/newsfirstlive-kannada/media/post_attachments/wp-content/uploads/2025/05/accident15.jpg)
ಮೈಸೂರು: ಮಿನಿ ಲಾರಿ ಹಾಗೂ ಬೈಕ್ ನಡುವೆ ಭೀಕರವಾಗಿ ಡಿಕ್ಕಿಯಾಹಿ ಇಬ್ಬರು ಸ್ಥಳದಲ್ಲಿ ಜೀವಬಿಟ್ಟಿರೋ ಘಟನೆ ಗೊರಹಳ್ಳಿ ಕೆರೆ ಏರಿಯಾ ಮೇಲೆ ನಡೆದಿದೆ.
ಇದನ್ನೂ ಓದಿ:ಅಬ್ದುಲ್ ರಹಿಮಾನ್ ಕೇಸ್.. ಕರಾವಳಿ ಮುಸ್ಲಿಂ ಕಾಂಗ್ರೆಸ್ ಮುಖಂಡರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಅಪಘಾತದ ತೀವ್ರತೆಗೆ ಬೈಕ್ ಸವಾರನ ರುಂಡವೇ ಹಾರಿಹೋಗಿದೆ. ಅಪಘಾತದಲ್ಲಿ ಪ್ರಾಣಬಿಟ್ಟ ಯುವರು ಪಿರಿಯಾಪಟ್ಟಣ ತಾಲೂಕು ಹಿಟ್ನೆಬಾಗಿಲು ಗ್ರಾಮದ ನಿವಾಸಿಗಳು. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತ ಇಬ್ಬರ ಶವವನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ