BREAKING: ಕರ್ನಾಟಕದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​​ ಘೋಷಣೆ; ಮೈಸೂರಿನಿಂದ ಯದುವೀರ್​​ ಕಣಕ್ಕೆ!

author-image
Ganesh Nachikethu
Updated On
ರಾಜರು ಯುದ್ಧಕ್ಕೆ ಸನ್ನದ್ಧ, ಚಾಲೆಂಜ್ ಎದುರಿಸಲು ವೈದ್ಯರೂ ರೆಡಿ; ಲೋಕ ಕದನ ಮತ್ತಷ್ಟು ರೋಚಕ..!
Advertisment
  • ಇಡೀ ದೇಶಾದ್ಯಂತ 2024ರ ಲೋಕಸಭಾ ಚುನಾವಣೆ ಕಾವು
  • ಕರ್ನಾಕಟದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಘೋಷಣೆ
  • ಮೈಸೂರಿನಿಂದ ಯದುವೀರ್​ ಒಡೆಯರ್​ಗೆ ಮಣೆ ಹಾಕಿದ ಬಿಜೆಪಿ!

ಬೆಂಗಳೂರು: ಇಡೀ ದೇಶಾದ್ಯಂತ 2024ರ ಲೋಕಸಭಾ ಚುನಾವಣೆ ಕಾವು ಜೋರಾಗಿದೆ. ಅದರಲ್ಲೂ ಕರ್ನಾಟಕದಲ್ಲಂತೂ ಕಾಂಗ್ರೆಸ್​ ಸೋಲಿಸಲು ಈ ಬಾರಿ ಜೆಡಿಎಸ್​​, ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಹೈಕಮಾಂಡ್​​ ಕೊನೆಗೂ ಅಳೆದು ತೂಗಿ ತನ್ನ 2ನೇ ಪಟ್ಟಿ ರಿಲೀಸ್​​ ಮಾಡಿದೆ.

ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್​ ಅನೌನ್ಸ್​ ಮಾಡಿದೆ. ಮೈಸೂರಿನಿಂದ ಯದುವೀರ್​​ ಒಡೆಯರ್​ಗೆ ಮಣೆ ಹಾಕಿದ್ದು, ಬೆಂಗಳೂರು ಗ್ರಾಮಾಂತರದಿಂದ ಡಾ. ಸಿಎನ್​ ಮಂಜುನಾಥ್​ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ನಿರೀಕ್ಷೆಯಂತೆ ಸಂಸದ ಪ್ರತಾಪ್​ ಸಿಂಹಗೆ ಈ ಬಾರಿ ಟಿಕೆಟ್​ ಮಿಸ್​​ ಮಾಡಲಾಗಿದೆ.

ಬಿಜೆಪಿ ಟಿಕೆಟ್​ ಲಿಸ್ಟ್​ ಹೀಗಿದೆ!

ಚಿಕ್ಕೋಡಿ - ಅಣ್ಣಾಸಾಹೇಬ್ ಶಂಕರ್ ಜೊಲ್ಲೆ
ಬಾಗಲಕೋಟೆ - ಪಿ.ಸಿ ಗದ್ದಿಗೌಡರ್
ವಿಜಯಪುರ - ರಮೇಶ್ ಜಿಗಜಿಣಗಿ
ಬೀದರ್ - ಭಗವಂತ್ ಖೂಬ
ಕೊಪ್ಪಳ - ಡಾ. ಬಸವರಾಜ್
ಬಳ್ಳಾರಿ - ಶ್ರೀರಾಮುಲು
ಹಾವೇರಿ - ಬಸವರಾಜ ಬೊಮ್ಮಾಯಿ
ಧಾರವಾಡ - ಪ್ರಹ್ಲಾದ್ ಜೋಷಿ
ದಾವಣಗೆರೆ - ಗಾಯತ್ರಿ ಸಿದ್ದೇಶ್ವರ್
ಶಿವಮೊಗ್ಗ - ಬಿ.ವೈ ರಾಘವೇಂದ್ರ
ಉಡುಪಿ ಚಿಕ್ಕಮಗಳೂರು - ಕೋಟಾ ಶ್ರೀನಿವಾಸ್ ಪೂಜಾರಿ
ದಕ್ಷಿಣ ಕನ್ನಡ - ಬ್ರಿಜೇಶ್ ಚೌಟ
ತುಮಕೂರು - ವಿ. ಸೋಮಣ್ಣ
ಮೈಸೂರು - ಯದುವೀರ್ ಕೃಷ್ಣದತ್ತ ಒಡೆಯರ್
ಚಾಮರಾಜನಗರ - ಎಸ್‌. ಬಾಲರಾಜ್
ಬೆೆಂಗಳೂರು ಗ್ರಾಮಾಂತರ - ಡಾ.ಸಿ.ಎನ್ ಮಂಜುನಾಥ್
ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ
ಬೆಂಗಳೂರು ಕೇಂದ್ರ - ಪಿ.ಸಿ ಮೋಹನ್
ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ
ಕಲಬುರಗಿ - ಉಮೇಶ್ ಯಾದವ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment