್ಣೀರು ಸುರಿಸಿದ್ದಾರೆ. ಹಾಗಾದ್ರೆ ನಮ್ರತಾ – ಸ್ನೇಹಿತ್ ನಡುವಿನ ಫ್ರೆಂಡ್​ಶಿಪ್​ಗೆ ಇಲ್ಲಿಂದನೇ ಬ್ರೇಕ್ ಬೀಳುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More