newsfirstkannada.com

ಪ್ರೀತಿ ವಿಚಾರಕ್ಕೆ ಅಪರಿಚಿತನಿಂದ ಧಮ್ಕಿ; ಮನನೊಂದು ಸಾವಿಗೆ ಶರಣಾದ ಯುವಕ

Share :

Published March 20, 2024 at 9:18am

    ಸುಮಾರು ಒಂದುವರೆ ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಜೋಡಿ

    ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ಘಟನೆ

    ಪ್ರೀತಿ ಮಾಡದಂತೆ ಯುವಕನಿಗೆ ಬೆದರಿಕೆ ಹಾಕಿದ್ದ ಯುವತಿಯ ಅತ್ತೆ ಮಾವ

ಬೆಂಗಳೂರು: ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ. ಹರ್ಷಿತ್ ಮೃತ ಯುವಕ. ಇಂದ್ರಕುಮಾರ್ ಮತ್ತು ರಾಧಾ ದಂಪತಿ ಪುತ್ರ ಹರ್ಷಿತ್ ಬ್ಲೇಡ್​ನಿಂದ ಕೈ ಕೊಯ್ದುಕೊಂಡು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಸಲಿಗೆ ಆಗಿದ್ದೇನು?

ಒಂದೂವರೆ ವರ್ಷದಿಂದ ಆನೇಕಲ್ ಎಎಸ್​ಬಿ ಕಾಲೇಜಿನಲ್ಲಿ ಓದುತ್ತಿದ್ದಾಗ ತುಮಕೂರು ಮೂಲದ ಯುವತಿಯನ್ನು ಹರ್ಷಿತ್​ ಪ್ರೀತಿ ಮಾಡುತ್ತಿದ್ದನಂತೆ. ಯುವತಿಯ ಮನೆಗೆ ವಿಚಾರ ತಿಳಿದು ಹರ್ಷಿತ್​ಗೆ ಟಾರ್ಚರ್ ನೀಡಲಾಗುತ್ತಿತ್ತಂತೆ. ಆಕೆಯನ್ನು ಪ್ರೀತಿ ಮಾಡದಂತೆ ಯುವಕನಿಗೆ ಯುವತಿಯ ಅತ್ತೆ ಮಾವ ಬೆದರಿಕೆ ಹಾಕುತ್ತಿದ್ದರಂತೆ. ಬೆನ್ನಲ್ಲೇ ಯುವತಿ ಕೂಡ ಆತನ ಪ್ರೀತಿ ನಿರಾಕರಣೆ ಮಾಡಿದ್ದಳಂತೆ. ಬಳಿಕ ಮೃತ ಯುವಕನಿಗೆ ಅಪರಿಚಿತ ಫೋನ್​ ಮಾಡಿ ನಾನೇ ಆಕೆಯನ್ನು ಮದುವೆಯಾಗುತ್ತೇನೆ. ಆಕೆಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಧಮ್ಕಿ ಹಾಕಿದ್ದರಂತೆ.

ಇದರಿಂದ ಸಾಕಷ್ಟು ಮನನೊಂದಿದ್ದ ಹರ್ಷಿತ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ‌ ಮಾಡಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬ್ಲೇಡ್​ನಿಂದ ಕೈಕೊಯ್ದುಕೊಂಡು ಆ ಪೋಟೋವನ್ನು ತಾಯಿ ಹಾಗೂ ಹುಡುಗಿಯ ನಂಬರ್​ಗೆ ಕಳುಹಿಸಿದ್ದಾನೆ. ಕೂಡಲೇ ಮನೆಗೆ ಬಂದು ನೋಡುವಷ್ಟರಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನಂತೆ. ಈ ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಯುವತಿ, ಆಕೆಯ ಅತ್ತೆ, ಮಾವ ಜೊತೆಗೆ ಅಪರಿಚಿತ ನಂಬರ್​ನಿಂದ ಕಾಲ್​ ಮಾಡಿದ್ದ ವ್ಯಕ್ತಿಯ ವಿರುದ್ಧ ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ಪ್ರೀತಿ ವಿಚಾರಕ್ಕೆ ಅಪರಿಚಿತನಿಂದ ಧಮ್ಕಿ; ಮನನೊಂದು ಸಾವಿಗೆ ಶರಣಾದ ಯುವಕ

https://newsfirstlive.com/wp-content/uploads/2024/03/death-10.jpg

    ಸುಮಾರು ಒಂದುವರೆ ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದ ಜೋಡಿ

    ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ಘಟನೆ

    ಪ್ರೀತಿ ಮಾಡದಂತೆ ಯುವಕನಿಗೆ ಬೆದರಿಕೆ ಹಾಕಿದ್ದ ಯುವತಿಯ ಅತ್ತೆ ಮಾವ

ಬೆಂಗಳೂರು: ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಆನೇಕಲ್ ತಾಲೂಕಿನ ಹುಲಿಮಂಗಲ ಸಮೀಪದ ನಂಜಾಪುರದಲ್ಲಿ ನಡೆದಿದೆ. ಹರ್ಷಿತ್ ಮೃತ ಯುವಕ. ಇಂದ್ರಕುಮಾರ್ ಮತ್ತು ರಾಧಾ ದಂಪತಿ ಪುತ್ರ ಹರ್ಷಿತ್ ಬ್ಲೇಡ್​ನಿಂದ ಕೈ ಕೊಯ್ದುಕೊಂಡು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಸಲಿಗೆ ಆಗಿದ್ದೇನು?

ಒಂದೂವರೆ ವರ್ಷದಿಂದ ಆನೇಕಲ್ ಎಎಸ್​ಬಿ ಕಾಲೇಜಿನಲ್ಲಿ ಓದುತ್ತಿದ್ದಾಗ ತುಮಕೂರು ಮೂಲದ ಯುವತಿಯನ್ನು ಹರ್ಷಿತ್​ ಪ್ರೀತಿ ಮಾಡುತ್ತಿದ್ದನಂತೆ. ಯುವತಿಯ ಮನೆಗೆ ವಿಚಾರ ತಿಳಿದು ಹರ್ಷಿತ್​ಗೆ ಟಾರ್ಚರ್ ನೀಡಲಾಗುತ್ತಿತ್ತಂತೆ. ಆಕೆಯನ್ನು ಪ್ರೀತಿ ಮಾಡದಂತೆ ಯುವಕನಿಗೆ ಯುವತಿಯ ಅತ್ತೆ ಮಾವ ಬೆದರಿಕೆ ಹಾಕುತ್ತಿದ್ದರಂತೆ. ಬೆನ್ನಲ್ಲೇ ಯುವತಿ ಕೂಡ ಆತನ ಪ್ರೀತಿ ನಿರಾಕರಣೆ ಮಾಡಿದ್ದಳಂತೆ. ಬಳಿಕ ಮೃತ ಯುವಕನಿಗೆ ಅಪರಿಚಿತ ಫೋನ್​ ಮಾಡಿ ನಾನೇ ಆಕೆಯನ್ನು ಮದುವೆಯಾಗುತ್ತೇನೆ. ಆಕೆಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಧಮ್ಕಿ ಹಾಕಿದ್ದರಂತೆ.

ಇದರಿಂದ ಸಾಕಷ್ಟು ಮನನೊಂದಿದ್ದ ಹರ್ಷಿತ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ‌ ಮಾಡಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬ್ಲೇಡ್​ನಿಂದ ಕೈಕೊಯ್ದುಕೊಂಡು ಆ ಪೋಟೋವನ್ನು ತಾಯಿ ಹಾಗೂ ಹುಡುಗಿಯ ನಂಬರ್​ಗೆ ಕಳುಹಿಸಿದ್ದಾನೆ. ಕೂಡಲೇ ಮನೆಗೆ ಬಂದು ನೋಡುವಷ್ಟರಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನಂತೆ. ಈ ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಯುವತಿ, ಆಕೆಯ ಅತ್ತೆ, ಮಾವ ಜೊತೆಗೆ ಅಪರಿಚಿತ ನಂಬರ್​ನಿಂದ ಕಾಲ್​ ಮಾಡಿದ್ದ ವ್ಯಕ್ತಿಯ ವಿರುದ್ಧ ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More