ಮುಂದಿನ ತಿಂಗಳು ಮದುವೆ ನಿಶ್ಚಯ.. ರಸ್ತೆ ಅಪಘಾತದಲ್ಲಿ ಕಣ್ಮುಚ್ಚಿದ ನರೇಗಾ ಇಂಜಿನಿಯರ್

author-image
Bheemappa
Updated On
ಮುಂದಿನ ತಿಂಗಳು ಮದುವೆ ನಿಶ್ಚಯ.. ರಸ್ತೆ ಅಪಘಾತದಲ್ಲಿ ಕಣ್ಮುಚ್ಚಿದ ನರೇಗಾ ಇಂಜಿನಿಯರ್
Advertisment
  • ಹೊಸ ಬದುಕಿನ ಕನಸು ಕಂಡಾಗಲೇ ವಿಧಿಯಾಟ ಬೇರೆ ಆಗಿತ್ತು
  • ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಣ್ಮುಚ್ಚಿದ ಯುವತಿ
  • ಸ್ವಗ್ರಾಮಕ್ಕೆ ಯುವತಿ ಹಿಂತಿರುಗುವಾಗ ನಡೆದ ಭಯಾನಕ ಅಪಘಾತ

ರಾಮನಗರ: ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನರೇಗಾ ಮಹಿಳಾ ಇಂಜಿನಿಯರ್ ಜೀವ ಕಳೆದುಕೊಂಡ ಘಟನೆ ರಾಮನಗರದ ಹಲಗೂರು ಸಮೀಪದ ಬಸಾಪುರ ಗೇಟ್ ಬಳಿ ನಡೆದಿದೆ.

ಶರಣ್ಯ ಗೌಡ (25) ಪ್ರಾಣ ಬಿಟ್ಟವರು. ಮೂಲತಃ ಮಂಡ್ಯದ ಮಳವಳ್ಳಿ ತಾಲೂಕಿನ ಬಳೆಹೊನ್ನಿಗನ ಗ್ರಾಮದ ಶರಣ್ಯ ಅವರು, ಕಳೆದ ಒಂದು ವರ್ಷದಿಂದ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕನಕಪುರ ತಾಲೂಕಿನ ಸಾತನೂರು ಪಂಚಾಯತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿ ಸ್ವಗ್ರಾಮದಿಂದ ಹಲಗೂರಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

publive-image

ಇದನ್ನೂ ಓದಿ:BDA ಫ್ಲ್ಯಾಟ್​ ಖರೀದಿಗೆ ಮುಗಿಬಿದ್ದ ಜನ.. ಒಂದೇ ದಿನ 175 ಸೇಲ್, ಒಂದು ನಿವಾಸಕ್ಕೆ ಎಷ್ಟು ಲಕ್ಷ?

ಸ್ವಗ್ರಾಮ ಬಳೆಹೊನ್ನಿಗನಕ್ಕೆ ಬೈಕ್​ನಲ್ಲಿ ಹೋಗುವಾಗ ಎರಡು ಬೈಕ್​ಗಳ ನಡುವೆ ಭಯಾನಕವಾಗಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದ ತೀವ್ರ ರಸ್ತಸ್ರಾವದಿಂದ ಶರಣ್ಯ ಸ್ಥಳದಲ್ಲೇ ಕಣ್ಮುಚ್ಚಿದ್ದಾರೆ. ಸದ್ಯ ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇನ್ನೊಂದು ನೋವಿನ ಸಂಗತಿ ಎಂದರೆ ಮುಂದಿನ ತಿಂಗಳು ಅಂದರೆ ಫೆಬ್ರುವರಿ 16ಕ್ಕೆ ಶರಣ್ಯ ಮದುವೆ ನಿಶ್ಚಯ ಆಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment