/newsfirstlive-kannada/media/post_attachments/wp-content/uploads/2024/10/Bihar-Iphone.jpg)
ಪೋಷಕರು ಐಫೋನ್​ ಕೊಡಿಸಲು ನಿರಾಕರಿಸಿದ ಹಿನ್ನೆಲೆ ತನ್ನ ಮನೆಯಲ್ಲಿ ತಾನೇ ದರೋಡೆ ನಡೆಸಿದ ಪ್ರಸಂಗ ಬೆಳಕಿಗೆ ಬಂದಿದೆ. ಕೊನೆಗೆ ಮನೆ ಮಗನೇ ಈ ದರೋಡೆಯ ಮಾಸ್ಟರ್​ ಮೈಂಡ್​ ಎಂದು ತಿಳಿದು ಅಚ್ಚರಿಗೊಂಡಿದ್ದಾರೆ.
ಬಿಹಾರದ ನಳಂದ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ತಂದೆ ಅಕ್ಟೋಬರ್​ 22 ರಂದು ನನ್ನ ಮನೆಯಲ್ಲಿ ದರೋಡೆ ನಡೆದಿದೆ. ಮಗನನ್ನು ಮನೆಯೊಳಕ್ಕೆ ಬೀಗ ಹಾಕಿ ಯಾರೋ ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕನ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮನೆ ಮಗನ ಮುಖವಾಡ ಕಳಚಿದೆ.
ಶಿಕ್ಷಕ ನೀಡಿದ ದೂರಿನ ಅನ್ವಯ ತನಿಖೆಗೆ ಇಳಿದ ಪೊಲೀಸರಿಗೆ ನಾಲ್ವರು ಮನೆಯೊಳಕ್ಕೆ ನುಗ್ಗಿ ದರೋಡೆ ಮಾಡಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಚಿನ್ನಾಭರಣ ಮತ್ತು ಬೆಳ್ಳಿ ಆಭರಣ ದೋಚಿರುವುದು ಬೆಳಕಿಗೆ ಬಂದಿದೆ. ಬಳಿಕ ಕೌಟುಂಬಿಕ ಕಲಹದಿಂದಾಗಿ ಈ ದರೋಡೆ ನಡೆದಿರಬಹುದೇ ಎಂಬ ಅನುಮಾನ ಪೊಲೀಸರಿಗೆ ಕಾಡಿದೆ. ಆದರೆ ಕೊನೆಗೆ ಅಪ್ರಾಪ್ತ ಮಗನಿಂದಲೇ ಈ ದರೋಡೆ ನಡೆದಿದೆ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: BBK11: ಇಂದು ಕಿಚ್ಚನ ಬದಲು ಭಟ್ರು! ಬಿಗ್​ ಬಾಸ್​ ಮನೆಯೊಳಕ್ಕೆ ಕಾಲಿಟ್ಟ ವಿಕಟ ಕವಿ
ಮಗ ಐಫೋನ್​ ಆಸೆಗೆ ಬಿದ್ದು ಪೋಷಕರಿಗೆ ಒತ್ತಾಯಿಸಿದ್ದಾನೆ. ಆದರೆ ಪೋಷಕರು ದುಬಾರಿ ಐಫೋನ್​ ಕೊಡಿಸಲು ನಿರಾಕರಿಸಿದ್ದಾರೆ. ಕೊನೆಗೆ ಮಗ ತನ್ನ ಮೂವರು ಸ್ನೇಹಿತರನ್ನು ಕೂಡಿಸಿ ದರೋಡೆ ಮಾಸ್ಟರ್ ಪ್ಲಾನ್​ ಹೆಣೆದಿದ್ದಾನೆ. ನಕಲಿ ಕೀ, ಕತ್ತರಿಸುವ ಸಾಧನವನ್ನು ಸ್ನೇಹಿತರಿಗೆ ನೀಡಿ ದರೋಡೆ ಮಾಡಿದ್ದಾನೆ. ​ಸದ್ಯ ಮನೆಮಗ ಮತ್ತು ಇಬ್ಬರು ಸ್ನೇಹಿತರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಮತ್ತೋರ್ವ ತಪ್ಪಿಸಿಕೊಂಡಿದ್ದು, ಹುಡುಕಾಟ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ