ತನ್ನ ಪಾಡಿಗೆ ತಾನು ಹೋಗ್ತಿದ್ದಾಗ ನೀಲಗಾಯ್ ಓಡಿ ಬಂದು ಡಿಕ್ಕಿ
ಘೋರ ಸಾವು! ರಸ್ತೆಯಲ್ಲಿ ವ್ಯಕ್ತಿಯನ್ನ ಬಲಿ ಪಡೆದ ನೀಲಗಾಯ್
ನೀಲಗಾಯ್ ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಗೆ ಕೊಂಬು ಚುಚ್ಚಿವೆ
ಮುಂಬೈ: ಬೈಕ್ಗೆ ನೀಲಗಾಯ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಇನಾಯತ್ ನಗರ ಠಾಣಾ ವ್ಯಾಪ್ತಿಯ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಜಯಿ ಪಾಠಕ್ ಗ್ರಾಮದ ಮುಕೇಶ್ ಪಾಂಡ್ಯ (28) ಸಾವನ್ನಪ್ಪಿದ ದುರ್ದೈವಿ. ಬೈಕ್ ಸವಾರ ಪಾಂಡ್ಯ ಇನಾಯತ್ ನಗರ ಮಾರುಕಟ್ಟೆಗೆ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಸಡನ್ ಆಗಿ ನೀಲಗಾಯ್ ರಸ್ತೆ ದಾಟಲು ವೇಗವಾಗಿ ಓಡಿ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಡಿಕ್ಕಿ ವೇಳೆ ನೀಲಗಾಯ್ ಪ್ರಾಣಿಯ ಕೊಂಬುಗಳು ಸವಾರನ ಎದೆಗೆ ಬಲವಾಗಿ ಚುಚ್ಚಿಕೊಂಡಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದನು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಂಯುಕ್ತಾ, ಶಶಿಕಲಾ ಜೊಲ್ಲೆ ಗಂಡನಿಗಿಂತ ಶ್ರೀಮಂತರು.. ಇಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನೂ ಕೋಟ್ಯಾಧಿಪತಿ..!
UP : अयोध्या में नीलगाय की टक्कर से 28 वर्षीय मुकेश पांडेय की मौत हो गई। नीलगाय दौड़ती हुई हाइवे पार कर रही थी। टकराकर बाइक सवार मुकेश के सीने में सींग घुस गए। pic.twitter.com/B43wWX4LrO
— Sachin Gupta (@SachinGuptaUP) April 15, 2024
ಇದನ್ನೂ ಓದಿ: ಚರ್ಚ್ ಒಳಗೆ ಮಾರಣಾಂತಿಕ ಅಟ್ಯಾಕ್, ಧರ್ಮೋಪದೇಶ ಮಾಡ್ತಿದ್ದ ಬಿಷಪ್ ಮೇಲೆ ಚೂರಿ ಇರಿತ
ತಕ್ಷಣ ಸ್ಥಳೀಯರು ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 5 ವರ್ಷಗಳ ಹಿಂದೆ ಮದುವೆಯಾಗಿದ್ದ ಮುಖೇಶ್ಗೆ 4 ವರ್ಷದ ಮಗಳಿದ್ದಾಳೆ. ಇನ್ನು ಆಕ್ಸಿಡೆಂಟ್ನಲ್ಲಿ ನೀಲಗಾಯ್ ಕೂಡ ಗಾಯಗೊಂಡಿದ್ದು ಹಾಗೇ ಓಡಿ ಹೋಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತನ್ನ ಪಾಡಿಗೆ ತಾನು ಹೋಗ್ತಿದ್ದಾಗ ನೀಲಗಾಯ್ ಓಡಿ ಬಂದು ಡಿಕ್ಕಿ
ಘೋರ ಸಾವು! ರಸ್ತೆಯಲ್ಲಿ ವ್ಯಕ್ತಿಯನ್ನ ಬಲಿ ಪಡೆದ ನೀಲಗಾಯ್
ನೀಲಗಾಯ್ ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಗೆ ಕೊಂಬು ಚುಚ್ಚಿವೆ
ಮುಂಬೈ: ಬೈಕ್ಗೆ ನೀಲಗಾಯ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಇನಾಯತ್ ನಗರ ಠಾಣಾ ವ್ಯಾಪ್ತಿಯ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಜಯಿ ಪಾಠಕ್ ಗ್ರಾಮದ ಮುಕೇಶ್ ಪಾಂಡ್ಯ (28) ಸಾವನ್ನಪ್ಪಿದ ದುರ್ದೈವಿ. ಬೈಕ್ ಸವಾರ ಪಾಂಡ್ಯ ಇನಾಯತ್ ನಗರ ಮಾರುಕಟ್ಟೆಗೆ ಬೈಕ್ನಲ್ಲಿ ಹೋಗುತ್ತಿದ್ದರು. ಈ ವೇಳೆ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಸಡನ್ ಆಗಿ ನೀಲಗಾಯ್ ರಸ್ತೆ ದಾಟಲು ವೇಗವಾಗಿ ಓಡಿ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಡಿಕ್ಕಿ ವೇಳೆ ನೀಲಗಾಯ್ ಪ್ರಾಣಿಯ ಕೊಂಬುಗಳು ಸವಾರನ ಎದೆಗೆ ಬಲವಾಗಿ ಚುಚ್ಚಿಕೊಂಡಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದನು ಎಂದು ಹೇಳಲಾಗಿದೆ.
ಇದನ್ನೂ ಓದಿ: ಸಂಯುಕ್ತಾ, ಶಶಿಕಲಾ ಜೊಲ್ಲೆ ಗಂಡನಿಗಿಂತ ಶ್ರೀಮಂತರು.. ಇಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನೂ ಕೋಟ್ಯಾಧಿಪತಿ..!
UP : अयोध्या में नीलगाय की टक्कर से 28 वर्षीय मुकेश पांडेय की मौत हो गई। नीलगाय दौड़ती हुई हाइवे पार कर रही थी। टकराकर बाइक सवार मुकेश के सीने में सींग घुस गए। pic.twitter.com/B43wWX4LrO
— Sachin Gupta (@SachinGuptaUP) April 15, 2024
ಇದನ್ನೂ ಓದಿ: ಚರ್ಚ್ ಒಳಗೆ ಮಾರಣಾಂತಿಕ ಅಟ್ಯಾಕ್, ಧರ್ಮೋಪದೇಶ ಮಾಡ್ತಿದ್ದ ಬಿಷಪ್ ಮೇಲೆ ಚೂರಿ ಇರಿತ
ತಕ್ಷಣ ಸ್ಥಳೀಯರು ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 5 ವರ್ಷಗಳ ಹಿಂದೆ ಮದುವೆಯಾಗಿದ್ದ ಮುಖೇಶ್ಗೆ 4 ವರ್ಷದ ಮಗಳಿದ್ದಾಳೆ. ಇನ್ನು ಆಕ್ಸಿಡೆಂಟ್ನಲ್ಲಿ ನೀಲಗಾಯ್ ಕೂಡ ಗಾಯಗೊಂಡಿದ್ದು ಹಾಗೇ ಓಡಿ ಹೋಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ