newsfirstkannada.com

BREAKING: ಹೆಂಡತಿ, ಮಕ್ಕಳ ಮುಂದೆ ಬಿಜೆಪಿ ನಾಯಕನ ಹತ್ಯೆ ಪ್ರಕರಣ; 15 ಮಂದಿಗೆ ಮರಣದಂಡನೆ

Share :

Published January 30, 2024 at 12:30pm

Update January 30, 2024 at 12:32pm

    15 ಮಂದಿ ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ

    2021ರ ಡಿ. 19ರಂದು ರಂಜಿತ್ ಮನೆಯಲ್ಲೇ ಭಯಾನಕ ದಾಳಿ

    ಕೇರಳ ಬಿಜೆಪಿಯ ಒಬಿಸಿ ನಾಯಕರಾಗಿದ್ದ ರಂಜಿತ್ ಶ್ರೀನಿವಾಸ್

ಬಿಜೆಪಿ ನಾಯಕನ ಹತ್ಯೆ ಪ್ರಕರಣದಲ್ಲಿ ಕೇರಳ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 15 ಮಂದಿ ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿದೆ. ಪಿಎಫ್‌ಐ ಕಾರ್ಯಕರ್ತರ ಮೇಲೆ ಬಿಜೆಪಿ ನಾಯಕ ರಂಜಿತ್‌ ಅವರನ್ನು ಹೆಂಡತಿ, ಮಕ್ಕಳ ಎದುರೇ ಹತ್ಯೆಗೈದಿದ್ದ ಪ್ರಕರಣ ದಾಖಲಾಗಿತ್ತು.

ಕೊಲೆಯಾದ ರಂಜಿತ್ ಶ್ರೀನಿವಾಸನ್ ಅವರು ಕೇರಳ ಬಿಜೆಪಿಯ ಒಬಿಸಿ ನಾಯಕರಾಗಿದ್ದರು. 2021ರ ಡಿಸೆಂಬರ್‌ 19ರಂದು ಆಲಪುಜ್ಜದ ರಂಜಿತ್ ಮನೆಯಲ್ಲೇ ಪಿಎಫ್ಐ ಕಾರ್ಯಕರ್ತರು ಹತ್ಯೆಗೈದಿದ್ದರು. ಹೆಂಡತಿ, ಮಕ್ಕಳು ಕಣ್ಣೆದುರೇ ರಂಜಿತ್ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಶಸ್ತ್ರಸಜ್ಜಿತ ಕಡಲ್ಗಳ್ಳರಿಂದ ಕಿಡ್ನಾಪ್ ಆಗಿದ್ದ 19 ಪಾಕಿಸ್ತಾನಿಯರ ರಕ್ಷಿಸಿದ ಭಾರತೀಯ ನೌಕಾಪಡೆ..!

ಬಿಜೆಪಿ ನಾಯಕ ರಂಜಿತ್ ಅವರ ಕೊಲೆ ಪ್ರಕರಣದಲ್ಲಿ ಪಿಎಫ್‌ಐ ಸದಸ್ಯರ ಕೈವಾಡ ಸಾಬೀತಾಗಿತ್ತು. 15 ಮಂದಿ ಪಿಎಫ್ಐ ಸದಸ್ಯರ ಈ ಕೊಲೆಗೆ ಕಾರಣವಾಗಿದ್ದು, ಕೇರಳದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ-I ಇಂದು ತನ್ನ ಮಹತ್ವದ ತೀರ್ಪು ಪ್ರಕಟ ಮಾಡಿದೆ. 15 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನಂತರ ಘೋಷಿಸುವುದಾಗಿ ಕೋರ್ಟ್ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

BREAKING: ಹೆಂಡತಿ, ಮಕ್ಕಳ ಮುಂದೆ ಬಿಜೆಪಿ ನಾಯಕನ ಹತ್ಯೆ ಪ್ರಕರಣ; 15 ಮಂದಿಗೆ ಮರಣದಂಡನೆ

https://newsfirstlive.com/wp-content/uploads/2024/01/Kerala-Bjp-Leader.jpg

    15 ಮಂದಿ ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ

    2021ರ ಡಿ. 19ರಂದು ರಂಜಿತ್ ಮನೆಯಲ್ಲೇ ಭಯಾನಕ ದಾಳಿ

    ಕೇರಳ ಬಿಜೆಪಿಯ ಒಬಿಸಿ ನಾಯಕರಾಗಿದ್ದ ರಂಜಿತ್ ಶ್ರೀನಿವಾಸ್

ಬಿಜೆಪಿ ನಾಯಕನ ಹತ್ಯೆ ಪ್ರಕರಣದಲ್ಲಿ ಕೇರಳ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 15 ಮಂದಿ ಪಿಎಫ್‌ಐ ಕಾರ್ಯಕರ್ತರಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿದೆ. ಪಿಎಫ್‌ಐ ಕಾರ್ಯಕರ್ತರ ಮೇಲೆ ಬಿಜೆಪಿ ನಾಯಕ ರಂಜಿತ್‌ ಅವರನ್ನು ಹೆಂಡತಿ, ಮಕ್ಕಳ ಎದುರೇ ಹತ್ಯೆಗೈದಿದ್ದ ಪ್ರಕರಣ ದಾಖಲಾಗಿತ್ತು.

ಕೊಲೆಯಾದ ರಂಜಿತ್ ಶ್ರೀನಿವಾಸನ್ ಅವರು ಕೇರಳ ಬಿಜೆಪಿಯ ಒಬಿಸಿ ನಾಯಕರಾಗಿದ್ದರು. 2021ರ ಡಿಸೆಂಬರ್‌ 19ರಂದು ಆಲಪುಜ್ಜದ ರಂಜಿತ್ ಮನೆಯಲ್ಲೇ ಪಿಎಫ್ಐ ಕಾರ್ಯಕರ್ತರು ಹತ್ಯೆಗೈದಿದ್ದರು. ಹೆಂಡತಿ, ಮಕ್ಕಳು ಕಣ್ಣೆದುರೇ ರಂಜಿತ್ ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ: ಶಸ್ತ್ರಸಜ್ಜಿತ ಕಡಲ್ಗಳ್ಳರಿಂದ ಕಿಡ್ನಾಪ್ ಆಗಿದ್ದ 19 ಪಾಕಿಸ್ತಾನಿಯರ ರಕ್ಷಿಸಿದ ಭಾರತೀಯ ನೌಕಾಪಡೆ..!

ಬಿಜೆಪಿ ನಾಯಕ ರಂಜಿತ್ ಅವರ ಕೊಲೆ ಪ್ರಕರಣದಲ್ಲಿ ಪಿಎಫ್‌ಐ ಸದಸ್ಯರ ಕೈವಾಡ ಸಾಬೀತಾಗಿತ್ತು. 15 ಮಂದಿ ಪಿಎಫ್ಐ ಸದಸ್ಯರ ಈ ಕೊಲೆಗೆ ಕಾರಣವಾಗಿದ್ದು, ಕೇರಳದ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ-I ಇಂದು ತನ್ನ ಮಹತ್ವದ ತೀರ್ಪು ಪ್ರಕಟ ಮಾಡಿದೆ. 15 ಮಂದಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ನಂತರ ಘೋಷಿಸುವುದಾಗಿ ಕೋರ್ಟ್ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More