newsfirstkannada.com

ಜುಲೈ 15 ರಿಂದ ಮಳೆಗಾಲದ ಅಧಿವೇಶನ.. ಸರ್ಕಾರದ ವಿರುದ್ಧ ದೋಸ್ತಿಗಳಿಗೆ ಸಿಕ್ಕಿದೆ ಡಬಲ್​ ಅಸ್ತ್ರ!

Share :

Published July 13, 2024 at 8:18am

    ಮುಡಾ ಭ್ರಷ್ಟಾಚಾರದ ಮೇಲೂ ನಿಲುವಳಿ ಸೂಚನೆ ಮಂಡನೆ

    1 ವಾರ ಸದನ ವಿಸ್ತರಣೆ ಮಾಡಲು ಮೈತ್ರಿ ನಾಯಕರ ಮನವಿ

    ಡಬಲ್​ ಶಾಕ್​ನಲ್ಲಿರುವ ಕೈಪಡೆಗೆ ಶಾಕ್ ಕೊಡಲು ಮೈತ್ರಿ ರೆಡಿ

ಸೋಮವಾರ ಅಂದರೆ ಜುಲೈ 15ರಂದು ಮುಂಗಾರು ಅಧಿವೇಶನ ನಡೆಯಲಿದೆ. ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ಈ ಡಬಲ್​ ಶಾಕ್​ನಲ್ಲಿರುವ ಕೈಪಡೆ ಮೇಲೆ ಸವಾರಿ ಮಾಡಲು ಬಿಜೆಪಿ- ಜೆಡಿಎಸ್​ ಮುಂದಾಗಿವೆ. ನಿನ್ನೆ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಗ್ಯಾರಂಟಿ ಅಲೆಯಲ್ಲಿ ತೇಲ್ತಿದ್ದ ಕಾಂಗ್ರೆಸ್​ಗೆ ಲೋಕಸಭೆ ಎಲೆಕ್ಷನ್​ ಮಾಯದ ಗಾಯ ಮಾಡಿದೆ. ಆ ಗಾಯದ ಮೇಲೆ ಬರೆ ಎನ್ನುವಂತೆ ಸರ್ಕಾರದ 2 ದೊಡ್ಡ ಹಗರಣಗಳು ಕೋಲಾಹಲ ಎಬ್ಬಿಸಿವೆ. ಸೋಮವಾರ ಮುಂಗಾರು ಅಧಿವೇಶನ ಆರಂಭವಾಗ್ತಿದ್ದು, ವಿಪಕ್ಷಗಳಿಗೆ ಭರ್ಜರಿ ಭೋಜನ ಸಿಕ್ಕಿದೆ.

ಅಧಿವೇಶನದಲ್ಲಿ ದೋಸ್ತಿಗೆ ಸಿಕ್ತು ಡಬಲ್​ ಅಸ್ತ್ರ!

ಸೋಮವಾರದಿಂದ ಮಾನ್ಸೂನ್​​​ ಸೆಷನ್​​ ಆರಂಭ ಆಗ್ತಿದೆ. ಸರ್ಕಾರವನ್ನ ಹಣ್ಣುಗಾಯಿ ಮಾಡ್ತಿರುವ ಭ್ರಷ್ಟಾಚಾರದ ಹಗರಣಗಳು, ವಿಪಕ್ಷಗಳ ಬತ್ತಳಿಕೆಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ. ಈ ಬಾರಿ ಸರ್ಕಾರದ ಮೇಲೆ ಬಿಜೆಪಿ ಜೆಡಿಎಸ್​​​ ಮೈತ್ರಿ ಪಡೆ ಜಂಟಿ ದಾಳಿಗೆ ಸನ್ನದ್ಧ ಆಗ್ತಿವೆ. ನಿನ್ನೆ ಉಭಯ ಪಕ್ಷಗಳ ಪ್ರಮುಖರ ಸಮನ್ವಯ ಸಮಿತಿ ಸಭೆ ನಡೆದಿದ್ದು, ಹೋರಾಟದ ರೂಪುರೇಷೆ ಸಿದ್ಧವಾಗಿದೆ.

ಕುಸ್ತಿಗೆ ಸಜ್ಜಾದ ದೋಸ್ತಿ!

  • ಸಂತಾಪ ಸೂಚನೆ ಬಳಿಕ ಮೊದಲ ದಿನವೇ ಹೋರಾಟಕ್ಕೆ ರೆಡಿ
  • ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಚರ್ಚೆಗೆ ನಿಲುವಳಿ ಸೂಚನೆ
  • ಸ್ಪೀಕರ್ ಚರ್ಚೆಗೆ ಅವಕಾಶ ನೀಡದೆ ಇದ್ದರೆ ಧರಣಿಗೆ ನಿರ್ಧಾರ
  • ವಾಲ್ಮೀಕಿ ನಿಗಮದ ಚರ್ಚೆ ಬಳಿಕ ಮುಡಾ ಹಗರಣ ಬಗ್ಗೆ ಚರ್ಚೆ
  • ಮುಡಾ ಭ್ರಷ್ಟಾಚಾರದ ಮೇಲೂ ನಿಲುವಳಿ ಸೂಚನೆ ಮಂಡನೆ
  • 1 ವಾರ ಸದನ ವಿಸ್ತರಣೆ ಮಾಡಲು ಮೈತ್ರಿ ನಾಯಕರ ಮನವಿ
  • ಗ್ಯಾರಂಟಿ ಯೋಜನೆ ಸಾಧಕ-ಬಾಧಕ, ಅಭಿವೃದ್ಧಿ ಹಿನ್ನಡೆ ಚರ್ಚೆ

‘ಒಟ್ಟಾಗಿ ಕೆಲಸ ಮಾಡುವ ನಿರ್ಧಾರ’

2 ಸದನದಲ್ಲಿ ಪರಿಣಾಮಕಾರಿಯಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ, ರಾಜ್ಯದ ಅಭಿವೃದ್ಧಿ 10 ವರ್ಷಗಳ ಹಿಂದಕ್ಕೆ ಹೋಗುತ್ತಿದೆ. ಈ ಎಲ್ಲದರ ಬಗ್ಗೆ ಧ್ವನಿಯಾಗಿ ಕೆಲಸ ಮಾಡುವಂತ ನಿರ್ಧಾರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?

‘ಒಟ್ಟಿಗೆ ಹೋರಾಟ ಮಾಡ್ತೇವೆ’

ಸ್ವತಃ ಸಿಎಂ ಸಿದ್ದರಾಮಯ್ಯನವರೇ ಇದರಲ್ಲಿ ಇನ್ವಾಲ್ ಆಗಿದ್ದಾರೆ. ಇದು ರಾಜ್ಯದ ವಿಚಾರವಾಗಿ ಉಳಿದಿಲ್ಲ. ದೇಶದ ವಿಚಾರವಾಗಿ ಉಳಿದಿದೆ. ಅದಕ್ಕೆ ಈ ವಿಚಾರಗಳನ್ನ ವಿಧಾನಸಭೆಯಲ್ಲಿ ಸರಿಯಾಗಿ ಪ್ರತಿಪಾದನೆ ಮಾಡಬೇಕು. ಇವುಗಳನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುಬೇಕು.

ಆರ್​.ಅಶೋಕ್​, ವಿಪಕ್ಷ ನಾಯಕ

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ವಿವಾಹ ಸಂಭ್ರಮ.. ಮದುವೆಯಲ್ಲಿ ಗಣ್ಯರು ಭಾಗಿ.. ಯಶ್ ಸೇರಿ ಯಾರೆಲ್ಲ ಇದ್ದಾರೆ..?

ವಾಲ್ಮೀಕಿ ನಿಗಮ ಮತ್ತು ಮುಡಾ ಸೈಟ್​​ ಹಗರಣ ಸದನದಲ್ಲಿ ಪ್ರತಿಧ್ವನಿಸಲಿದೆ.. ಹೀಗಾಗಿ ಮುಂಗಾರು ಅಧಿವೇಶನದಲ್ಲಿ ಹಂಗಾಮ ಸೃಷ್ಟಿ ಆಗೋದು ಪಕ್ಕಾ ಆಗಿದೆ.. ಇದಕ್ಕೆ ಸರ್ಕಾರ ಹೇಗೆ ತಕ್ಕ ಪ್ರತ್ಯುತ್ತರ ನೀಡಲಿದೆ ಅನ್ನೋದು ಕಾದು ನೋಡಬೇಕಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜುಲೈ 15 ರಿಂದ ಮಳೆಗಾಲದ ಅಧಿವೇಶನ.. ಸರ್ಕಾರದ ವಿರುದ್ಧ ದೋಸ್ತಿಗಳಿಗೆ ಸಿಕ್ಕಿದೆ ಡಬಲ್​ ಅಸ್ತ್ರ!

https://newsfirstlive.com/wp-content/uploads/2024/07/SIDDU_R_ASHOK.jpg

    ಮುಡಾ ಭ್ರಷ್ಟಾಚಾರದ ಮೇಲೂ ನಿಲುವಳಿ ಸೂಚನೆ ಮಂಡನೆ

    1 ವಾರ ಸದನ ವಿಸ್ತರಣೆ ಮಾಡಲು ಮೈತ್ರಿ ನಾಯಕರ ಮನವಿ

    ಡಬಲ್​ ಶಾಕ್​ನಲ್ಲಿರುವ ಕೈಪಡೆಗೆ ಶಾಕ್ ಕೊಡಲು ಮೈತ್ರಿ ರೆಡಿ

ಸೋಮವಾರ ಅಂದರೆ ಜುಲೈ 15ರಂದು ಮುಂಗಾರು ಅಧಿವೇಶನ ನಡೆಯಲಿದೆ. ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ಈ ಡಬಲ್​ ಶಾಕ್​ನಲ್ಲಿರುವ ಕೈಪಡೆ ಮೇಲೆ ಸವಾರಿ ಮಾಡಲು ಬಿಜೆಪಿ- ಜೆಡಿಎಸ್​ ಮುಂದಾಗಿವೆ. ನಿನ್ನೆ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಗ್ಯಾರಂಟಿ ಅಲೆಯಲ್ಲಿ ತೇಲ್ತಿದ್ದ ಕಾಂಗ್ರೆಸ್​ಗೆ ಲೋಕಸಭೆ ಎಲೆಕ್ಷನ್​ ಮಾಯದ ಗಾಯ ಮಾಡಿದೆ. ಆ ಗಾಯದ ಮೇಲೆ ಬರೆ ಎನ್ನುವಂತೆ ಸರ್ಕಾರದ 2 ದೊಡ್ಡ ಹಗರಣಗಳು ಕೋಲಾಹಲ ಎಬ್ಬಿಸಿವೆ. ಸೋಮವಾರ ಮುಂಗಾರು ಅಧಿವೇಶನ ಆರಂಭವಾಗ್ತಿದ್ದು, ವಿಪಕ್ಷಗಳಿಗೆ ಭರ್ಜರಿ ಭೋಜನ ಸಿಕ್ಕಿದೆ.

ಅಧಿವೇಶನದಲ್ಲಿ ದೋಸ್ತಿಗೆ ಸಿಕ್ತು ಡಬಲ್​ ಅಸ್ತ್ರ!

ಸೋಮವಾರದಿಂದ ಮಾನ್ಸೂನ್​​​ ಸೆಷನ್​​ ಆರಂಭ ಆಗ್ತಿದೆ. ಸರ್ಕಾರವನ್ನ ಹಣ್ಣುಗಾಯಿ ಮಾಡ್ತಿರುವ ಭ್ರಷ್ಟಾಚಾರದ ಹಗರಣಗಳು, ವಿಪಕ್ಷಗಳ ಬತ್ತಳಿಕೆಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿದೆ. ಈ ಬಾರಿ ಸರ್ಕಾರದ ಮೇಲೆ ಬಿಜೆಪಿ ಜೆಡಿಎಸ್​​​ ಮೈತ್ರಿ ಪಡೆ ಜಂಟಿ ದಾಳಿಗೆ ಸನ್ನದ್ಧ ಆಗ್ತಿವೆ. ನಿನ್ನೆ ಉಭಯ ಪಕ್ಷಗಳ ಪ್ರಮುಖರ ಸಮನ್ವಯ ಸಮಿತಿ ಸಭೆ ನಡೆದಿದ್ದು, ಹೋರಾಟದ ರೂಪುರೇಷೆ ಸಿದ್ಧವಾಗಿದೆ.

ಕುಸ್ತಿಗೆ ಸಜ್ಜಾದ ದೋಸ್ತಿ!

  • ಸಂತಾಪ ಸೂಚನೆ ಬಳಿಕ ಮೊದಲ ದಿನವೇ ಹೋರಾಟಕ್ಕೆ ರೆಡಿ
  • ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಚರ್ಚೆಗೆ ನಿಲುವಳಿ ಸೂಚನೆ
  • ಸ್ಪೀಕರ್ ಚರ್ಚೆಗೆ ಅವಕಾಶ ನೀಡದೆ ಇದ್ದರೆ ಧರಣಿಗೆ ನಿರ್ಧಾರ
  • ವಾಲ್ಮೀಕಿ ನಿಗಮದ ಚರ್ಚೆ ಬಳಿಕ ಮುಡಾ ಹಗರಣ ಬಗ್ಗೆ ಚರ್ಚೆ
  • ಮುಡಾ ಭ್ರಷ್ಟಾಚಾರದ ಮೇಲೂ ನಿಲುವಳಿ ಸೂಚನೆ ಮಂಡನೆ
  • 1 ವಾರ ಸದನ ವಿಸ್ತರಣೆ ಮಾಡಲು ಮೈತ್ರಿ ನಾಯಕರ ಮನವಿ
  • ಗ್ಯಾರಂಟಿ ಯೋಜನೆ ಸಾಧಕ-ಬಾಧಕ, ಅಭಿವೃದ್ಧಿ ಹಿನ್ನಡೆ ಚರ್ಚೆ

‘ಒಟ್ಟಾಗಿ ಕೆಲಸ ಮಾಡುವ ನಿರ್ಧಾರ’

2 ಸದನದಲ್ಲಿ ಪರಿಣಾಮಕಾರಿಯಾಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ, ರಾಜ್ಯದ ಅಭಿವೃದ್ಧಿ 10 ವರ್ಷಗಳ ಹಿಂದಕ್ಕೆ ಹೋಗುತ್ತಿದೆ. ಈ ಎಲ್ಲದರ ಬಗ್ಗೆ ಧ್ವನಿಯಾಗಿ ಕೆಲಸ ಮಾಡುವಂತ ನಿರ್ಧಾರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ MUDA ಜತೆ ವಾಲ್ಮೀಕಿ ಹಗರಣದ ಸಂಕಷ್ಟ.. ಪ್ರಕರಣದ ಅಸಲಿ ರಹಸ್ಯಗಳೇನು?

‘ಒಟ್ಟಿಗೆ ಹೋರಾಟ ಮಾಡ್ತೇವೆ’

ಸ್ವತಃ ಸಿಎಂ ಸಿದ್ದರಾಮಯ್ಯನವರೇ ಇದರಲ್ಲಿ ಇನ್ವಾಲ್ ಆಗಿದ್ದಾರೆ. ಇದು ರಾಜ್ಯದ ವಿಚಾರವಾಗಿ ಉಳಿದಿಲ್ಲ. ದೇಶದ ವಿಚಾರವಾಗಿ ಉಳಿದಿದೆ. ಅದಕ್ಕೆ ಈ ವಿಚಾರಗಳನ್ನ ವಿಧಾನಸಭೆಯಲ್ಲಿ ಸರಿಯಾಗಿ ಪ್ರತಿಪಾದನೆ ಮಾಡಬೇಕು. ಇವುಗಳನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುಬೇಕು.

ಆರ್​.ಅಶೋಕ್​, ವಿಪಕ್ಷ ನಾಯಕ

ಇದನ್ನೂ ಓದಿ: ಅನಂತ್ ಅಂಬಾನಿ-ರಾಧಿಕಾ ವಿವಾಹ ಸಂಭ್ರಮ.. ಮದುವೆಯಲ್ಲಿ ಗಣ್ಯರು ಭಾಗಿ.. ಯಶ್ ಸೇರಿ ಯಾರೆಲ್ಲ ಇದ್ದಾರೆ..?

ವಾಲ್ಮೀಕಿ ನಿಗಮ ಮತ್ತು ಮುಡಾ ಸೈಟ್​​ ಹಗರಣ ಸದನದಲ್ಲಿ ಪ್ರತಿಧ್ವನಿಸಲಿದೆ.. ಹೀಗಾಗಿ ಮುಂಗಾರು ಅಧಿವೇಶನದಲ್ಲಿ ಹಂಗಾಮ ಸೃಷ್ಟಿ ಆಗೋದು ಪಕ್ಕಾ ಆಗಿದೆ.. ಇದಕ್ಕೆ ಸರ್ಕಾರ ಹೇಗೆ ತಕ್ಕ ಪ್ರತ್ಯುತ್ತರ ನೀಡಲಿದೆ ಅನ್ನೋದು ಕಾದು ನೋಡಬೇಕಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More