/newsfirstlive-kannada/media/post_attachments/wp-content/uploads/2025/01/BBK11-Hanumantha-kiccha-Sudeep-1.jpg)
ಮಾತು ಆರಂಭಿಸೋ ಮುನ್ನವೇ ಕೈಕಟ್ಟಿ ವಿನಯತೆಯಿಂದ ನಿಲ್ಲೋ ಸ್ಪರ್ಧಿ. ಥ್ಯಾಂಕ್ಯೂ ಬಿಗ್ ಬಾಸ್ ಎನ್ನುತ್ತಲೇ ದೈತ್ಯ ಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಲ್ಲೇ ಬಿಗ್ಬಾಸ್ ವಿನ್ನರ್ ಆದ ಹನುಮಂತು. ಇವರು ಬಿಗ್ಬಾಸ್ ಗೆಲ್ಲಲು ಕಾರಣವೇನು? ಕನ್ನಡಿಗರ ಮನ ಗೆದ್ದಿದ್ದು ಹೇಗೆ? ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.
ಹನುಮಂತು ಕನ್ನಡಿಗರಿಗೆ ಇಷ್ಟ ಆಗಲು ಕಾರಣವೇನು?
ಬಿಗ್ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತು. ಈತ ಸೀದಾ ಸಾದ ಹಳ್ಳಿಹೈದ. ಹನುಮಂತುಗೆ ರಿಯಾಲಿಟಿ ಶೋಗಳು ಹೊಸದೇನಲ್ಲ. ತನ್ನ ಹಾಡುಗಳ ಮೂಲಕವೇ ಕನ್ನಡಿಗರ ಮನ ಗೆದ್ದಿದ್ದ ಈತನಿಗೆ ಬಿಗ್ಬಾಸ್ ವೇದಿಕೆ ಮಾತ್ರ ಖಂಡಿತ ಹೊಸತು. ಬೇರೆ ಸ್ಪರ್ಧಿಗಳ ನಾಟಕದ ಮಧ್ಯೆ ಯಾವುದೇ ಬಣ್ಣ ಬಳಿದುಕೊಳ್ಳದೆ ತಾನು ಹೇಗೆ ಇದ್ದನೋ ಹಾಗೆಯೇ ಆಟ ಆಡಿದ ಕೆಂಟೆಸ್ಟಂಟ್. ಇವರ ನೈಜ ಆಟದ ಜತೆಗೆ ವ್ಯಕ್ತಿತ್ವವೇ ಜನರಿಗೆ ಇಷ್ಟವಾದದ್ದು.
ಹಳ್ಳಿಹೈದ ಹನುಮಂತು
ತನ್ನ ಗ್ರಾಮೀಣ ಭಾಷೆಯಿಂದಲೇ ಹೆಸರು ಮಾಡಿದ ಹನುಮಂತು. ಹಾಡು, ನಡವಳಿಕೆ ಮೂಲಕವೂ ಅಷ್ಟೇ ಫೇಮಸ್ ಆದ್ರು. ದೊಡ್ಮನೆಯಲ್ಲಿ ಏನೇ ಒಂದು ವಿಚಾರವಾದ್ರೂ ಹಾಡು ಹಾಡುತ್ತಲೇ ಕೌಂಟರ್ ಕೊಡುತ್ತಿದ್ದ. ಹಾಡು ಹಾಡುತ್ತಲೇ ಟಾಸ್ಕನಲ್ಲಿ ಗೆಲ್ಲುತ್ತಾ ಹೋದ. ಆಗಲೇ ಹನುಮಂತನಿಗೆ ಬಿಗ್ಬಾಸ್ ಗೆಲ್ಲುವ ಸಾಮರ್ಥ್ಯ ಇದೆ ಎಂದು ಕನ್ನಡಿಗರು ಭಾವಿಸಿದ್ರು.
ಹನುಮಂತು ತಾನು ಹೇಗೆ ಇದ್ದೇನೋ ಹಾಗೆಯೇ ಇದ್ದ. ಇದು ಬಿಗ್ಬಾಸ್ ಆಟದಲ್ಲಿ ಕೆಲ ಸ್ಪರ್ಧಿಗಳಿಗೆ ನಾಟಕೀಯವಾಗಿ ಕಂಡಿತು. ಇದು ಹನುಮಂತನ ಮುಗ್ಧತೆ ಬದಲಿಗೆ, ಮೈಂಡ್ ಗೇಮ್ ಎಂದು ಹಲವರು ಟೀಕಿಸಿದ್ದರು.
ಇದನ್ನೂ ಓದಿ: BBK11GrandFinale: ಅಮ್ಮನ ಕನಸು ನನಸಾಗದ ನೋವು.. ಬಿಗ್ಬಾಸ್ ಮನೆಯಿಂದ ಮೋಕ್ಷಿತಾ ಔಟ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ