ಗೆದ್ದಿದ್ದು ಬಿಜೆಪಿಯಿಂದ, ಓಡಾಡೋದು ಕಾಂಗ್ರೆಸ್ಸಿಗರ ಜತೆ​​- ಯತ್ನಾಳ್​ ಸೇರಿ ಇವರಿಗೆ ಬ್ರೇಕ್ ಹಾಕೋ ನಿರ್ಧಾರ

author-image
Ganesh Nachikethu
Updated On
ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ಇಂದು ಮಹತ್ವದ ಸಭೆ.. ಹೈಕಮಾಂಡ್​ಗೆ ಸ್ಪಷ್ಟ​ ಸಂದೇಶ ರವಾನಿಸಲು ಸಿದ್ಧತೆ
Advertisment
  • ಬಿಜೆಪಿಯಿಂದ ಗೆದ್ದು ಕಾಂಗ್ರೆಸ್ ಜೊತೆ ಒಡನಾಟ!
  • S.T ಸೋಮಶೇಖರ್, ಹೆಬ್ಬಾರ್ ನಡೆಗೆ ಎಚ್ಚೆತ್ತ ಬಿಜೆಪಿ
  • ಪಕ್ಷದೊಳಗಿದ್ದು ಮಸಲತ್ತು ಮಾಡಿದವರಿಗೆ ಬಿಜೆಪಿ ಡೋಸ್

ಬೆಂಗಳೂರು: ಅಟ್ಟ ಮೇಲೆ ಒಲೆ ಉರಿಯಿತು. ಕೆಟ್ಟ ಮೇಲೆ ಬುದ್ಧಿ ಬಂತು. ಈ ಗಾದೆ ಪ್ರಸಕ್ತ ಬಿಜೆಪಿಗೆ ಪರ್ಫೆಕ್ಟ್​ ಆಗಿ ಸೂಟ್​ ಆಗುತ್ತೆ. ಸಹಿಸ್ಕೊಂಡು ಎಷ್ಟು ದಿನ ಅಂತಾ ತಳ್ಳಕ್ಕೆ ಆಗುತ್ತೆ. ಎಲ್ಲದಕ್ಕೂ ಒಂದು ಅಂತ್ಯ ಇದ್ದೇ ಇರುತ್ತೆ. ಯಶವಂತಪುರ ಶಾಸಕ ಸೋಮಶೇಖರ್​​, ಮತ್ತೆ ಯಲ್ಲಾಪುರದ ಎಂಎಲ್​ಎ ಶಿವರಾಮ್​ ಹೆಬ್ಬಾರ್​. ಇವರು ಆಡಿದ್ದೆ ಆಟ ಆಗಿದ್ದು, ಬಿಜೆಪಿ ಕೋರ್​ ಕಮಿಟಿಯಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆಗೆ ಬ್ರೇಕ್​​ ಹಾಕಲು ಬಿಎಸ್​ವೈ, ವಿಜಯೇಂದ್ರ ಪ್ಲಾನ್!

ಪಕ್ಷದೊಳಗಿದ್ದು ಉಪ್ಪು-ಖಾರ ಸವಿದು ಮಸಲತ್ತು ಮಾಡ್ತಿದ್ದವರಿಗೆ ಜಾಪಾಳ ಮಾತ್ರೆ ಕೊಡುವ ಸಂದರ್ಭ ಬಂದಂತೆ ಕಾಣಿಸ್ತಿದೆ. ಸೋಮಶೇಖರ್​​ ಮತ್ತು ಹೆಬ್ಬಾರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ. ಈ ಮೂಲಕ ತಮ್ಮ ವಿರುದ್ಧ ಸೊಲ್ಲೆತ್ತುವ ಭಿನ್ನರ ತಂಡಕ್ಕೂ ಇದೇ ಪರಿಸ್ಥಿತಿ ಬರಲಿದೆ ಅನ್ನೋ ಸಂದೇಶ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ರವಾನೆ ಮಾಡಿದ್ದಾರೆ.

ಶಿಸ್ತು ಕ್ರಮಕ್ಕೆ ಬಿವೈವಿ ಶಿಫಾರಸ್ಸು!

ಇನ್ನು, ಪಕ್ಷ ವಿರೋಧಿ ಕೆಲಸ ಮಾಡುವವರನ್ನು ತಡೆಯಲು ಈ ರಣತಂತ್ರ ಸಿದ್ಧವಾಗಿದೆ. ಎಸ್.ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ವಿರುದ್ಧ ಕ್ರಮ ಆಗೋದು ನಿಶ್ಚಿತವಾಗಿದೆ. ಈ ಇಬ್ಬರ ಭುಜದ ಮೇಲೆ‌ ಗನ್ ಇಟ್ಟು ಶೂಟ್ ಮಾಡಲು ಸಿದ್ಧತೆ ಆಗಿದ್ದು, ಪಕ್ಷ ವಿರೋಧಿ ಮಾಡ್ತಿರುವ ಭಿನ್ನರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧ ಅನ್ನೋ ಎಚ್ಚರಿಕೆಯನ್ನ ಯತ್ನಾಳ್ ಬಣಕ್ಕೂ ಪರೋಕ್ಷವಾಗಿ ದಾಟಿಸಿದ್ದಾರೆ.

ಬಿಜೆಪಿ ಪಕ್ಷದ ವೇದಿಕೆಯಿಂದ‌ ಎಸ್​​​ಟಿಎಸ್ & ಹೆಬ್ಬಾರ್ ದೂರವೇ ಇದ್ದಾರೆ. ಅವರ ಮೇಲೆ ಕ್ರಮ ಕೈಗೊಂಡ್ರು ಅಷ್ಟೇ ಬಿಟ್ರು ಅಷ್ಟೇ. ಹಾಗಂತ ಸುಮ್ನೆ ಇರೋದಕ್ಕಂತು ಆಗಲ್ಲ. ಗಾಯ ಚಿಕ್ಕದಿದ್ದಾಗೇ ಬ್ಯಾಂಡೇಜ್​​​ ಕಟ್ಟೋದು, ಔಷಧಿ ಹಾಕೋದು ವಾಸಿ ಅಲ್ವಾ? ಇದನ್ನ ಬಿಜೆಪಿ ಯಾವತ್ತೋ ಮಾಡಬೇಕಿತ್ತು. ಯತ್ನಾಳ್​​ ಆ್ಯಂಡ್​​ ಟೀಂನ ಕಿರಿಕ್​​ ಕಾರಣಕ್ಕೆ ಈಗ ಜ್ಞಾನೋದಯ ಆದಂತೆ ಕಾಣಿಸ್ತಿದೆ.

ಇದನ್ನೂ ಓದಿ:ಕ್ಯಾಪ್ಸನ್ಸಿ ನಿರೀಕ್ಷೆಯಲ್ಲಿದ್ದ ಪಂತ್​ಗೆ ಬಿಗ್​ ಶಾಕ್​ ಕೊಟ್ಟ ಲಕ್ನೋ; 27 ಕೋಟಿ ಸುರಿದಿದ್ದೇಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment