ಬೆಂಗಳೂರಲ್ಲಿ ಯುವತಿ ಮೇಲೆ ಬಸ್ ನುಗ್ಗಿಸೋ ಯತ್ನ.. BMTC ಡ್ರೈವರ್ ಸಸ್ಪೆಂಡ್; ಅಸಲಿಗೆ ಆಗಿದ್ದೇನು?

author-image
admin
Updated On
ಬೆಂಗಳೂರಲ್ಲಿ ಯುವತಿ ಮೇಲೆ ಬಸ್ ನುಗ್ಗಿಸೋ ಯತ್ನ.. BMTC ಡ್ರೈವರ್ ಸಸ್ಪೆಂಡ್; ಅಸಲಿಗೆ ಆಗಿದ್ದೇನು?
Advertisment
  • ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ಜಸ್ಟ್ ಮಿಸ್ ಆಗಿದ್ದ ಯುವತಿ
  • ಯುವತಿ ಬಸ್‌ಗೆ ಅಡ್ಡವಾಗಿ ನಿಲ್ಲುವುದಕ್ಕೆ ಮುಂಚೆ ನಡೆದಿದ್ದೇನು?
  • ಸಸ್ಪೆಂಡ್ ಮಾಡಿದ BMTC ನಿಗಮ! ಡ್ರೈವರ್ ಪ್ರಶಾಂತ್ ಹೇಳಿದ್ದೇನು?

ಬೆಂಗಳೂರಲ್ಲಿ ಬಸ್ ಅಡ್ಡಗಟ್ಟಿದ ಯುವತಿ ಮೇಲೆ BMTC ಡ್ರೈವರ್ ನುಗ್ಗಿಸಲು ಯತ್ನಿಸಿದ ಘಟನೆಗೆ ಹೊಸ ತಿರುವು ಸಿಕ್ಕಿದೆ. ತಕ್ಷಣವೇ ಬಿಎಂಟಿಸಿ ಡ್ರೈವರ್ ಅನ್ನು ಸಸ್ಪೆಂಡ್ ಮಾಡಲಾಗಿದೆ. ಆದರೆ ಈ ಘಟನೆಯ ಸಂಪೂರ್ಣ ದೃಶ್ಯಗಳು ಕಾರಿನ ಡ್ಯಾಶ್ ಕ್ಯಾಮೆರಾ ಹಾಗೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿ ಬಸ್‌ಗೆ ಅಡ್ಡವಾಗಿ ನಿಲ್ಲುವುದಕ್ಕೆ ಮುಂಚೆ ನಡೆದಿದ್ದೇನು ಅನ್ನೋ ತನಿಖೆ ಸಹ ಮುಂದುವರಿದಿದೆ.

ಕಳೆದ ಮೇ 23ನೇ ತಾರೀಖು ಸಂಜೆ 5.40ಕ್ಕೆ ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ಈ ಘಟನೆ ನಡೆದಿದೆ. ಯುವತಿ ಜಸ್ಟ್ ಮಿಸ್ ಆದ ದೃಶ್ಯ ತಡವಾಗಿ ಬೆಳಕಿಗೆ ಬಂದಿದ್ದು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಯುವತಿ ಮೇಲೆ ಬಸ್ ನುಗ್ಗಿಸಲು ಡ್ರೈವರ್‌ ಮುಂದಾಗಿದ್ದು, ಸ್ವಲ್ಪ ಯಾಮಾರಿದ್ರು ಯುವತಿ ಪ್ರಾಣಕ್ಕೆ ಕುತ್ತು ಬಂದಿತ್ತು.

ಯುವತಿ ಮೇಲೆ ಬಸ್ ನುಗ್ಗಿಸಲು ಯತ್ನಿಸಿದ ಡ್ರೈವರ್ ಪ್ರಶಾಂತ್ ಅವರನ್ನ BMTC ನಿಗಮ ಅಮಾನತುಗೊಳಿಸಿದೆ. ಕಾರಿನ ಚಾಲಕರು ಬಸ್ ನಿಲ್ಲಿಸಲು ಹೇಳಿದರೂ ನಿಲ್ಲಿಸದೇ ಚಾಲನೆ ಮಾಡಿದ್ದು, ಅತಿವೇಗ ಹಾಗೂ ಅಜಾಗರೂಕತೆಯ ಅಪರಾಧ ಮಾಡಿದ್ದಕ್ಕೆ ಸಸ್ಪೆಂಡ್ ಮಾಡಲಾಗಿದೆ.

publive-image

ಅಸಲಿಗೆ ಆಗಿದ್ದೇನು?
ಮೇ 23ರಂದು ಬಿಎಂಟಿಸಿ ಬಸ್ ಚಾಲಕ ಮತ್ತು ಯುವತಿ ನಡುವೆ ಕಿರಿಕ್ ಆಗಿತ್ತು. ರೊಚ್ಚಿಗೆದ್ದ ಯುವತಿ ಬಸ್ ಚಾಲಕನ ಪ್ರಶ್ನೆ ಮಾಡಲು ಬಸ್ ಅಡ್ಡಗಟ್ಟಿದ್ದರು. ಆದರೆ ಡ್ರೈವರ್‌ ಯುವತಿಯನ್ನು ಲೆಕ್ಕಿಸದೇ ಬಸ್ ನುಗ್ಗಿಸಿದ್ದ. ಚಾಲಕನ ಈ ಕೃತ್ಯ ನೋಡಿದ ಜನ ಬೆಚ್ಚಿಬಿದ್ದಿದ್ದರು.

ಇದನ್ನೂ ಓದಿ: ಜೂನ್ 5ಕ್ಕೆ ಬೆಂಗಳೂರು ಬಂದ್ ಆಗುತ್ತಾ? ನಟ ಕಮಲ್ ಹಾಸನ್‌ ಕ್ಷಮೆ ಕೇಳಲು ಕನ್ನಡಿಗರ ಗಡುವು 

ಬಿಎಂಟಿಸಿ ಬಸ್ ಪಕ್ಕ ಕಾರಿನಲ್ಲಿದ್ದ ಯುವತಿ ಕಾರಿನಿಂದ ಇಳಿದು ಬಸ್ ಚಾಲಕನ ಪ್ರಶ್ನೆ ಮಾಡಿದ್ದರು. ಈ ಘಟನೆಗೂ ಮುಂಚೆ ಯುವತಿ ಮತ್ತು ಬಸ್ ಡ್ರೈವರ್ ನಡುವೆ ವಾಗ್ವಾದ ನಡೆದಿತ್ತು.

ಬಸ್ ಡ್ರೈವರ್ ಹೇಳೋದೇನು?
ಯುವತಿ ಮೇಲೆ ಬಸ್ ನುಗ್ಗಿಸಲು ಯತ್ನಿಸಿದ ಬಿಎಂಟಿಸಿ ಡ್ರೈವರ್ ಪ್ರಶಾಂತ್ ಅವರು ನ್ಯೂಸ್ ಫಸ್ಟ್‌ಗೆ ಈ ಘಟನೆ ಬಗ್ಗೆ ಪಿನ್ ಟು ಪಿನ್ ಮಾಹಿತಿ ಕೊಟ್ಟಿದ್ದಾರೆ. ಇದು ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ನಡೆದಿದ್ದು. ಅದಕ್ಕೂ ಮುಂಚೆ ಹಡ್ಸನ್ ಸಿಗ್ನಲ್‌ನಲ್ಲಿ ಟ್ಯಾಂಕರ್ ಹಾಗೂ ಬಿಎಂಟಿಸಿ ಬಸ್ ಮುಂದೆ ಲೇಡಿ ಕಾರು ಓಡಿಸಿಕೊಂಡು ಬಂದ್ರು‌. ಆಗ ಲೇಡಿಗೆ ಟ್ಯಾಂಕರ್ ಡ್ರೈವರ್ ಬೈದಿದ್ದರು.

ನಂತರ ಕಾರ್ಪೋರೇಷನ್ ಸಿಗ್ನಲ್‌ನಲ್ಲಿ ಜನ ಹತ್ತಿಸಿಕೊಳ್ಳುವಾಗ ನಾನು ನಿಮ್ಮ ಜಗಳದಲ್ಲಿ ನಮಗೆ ಒಂದು ಸಿಗ್ನಲ್ ಹೋಯ್ತು ಅಂತಾ ನಾನು ಬೈದೆ. ಅಷ್ಟಕ್ಕೆ ಬಿಎಂಟಿಸಿ ಬಸ್ ಮುಂದೆ ಯುವತಿ ಕಾರನ್ನು ಬಸ್‌ ಮುಂದಕ್ಕೆ ಹೋಗದ ಹಾಗೆ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಹೋದರು.

publive-image

ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದಾಗ ನನಗೆ ಅವಾಚ್ಯ ಶಬ್ದದಿಂದ ಬೈದು ನನ್ನ ‌ಮೇಲೆ ‌ಹಲ್ಲೆ ಮಾಡಲು ಮುಂದಾದ್ರು. ಬಸ್‌ನಿಂದ ಕೆಳಗೆ ಇಳಿ ಅಂತಾ ಅವಾಜ್ ಕೂಡ ಹಾಕಿದ್ರು. ನನ್ನ ತಪ್ಪು ಇಲ್ಲದೇ ನಾನು ಯಾಕೆ ಕೆಳಗೆ ಇಳಿಯಬೇಕು ಅಂತ ನಾನು ಇಳಿದಿಲ್ಲ.

ಯುವತಿಯ ಎಡಭಾಗಕ್ಕೆ ಬಸ್ ಚಲಾಯಿಸಿದೇ ಹೊರತು ನಾನು ಯುವತಿ ಮೇಲೆ ನುಗ್ಗಿಸಲು ಪ್ರಯತ್ನಿಸಿಲ್ಲ. ಕಬ್ಬನ್ ಪೇಟೆ ಪೋಲೀಸ್ ಠಾಣೆಯಲ್ಲಿ ನನ್ನ ಮೇಲೆ ಎಎಫ್‌ಆರ್ ಆಗಿದೆ ಎಂದಿದ್ದಾರೆ.

ಈ ಘಟನೆ ಬಗ್ಗೆ ಬಿಎಂಟಿಸಿ ಕೂಡ ಸ್ಪಷ್ಟನೆ ನೀಡಿದೆ. ಜೆ.ಜೆ ನಗರದಿಂದ ನಾಗವಾರದತ್ತ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಬಸ್‌ನ ಹಿಂಬದಿ ಬಲಭಾಗವು, ಹಿಂದಿನಿಂದ ಬರುತ್ತಿದ್ದ ಕಾರಿನ ಮುಂಭಾಗದ ಭಾಗಕ್ಕೆ ಡಿಕ್ಕಿಯಾಗಿದೆ. ಅಪಘಾತದ ನಂತರ, ಕಾರು ಚಲಾಯಿಸುತ್ತಿದ್ದ ಮಹಿಳೆ ತನ್ನ ವಾಹನದಿಂದ ಇಳಿದು ಬಸ್‌ನ ಮುಂದೆ ನಿಂತು ಅಡ್ಡಗಟ್ಟಿದ್ದಾರೆ.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಚಾಲಕನನ್ನು ಸೇವೆಯಿಂದ ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಇಲಾಖಾ ಮಟ್ಟದ ಹೆಚ್ಚಿನ ವಿಚಾರಣೆ ಮುಂದುವರೆದಿದೆ. ತನಿಖೆಯ ಫಲಿತಾಂಶದ ಆಧಾರದಲ್ಲಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment