newsfirstkannada.com

ಕೊಡಗಿನಲ್ಲಿ ಪತ್ನಿಯ ಬರ್ಬರ ಹತ್ಯೆ.. ಕೋವಿ ಸಮೇತ ಪೊಲೀಸರಿಗೆ ಶರಣಾದ ಬೋಪಣ್ಣ; ಕಾರಣವೇನು?

Share :

Published July 20, 2024 at 12:58pm

    ಹೆಂಡತಿಯನ್ನು ಶೂಟ್ ಮಾಡಿದ ಪತಿ ನಾಯಕಂಡ ಬೋಪಣ್ಣ

    ಕೊಲೆಯಾದ ಶಿಲ್ಪ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು

    ಕೋವಿಯೊಂದಿಗೆ ಪೊಲೀಸರಿಗೆ ಶರಣಾದ ಬೋಪಣ್ಣ ಹೇಳಿದ್ದೇನು?

ಗುಂಡಿಟ್ಟು ಹೆಂಡತಿಯನ್ನೇ ಹತ್ಯೆ ಮಾಡಿರೋ ದಾರುಣ ಘಟನೆ ಕೊಡಗಿನಲ್ಲಿ ಮಾರ್ದನಿಸಿದೆ. ಶಿಲ್ಪ ಸೀತಮ್ಮ (36) ಹತ್ಯೆಯಾದ ಮಹಿಳೆ. ಹೆಂಡತಿಯನ್ನು ಕೊಂದ ಬಳಿಕ ಪತಿ ನಾಯಕಂಡ ಬೋಪಣ್ಣ ಕೋವಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೇಲೆ ದರ್ಶನ್​ ಮಾಡಿರೋ ಹಲ್ಲೆ ವಿಡಿಯೋ ಸೆರೆ? 3 ಸೆಕೆಂಡ್​ನ ಕರಾಳತೆಯ ಸತ್ಯ ಕಕ್ಕಿದ ಈ ಆರೋಪಿ 

ವಿರಾಜಪೇಟೆ ತಾಲೂಕಿನ ಬೋಟೋಳಿ ಗ್ರಾಮದಲ್ಲಿ ಈ ಭಯಾನಕ ಮರ್ಡರ್ ನಡೆದಿದೆ. ಮನೆಯಲ್ಲಿ ಜಗಳವಾಡಿಕೊಂಡು ಬಳಿಕ ಪತಿ ಹತ್ಯೆ ಮಾಡಿದ್ದಾರೆಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಗುಂಡಿಗೆ ಬಲಿಯಾಗಿರುವ ಶಿಲ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆಯಾಗಿದ್ದರು. ಇಂದು ಬೆಳಗ್ಗೆ 9ಗಂಟೆಗೆ ಪತಿ ಬೋಪಣ್ಣ (45) ಗುಂಡು ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ತಾಯಿಯನ್ನು ಕಳೆದುಕೊಂಡ A4 ಆರೋಪಿ ರಘು.. ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲದೆ ಕಣ್ಣೀರು ಹಾಕುತ್ತಿದೆ ಕುಟುಂಬ

ಹೆಂಡತಿ ಬರ್ಬರ ಹತ್ಯೆಗೆ ಕಾರಣವೇನು?
ಕೊಲೆಯಾದ ಶಿಲ್ಪ ಸೀತಮ್ಮ ನಿನ್ನೆ ರಾತ್ರಿ ಬೇರೊಬ್ಬರ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ್ದರು. ಇದಕ್ಕೆ ಗಂಡ ಬೋಪಣ್ಣ ಆಕ್ಷೇಪಿಸಿದ್ದಾರೆ. ನಂತರ ಈ ವಿಚಾರವಾಗಿ ಜಗಳ ನಡೆದು ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಶಿಲ್ಪ ಸೀತಮ್ಮ 2012ರಿಂದ 2017ರವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕೊಲೆಯಾದ ನಂತರ ಪತಿ ಬೋಪಣ್ಣ ಪೊಲೀಸ್ ಠಾಣೆಗೆ ಕೋವಿಯೊಂದಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಡಗಿನಲ್ಲಿ ಪತ್ನಿಯ ಬರ್ಬರ ಹತ್ಯೆ.. ಕೋವಿ ಸಮೇತ ಪೊಲೀಸರಿಗೆ ಶರಣಾದ ಬೋಪಣ್ಣ; ಕಾರಣವೇನು?

https://newsfirstlive.com/wp-content/uploads/2024/07/Kodagu-Wife-Murder.jpg

    ಹೆಂಡತಿಯನ್ನು ಶೂಟ್ ಮಾಡಿದ ಪತಿ ನಾಯಕಂಡ ಬೋಪಣ್ಣ

    ಕೊಲೆಯಾದ ಶಿಲ್ಪ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು

    ಕೋವಿಯೊಂದಿಗೆ ಪೊಲೀಸರಿಗೆ ಶರಣಾದ ಬೋಪಣ್ಣ ಹೇಳಿದ್ದೇನು?

ಗುಂಡಿಟ್ಟು ಹೆಂಡತಿಯನ್ನೇ ಹತ್ಯೆ ಮಾಡಿರೋ ದಾರುಣ ಘಟನೆ ಕೊಡಗಿನಲ್ಲಿ ಮಾರ್ದನಿಸಿದೆ. ಶಿಲ್ಪ ಸೀತಮ್ಮ (36) ಹತ್ಯೆಯಾದ ಮಹಿಳೆ. ಹೆಂಡತಿಯನ್ನು ಕೊಂದ ಬಳಿಕ ಪತಿ ನಾಯಕಂಡ ಬೋಪಣ್ಣ ಕೋವಿಯೊಂದಿಗೆ ಪೊಲೀಸರಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೇಲೆ ದರ್ಶನ್​ ಮಾಡಿರೋ ಹಲ್ಲೆ ವಿಡಿಯೋ ಸೆರೆ? 3 ಸೆಕೆಂಡ್​ನ ಕರಾಳತೆಯ ಸತ್ಯ ಕಕ್ಕಿದ ಈ ಆರೋಪಿ 

ವಿರಾಜಪೇಟೆ ತಾಲೂಕಿನ ಬೋಟೋಳಿ ಗ್ರಾಮದಲ್ಲಿ ಈ ಭಯಾನಕ ಮರ್ಡರ್ ನಡೆದಿದೆ. ಮನೆಯಲ್ಲಿ ಜಗಳವಾಡಿಕೊಂಡು ಬಳಿಕ ಪತಿ ಹತ್ಯೆ ಮಾಡಿದ್ದಾರೆಂದು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತಿಯ ಗುಂಡಿಗೆ ಬಲಿಯಾಗಿರುವ ಶಿಲ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆಯಾಗಿದ್ದರು. ಇಂದು ಬೆಳಗ್ಗೆ 9ಗಂಟೆಗೆ ಪತಿ ಬೋಪಣ್ಣ (45) ಗುಂಡು ಹೊಡೆದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ತಾಯಿಯನ್ನು ಕಳೆದುಕೊಂಡ A4 ಆರೋಪಿ ರಘು.. ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲದೆ ಕಣ್ಣೀರು ಹಾಕುತ್ತಿದೆ ಕುಟುಂಬ

ಹೆಂಡತಿ ಬರ್ಬರ ಹತ್ಯೆಗೆ ಕಾರಣವೇನು?
ಕೊಲೆಯಾದ ಶಿಲ್ಪ ಸೀತಮ್ಮ ನಿನ್ನೆ ರಾತ್ರಿ ಬೇರೊಬ್ಬರ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ್ದರು. ಇದಕ್ಕೆ ಗಂಡ ಬೋಪಣ್ಣ ಆಕ್ಷೇಪಿಸಿದ್ದಾರೆ. ನಂತರ ಈ ವಿಚಾರವಾಗಿ ಜಗಳ ನಡೆದು ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಶಿಲ್ಪ ಸೀತಮ್ಮ 2012ರಿಂದ 2017ರವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕೊಲೆಯಾದ ನಂತರ ಪತಿ ಬೋಪಣ್ಣ ಪೊಲೀಸ್ ಠಾಣೆಗೆ ಕೋವಿಯೊಂದಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More