/newsfirstlive-kannada/media/post_attachments/wp-content/uploads/2024/09/Sudeep_Darshan.jpg)
ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಈಗಾಗಲೇ ಶುರುವಾಗಿದೆ. ನಟ ಕಿಚ್ಚ ಸುದೀಪ್​​ ಸುಮ್ಮಖದಲ್ಲೇ ಎಲ್ಲಾ ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಾಗಿದೆ. ಇದರ ಮಧ್ಯೆ ಕಿಚ್ಚನ ಮುಂದೆಯೇ ಬಿಗ್​ಬಾಸ್​ ವೇದಿಕೆ ಮೇಲೆ ಸ್ಪರ್ಧಿ ಒಬ್ಬರು ದರ್ಶನ್​​ ಬಗ್ಗೆ ಮಾತಾಡಿದ್ದಾರೆ.
ಈ ಬಾರಿ ಬಿಗ್​​ಬಾಸ್​ ಮನೆಗೆ ಸ್ಯಾಂಡಲ್​ವುಡ್​ ನಟ ಕೀರ್ತಿರಾಜ್​ ಮಗ ಧರ್ಮ ಕೀರ್ತಿರಾಜ್​ ಎಂಟ್ರಿ ಕೊಟ್ಟಿದ್ದಾರೆ. ತನ್ನ ಬೆಳವಣಿಗೆಗೆ ಮೂಲ ಕಾರಣ ನಟ ದರ್ಶನ್​ ಎಂದು ವೇದಿಕೆ ಮೇಲೆ ಧರ್ಮ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/09/Dharma-Keerthiraj.jpg)
ದರ್ಶನ್​ ಹೆಸರು ತೆಗೆದುಕೊಂಡಿದ್ದು ಏಕೆ?
ಬಿಗ್​​ಬಾಸ್​ ವೇದಿಕೆ ಮೇಲೆ ಮಾತಾಡುವಾಗ ಧರ್ಮ ಅವರು, ನಾನು ನವಗ್ರಹ ಸಿನಿಮಾದಿಂದ ಸ್ಯಾಂಡಲ್​ವುಡ್​​ ಎಂಟ್ರಿ ಕೊಟ್ಟಿದ್ದು. ಇದಕ್ಕೆ ಕಾರಣ ತೂಗುದೀಪ ಪ್ರೊಡಕ್ಷನ್. ನನ್ನ ಕರಿಯರ್​​ನಲ್ಲಿ ಮಹತ್ವದ ಪಾತ್ರ ವಹಿಸಿದ್ದು ನಟ ದರ್ಶನ್, ದಿನಕರ್ ಅವರು ಎಂದರು. ಈ ಸಂದರ್ಭದಲ್ಲಿ ಸುದೀಪ್​​ ಅವರು ಮಾತನ್ನು ಆಲಿಸಿದ್ರು.
ಯಾರು ಧರ್ಮ ಕೀರ್ತಿರಾಜ್​​?
ನವಗ್ರಹ ಚಿತ್ರದಲ್ಲಿ ಧರ್ಮ ಚಾಕ್ಲೆಟ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ರು. ಇವರು ಓ ಮನಸೆ, ಚಾಣಾಕ್ಷ, ಖಡಕ್, ಮುಮ್ತಾಜ್, ಸುಮನ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಬಿಗ್​ಬಾಸ್​ ಮನೆಗೆ ಹೋಗಿದ್ದಾರೆ.
ಇದನ್ನೂ ಓದಿ:BBK11: ಬಿಗ್ ಬಾಸ್ ಮನೆಯಲ್ಲಿ ಬೆಂಕಿ.. ನರಕ ಬಿಟ್ಟು ಸ್ವರ್ಗಕ್ಕೆ ಬಂದ ಚೈತ್ರಾ ಆರ್ಭಟ; ಏನಾಯ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us