/newsfirstlive-kannada/media/post_attachments/wp-content/uploads/2025/03/scientist.jpg)
ಪಾರ್ಕಿಂಗ್ ವಿಚಾರಕ್ಕೆ ಅನೇಕ ಕಡೆಗಳಲ್ಲಿ ಆಗಾಗ ಗಲಾಟೆಗಳಾಗಿ ಪೊಲೀಸ್ ಠಾಣೆಗೆ ಹೋಗಿರೋದನ್ನ ನೋಡಿದ್ದೇವೆ. ಇದೀಗ ಬಾಡಿಗೆ ಮನೆಯ ಬಳಿ ಪಾರ್ಕಿಂಗ್ ವಿಚಾರಕ್ಕೆ ಆದ ಗಲಾಟೆಯಲ್ಲಿ ನೆರೆ ಮನೆಯವನಿಂದ ಹಲ್ಲೆಗೊಳಗಾಗಿದ್ದ ವಿಜ್ಞಾನಿಯೊಬ್ಬರ ಉಸಿರನ್ನೇ ನಿಲ್ಲಿಸಿದೆ. ಆ ರಾತ್ರಿ ಆಗಿದ್ದೇನು?.
ವಿಜ್ಞಾನಿಯೊಬ್ಬರ ಜೀವ ಅಂತ್ಯವಾಗಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ಮನೆಯ ಬಳಿ ಅಷ್ಟೆ ಪಾರ್ಕಿಂಗ್ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆ ನಡೆದಿದೆ. ಆ ಜಗಳ ವಿಕೋಪಕ್ಕ ತಿರುಗಿ ಜೀವ ನಿಲ್ಲಿಸುವಲ್ಲಿ ಅಂತ್ಯವಾಗಿದೆ.
ಅಭಿಷೇಕ್ ಸ್ವರ್ಣಕರ್, ವಿದೇಶದಲ್ಲಿ ಸಖತ್ ಹೆಸರು ಮಾಡಿದ್ದ ವಿಜ್ಞಾನಿ. ರಾತ್ರಿ ಅಭಿಷೇಕ್ ಸ್ವರ್ಣಕರ್ ತಮ್ಮ ಬೈಕ್ ನಿಲ್ಲಿಸುತ್ತಿದ್ದಾಗ ನೆರೆಮನೆಯ ಮಾಂಟಿ ಕಿರಿಕ್ ಮಾಡಿದ್ದಾನೆ. ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಸ್ವರ್ಣಕರ್ರನ್ನ ಮಾಂಟಿ ತಳ್ಳಿದ್ದಾನೆ. ಜೋರಾಗಿ ತಳ್ಳಿದ್ರಿಂದ ಸ್ವರ್ಣಕರ್ ರಸ್ತೆಗೆ ಬಿದ್ದಿದ್ದಾರೆ. ಇನ್ನೂ ಜಗಳವಾಗ್ತಿರೊ ಸೌಂಡ್ ಕೇಳ್ತಿದ್ದಂತೆ ಮನೆಯವರೆಲ್ಲ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ಮಾಂಟಿ ಓಡಿ ಹೋಗಿದ್ದ.
ವಿಜ್ಞಾನಿ ಸ್ವರ್ಣಕರ್, ಮೊದಲು ಕೆಲವರ ಸಹಾಯದಿಂದ ಎದ್ದು ನಿಂತಿದ್ದರು. ಆದ್ರೆ, ಮತ್ತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟೊತ್ತಿಗೆ ಸ್ವರ್ಣಕರ್ ಉಸಿರು ನಿಂತೋಗಿದೆ.
ಪಾರ್ಕಿಂಗ್ಗಾಗಿ ವಿಜ್ಞಾನಿಯ ಜೀವ ಅಂತ್ಯ
- ಪೋಷಕರ ಜೊತೆಯಲ್ಲಿ ಮೊಹಾಲಿಯ ಸೆಕ್ಟರ್ 67ರಲ್ಲಿ ವಾಸ
- ಮಾಂಟಿ ಎಂಬಾತನ ಜೊತೆ ಪಾರ್ಕಿಂಗ್ ವಿಚಾರಕ್ಕೆ ವಾಗ್ವಾದ
- ಧನ್ಬಾದ್ನವರಾದ ಅಭಿಷೇಕ್ ಸ್ವರ್ಣಕರ್ ಒಬ್ಬ ವಿಶಿಷ್ಟ ವಿಜ್ಞಾನಿ
- ಸ್ವಿಟ್ಜರ್ಲ್ಯಾಂಡ್ನಿಂದ ಭಾರತಕ್ಕೆ ವಾಪಸ್, IISERನಲ್ಲಿ ಕೆಲಸ
- ಕಿಡ್ನಿ ಕಸಿ ಚಿಕಿತ್ಸೆಗೆ ಒಳಗಾಗಿದ್ದ ವಿಜ್ಞಾನಿ ಅಭಿಷೇಕ್ ಸ್ವರ್ಣಕರ್
- ಅಭಿಷೇಕ್ ಸ್ವರ್ಣಕರ್ಗೆ ಸಹೋದರಿ ಕಿಡ್ನಿ ದಾನ ಮಾಡಿದ್ದರು
- ಆಪರೇಷನ್ ಆಗಿದ್ದ ಕಾರಣ ಸ್ವರ್ಣಕರ್ ಡಯಾಲಿಸಿಸ್ನಲ್ಲಿದ್ರು
- ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದ್ರೂ ಆಸ್ಪತ್ರೆಯಲ್ಲಿ ನಿಧನ
ಇದನ್ನೂ ಓದಿ: ಇಂದು ಅಪ್ಪು ಸಿನಿಮಾ ರೀ ರಿಲೀಸ್, ಕ್ರೇಜ್ ಏನು ಕಡಿಮೆ ಇಲ್ಲ.. ಪುನೀತ್ ರಾಜ್ಕುಮಾರ್ ಫ್ಯಾನ್ಸ್ ಸಂಭ್ರಮ
ಸದ್ಯ ಆರೋಪಿ ಮಾಂಟಿ ಎಸ್ಕೇಪ್ ಆಗಿದ್ದಾನೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಜ್ಞಾನಿ ಕುಟುಂಬ ಒತ್ತಾಯಿಸಿದೆ. ಬಿಎನ್ಎಸ್ 105 ಅಡಿ ಉದ್ದೇಶ ಪೂರ್ವಕವಲ್ಲದ ಹತ್ಯೆ ಪ್ರಕರಣ ಎಂದು ದಾಖಲಿಸಲಾಗಿದೆ. ಕೇಸ್ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ವಿಜ್ಞಾನಿಯ ದುರಂತ ಅಂತ್ಯವೂ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ವಿಚಾರಕ್ಕೆ ನಡೆಯುವ ಗಲಾಟೆಗಳು ಹೇಗೆ ಹಿಂಸಾತ್ಮಕವಾಗುತ್ತಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ