ಬಸ್ನಲ್ಲಿ ಅಪ್ರಾಪ್ತರ ಮೇಲೆ ನಿಗಾ ಇಡುವಂತೆ ಬಿಎಂಟಿಸಿ ಸೂಚನೆ
ಮಕ್ಕಳ ಹಾವ ಭಾವದಲ್ಲಿ ಗೊಂದಲ ಕಂಡರೆ ಕೂಡಲೇ 1098ಗೆ ಕರೆ
ಬಿಎಂಟಿಸಿ ಮುತುವರ್ಜಿ ವಹಿಸ್ತಿರೋದು ನಿಜಕ್ಕೂ ಉತ್ತಮ ಬೆಳವಣಿಗೆ
ಬೆಂಗಳೂರು: 12 ವರ್ಷದ ಪರಿಣವ್ ಮಿಸ್ಸಿಂಗ್ ಸುದ್ದಿ ಸದ್ದು ಮಾಡುತ್ತಿದ್ದಂಗೆ, ಅತ್ತ ಬಿಎಂಟಿಸಿ ಫುಲ್ ಅಲರ್ಟ್ ಆಗಿದೆ. ಕ್ಷುಲಕ ಕಾರಣಕ್ಕೆ ಮನೆ ತೊರೆದು ಬಸ್ನಲ್ಲಿ ಓಡಾಟ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ತೀರ್ಮಾನಿಸಿದೆ. ಅಷ್ಟಕ್ಕೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ತಮ್ಮ ಡ್ರೈವರ್ ಹಾಗೂ ಕಂಡಕ್ಟರ್ಗಳಿಗೆ ಕೊಟ್ಟ ಸೂಚನೆಯಲ್ಲಿ ಏನಿದೆ ಗೊತ್ತಾ?
ವಿಜಯನಗರದ ಸುಖೇಶ್ ಮತ್ತು ನಿವೇದಿತಾ ದಂಪತಿಯ 12 ವರ್ಷದ ಮಗ ಪರಿಣವ್, ಸಣ್ಣ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದ. ಪರಿಣವ್ ಟ್ಯೂಷನ್ ಕ್ಲಾಸ್ನಿಂದ ಬಸ್ ಮೂಲಕ ಮೆಜೆಸ್ಟಿಕ್ಗೆ ತೆರಳಿದ್ದ. ಬಳಿಕ ನಿನ್ನೆ ಹೈದ್ರಾಬಾದ್ನಲ್ಲಿ ಪತ್ತೆಯಾಗಿದ್ದ. ಹೀಗೆ, ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋಗೋರ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಚ್ಚಿನ ನಿಗಾ ವಹಿಸಲು ತೀರ್ಮಾನಿಸಿದೆ. ಒಂಟಿಯಾಗಿ ಬಸ್ನಲ್ಲಿ ಸಂಚರಿಸುವ ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಡ್ರೈವರ್ & ಕಂಡಕ್ಟರ್ಗಳಿಗೆ ಸೂಚನೆ ಕೊಟ್ಟಿದೆ.
ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುವ ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳನ್ನ ಹೊರತು ಪಡಿಸಿ, ಬಸ್ಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ಪ್ರಯಾಣಿಸುವ ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚನೆ ಕೊಟ್ಟಿದೆ. ಮಕ್ಕಳ ಹಾವ-ಭಾವದಲ್ಲಿ ಗೊಂದಲಗಳಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡುವಂತೆ ತಿಳಿಸಿದೆ. ಅಲ್ಲದೇ, ಅಂತಹ ಮಕ್ಕಳನ್ನ ಹತ್ತಿರದ ಠಾಣೆಗೆ ಕರೆದೊಯ್ಯುವಂತೆ ಕೂಡ ಸೂಚನೆ ಕೊಡಲಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಮಕ್ಕಳು ಮನೆ ಬಿಟ್ಟು ಹೋಗ್ತಿರೋದು ನಿಜಕ್ಕೂ ಆಘಾತಕಾರಿ ವಿಚಾರ. ಆದರೆ ಈ ವಿಚಾರದಲ್ಲಿ ಬಿಎಂಟಿಸಿ ಸಂಸ್ಥೆ ಮುತುವರ್ಜಿ ವಹಿಸ್ತಿರೋದು ನಿಜಕ್ಕೂ ಉತ್ತಮ ಬೆಳವಣಿಗೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಸ್ನಲ್ಲಿ ಅಪ್ರಾಪ್ತರ ಮೇಲೆ ನಿಗಾ ಇಡುವಂತೆ ಬಿಎಂಟಿಸಿ ಸೂಚನೆ
ಮಕ್ಕಳ ಹಾವ ಭಾವದಲ್ಲಿ ಗೊಂದಲ ಕಂಡರೆ ಕೂಡಲೇ 1098ಗೆ ಕರೆ
ಬಿಎಂಟಿಸಿ ಮುತುವರ್ಜಿ ವಹಿಸ್ತಿರೋದು ನಿಜಕ್ಕೂ ಉತ್ತಮ ಬೆಳವಣಿಗೆ
ಬೆಂಗಳೂರು: 12 ವರ್ಷದ ಪರಿಣವ್ ಮಿಸ್ಸಿಂಗ್ ಸುದ್ದಿ ಸದ್ದು ಮಾಡುತ್ತಿದ್ದಂಗೆ, ಅತ್ತ ಬಿಎಂಟಿಸಿ ಫುಲ್ ಅಲರ್ಟ್ ಆಗಿದೆ. ಕ್ಷುಲಕ ಕಾರಣಕ್ಕೆ ಮನೆ ತೊರೆದು ಬಸ್ನಲ್ಲಿ ಓಡಾಟ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ತೀರ್ಮಾನಿಸಿದೆ. ಅಷ್ಟಕ್ಕೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ತಮ್ಮ ಡ್ರೈವರ್ ಹಾಗೂ ಕಂಡಕ್ಟರ್ಗಳಿಗೆ ಕೊಟ್ಟ ಸೂಚನೆಯಲ್ಲಿ ಏನಿದೆ ಗೊತ್ತಾ?
ವಿಜಯನಗರದ ಸುಖೇಶ್ ಮತ್ತು ನಿವೇದಿತಾ ದಂಪತಿಯ 12 ವರ್ಷದ ಮಗ ಪರಿಣವ್, ಸಣ್ಣ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದ. ಪರಿಣವ್ ಟ್ಯೂಷನ್ ಕ್ಲಾಸ್ನಿಂದ ಬಸ್ ಮೂಲಕ ಮೆಜೆಸ್ಟಿಕ್ಗೆ ತೆರಳಿದ್ದ. ಬಳಿಕ ನಿನ್ನೆ ಹೈದ್ರಾಬಾದ್ನಲ್ಲಿ ಪತ್ತೆಯಾಗಿದ್ದ. ಹೀಗೆ, ಸಣ್ಣ ವಿಚಾರಕ್ಕೆ ಮನೆ ಬಿಟ್ಟು ಹೋಗೋರ ಮೇಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹೆಚ್ಚಿನ ನಿಗಾ ವಹಿಸಲು ತೀರ್ಮಾನಿಸಿದೆ. ಒಂಟಿಯಾಗಿ ಬಸ್ನಲ್ಲಿ ಸಂಚರಿಸುವ ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಡ್ರೈವರ್ & ಕಂಡಕ್ಟರ್ಗಳಿಗೆ ಸೂಚನೆ ಕೊಟ್ಟಿದೆ.
ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುವ ಶಾಲಾ ಸಮವಸ್ತ್ರದಲ್ಲಿರುವ ಮಕ್ಕಳನ್ನ ಹೊರತು ಪಡಿಸಿ, ಬಸ್ಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ಪ್ರಯಾಣಿಸುವ ಅಪ್ರಾಪ್ತರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚನೆ ಕೊಟ್ಟಿದೆ. ಮಕ್ಕಳ ಹಾವ-ಭಾವದಲ್ಲಿ ಗೊಂದಲಗಳಿದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡುವಂತೆ ತಿಳಿಸಿದೆ. ಅಲ್ಲದೇ, ಅಂತಹ ಮಕ್ಕಳನ್ನ ಹತ್ತಿರದ ಠಾಣೆಗೆ ಕರೆದೊಯ್ಯುವಂತೆ ಕೂಡ ಸೂಚನೆ ಕೊಡಲಾಗಿದೆ. ಒಟ್ಟಿನಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಮಕ್ಕಳು ಮನೆ ಬಿಟ್ಟು ಹೋಗ್ತಿರೋದು ನಿಜಕ್ಕೂ ಆಘಾತಕಾರಿ ವಿಚಾರ. ಆದರೆ ಈ ವಿಚಾರದಲ್ಲಿ ಬಿಎಂಟಿಸಿ ಸಂಸ್ಥೆ ಮುತುವರ್ಜಿ ವಹಿಸ್ತಿರೋದು ನಿಜಕ್ಕೂ ಉತ್ತಮ ಬೆಳವಣಿಗೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ