/newsfirstlive-kannada/media/post_attachments/wp-content/uploads/2025/01/HANUMANTHU.jpg)
ಬಿಗ್​​ಬಾಸ್​ ಫಿನಾಲೆಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿ ಇದೆ. ಯಾರ ಕೈ ಸೇರುತ್ತೆ ಬಿಗ್​ಬಾಸ್ ಟ್ರೋಫಿ ಎಂಬ ಎಕ್ಸೈಟ್​ನಲ್ಲಿ ವೀಕ್ಷಕರಿದ್ದಾರೆ. ಇತ್ತ ಟ್ರೋಫಿ ಪಡೆದೇ ತೀರುತ್ತೇವೆ ಎಂಬ ಜಿದ್ದಿನಲ್ಲಿ ಎಲ್ಲಾ ಸ್ಪರ್ಧಿಗಳಿದ್ದಾರೆ. ಆ ಅದೃಷ್ಟ ಯಾರಿಗಿದೆ ಅನ್ನೋದೇ ಸದ್ಯದ ಕುತೂಹಲ.
ಈ ಮಧ್ಯೆ ಬಿಗ್​ಬಾಸ್ ವೀಕ್ಷಕರ ಎದೆಬಡಿತವನ್ನು​ ದಿನದಿಂದ ದಿನಕ್ಕೆ ಹೆಚ್ಚಿಸ್ತಿದ್ದಾರೆ. ಬೆಳಗ್ಗೆ ಬಿಗ್​ಬಾಸ್​ ಪ್ರಮೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್​ಗೆ ಸಂಬಂಧಿಸಿದ ವಿಡಿಯೋ ತುಣುಕು ಇದಾಗಿದೆ. ಬಿಗ್​ಬಾಸ್​ ಪ್ರತಿ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿದ್ದಾರೆ.
ಅಂದರೆ ಸ್ಪರ್ಧಿಗಳ ಮುಂದೆ ಟ್ರೋಫಿಯನ್ನು ಇಟ್ಟು, ಮನದಾಳ ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ. ಅಂತೆಯೇ ಪ್ರತಿ ಸ್ಪರ್ಧಿಗಳು, ಟ್ರೋಫಿ ಮುಂದೆ ಬಂದು ತಮ್ಮ ಕನಸಿನ ಮದಾಳ ಹಂಚಿಕೊಂಡಿದ್ದಾರೆ. ಅಂದರೆ ನಿನ್ನ (ಟ್ರೋಫಿ) ಅಗತ್ಯತೆ ನನಗೆ ಎಷ್ಟಿದೆ ಅನ್ನೋದನ್ನು ವಿವರಿಸಿದ್ದಾರೆ. ಅದರಲ್ಲಿ ಹನುಮಂತು ಅವ್ವ, ತಾಯಿ ಗರುಡವ್ವ ಎಂದಿದ್ದಾರೆ.
ವಿಶೇಷವಾಗಿ ತ್ರಿವಿಕ್ರಮ್, ಟ್ರೋಫಿ ಮುಂದೆ ಕೂತು.. ನಿನ್ನ ಹತ್ತಿರ ಇರುವ ಎರಡು ರೆಕ್ಕೆಯನ್ನು ನನಗೆ ಕೊಡು. ದೊಡ್ಡ ಸ್ಟಾರ್ ಆಗಿ ಬೆಳೆಯಬೇಕು ಎಂಬ ಆಸೆ ನನಗೆ ಇದೆ ಎಂದಿದ್ದಾರೆ. ಇನ್ನು ಭವ್ಯ ಗೌಡ, ಟ್ರೋಫಿ ಜೊತೆ ನನಗೆ ಬರುವ ದುಡ್ಡಿನಿಂದಲೂ ಉಪಯೋಗ ಇದೆ ಎನ್ನುತ್ತ, ತಂದೆಗೆ ಆಗಿದ್ದ ನೋವನ್ನು ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us