ಹೆಣ್ಣಿನ ವೇಷದಲ್ಲಿ ಮಾಜಿ ಪ್ರಿಯತಮೆ ಮನೆಗೆ ನುಗ್ಗಿದ ಪ್ರಿಯಕರ.. ಆಮೇಲಾಗಿದ್ದೇ ಘೋರ ದುರಂತ

author-image
Veena Gangani
Updated On
ಹೆಣ್ಣಿನ ವೇಷದಲ್ಲಿ ಮಾಜಿ ಪ್ರಿಯತಮೆ ಮನೆಗೆ ನುಗ್ಗಿದ ಪ್ರಿಯಕರ.. ಆಮೇಲಾಗಿದ್ದೇ ಘೋರ ದುರಂತ
Advertisment
  • ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದ ಮಹಿಳೆಯ ಪೋಷಕರು
  • ಲೆಹೆಂಗಾ ಧರಿಸಿಕೊಂಡು ಪ್ರಿಯತಮೆ ಮನೆಗೆ ಏಕಾಏಕಿ ಎಂಟ್ರಿ ಕೊಟ್ಟ
  • ಗಂಭೀರ ಗಾಯ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು

ಮಥುರಾ: ಪ್ರಿಯಕರನೊಬ್ಬ ಲೆಹೆಂಗಾ ಧರಿಸಿಕೊಂಡು ಮಹಿಳೆಯ ವೇಷದಲ್ಲಿ ತನ್ನ ಪ್ರಿಯತಮೆಯ ಮನೆಗೆ ಬಂದು ಬೆಂಕಿ ಹಚ್ಚಿರೋ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಹಸನ್‌ಪುರ ಗ್ರಾಮದ ನಿವಾಸಿ ಉಮೇಶ್ ಎಂಬ ವ್ಯಕ್ತಿಯು ರೇಖಾಳ ಅತ್ತಿಗೆಯ ಸಹೋದರನಾಗಿದ್ದ. ರೇಖಾಳನ್ನು ತುಂಬಾ ಪ್ರೀತಿಸುತ್ತಿದ್ದ. ಈ ಹಿಂದೆ ರೇಖಾ ಉಮೇಶ್ ಜೊತೆ ಮನೆಬಿಟ್ಟು ಓಡಿ ಹೋಗಿದ್ದಳಂತೆ. ಇದಾದ ಬಳಿಕ ಪೊಲೀಸರ ಹುಡುಕಾಟದಿಂದ ರೇಖಾ ಪತ್ತೆಯಾಗಿದ್ದಳು.

ಇದನ್ನೂ ಓದಿ: ತಾಯಿ- ಮಗನ ಬಗ್ಗೆ ಸುಮಲತಾ ಸ್ಪಷ್ಟನೆ; ದರ್ಶನ್ ಅನ್​ಫಾಲೋ ವಿಚಾರಕ್ಕೂ ಉತ್ತರ..!

ಇನ್ನೂ, ಉಮೇಶ್​ನನ್ನು ಬಿಟ್ಟು ಬಂದ ರೇಖಾಳಿಗೆ ಕುಟುಂಬಸ್ಥರು ಮತ್ತೊಂದು ಮದುವೆ ಮಾಡಿಸಿದ್ದರು. ಇದಾದ ಬಳಿಕ ರೇಖಾ ಎಲ್ಲವನ್ನು ಮರೆತು ಪತಿ ಹಾಗೂ ಮಕ್ಕಳ ಜೊತೆಗೆ ಸುಖ ಸಂಸಾರ ನಡೆಸುತ್ತಿದ್ದಳು. ಆದ್ರೆ, ಹೀಗೆ ಒಂದು ದಿನ ಕೋ ಗ್ರಾಮದ ನಿವಾಸಿ ರೇಖಾ, ತನ್ನ ಪತಿ ಕೆಲಸಕ್ಕೆ ಮತ್ತು ಮಕ್ಕಳು ಶಾಲೆಗೆ ಹೋಗಿದ್ದಾಗ ತನ್ನ ಮನೆಯಲ್ಲಿ ಟಿವಿ ನೋಡುತ್ತಾ ಕುಳಿತುಕೊಂಡಿದ್ದಂತೆ. ಪತಿ ಮತ್ತು ಮಕ್ಕಳು ಇಲ್ಲದ ಸಮಯವನ್ನು ನೋಡಿಕೊಂಡು ಉಮೇಶ್​ ಲೆಹೆಂಗಾ ಧರಿಸಿ ಟೆರೇಸ್ ಮೂಲಕ ಮನೆಯೊಳಗೆ ಬಂದಿದ್ದಾನೆ. ಆಗ ತನ್ನೊಂದಿಗೆ ಬಾ ಅಂತ ಕೇಳಿಕೊಂಡಿದ್ದಾನೆ. ಆದ್ರೆ ರೇಖಾ ಅದಕ್ಕೆ ನಿರಾಕರಿಸಿದ್ದಾಳೆ. ರೇಖಾ ಮಾತನ್ನು ಕೇಳುತ್ತಿದ್ದಂತೆ ಏಕಾಏಕಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಆಕೆಗೆ ಬೆಂಕಿ ಹಚ್ಚಿದ್ದಾನಂತೆ.

publive-image

ಇನ್ನೂ, ಬೆಂಕಿ ಹಚ್ಚುತ್ತಿದ್ದಂತೆ ರೇಖಾ ತನ್ನ ರಕ್ಷಣೆಗಾಗಿ ಕಿರುಚಾಡಿದ್ದಾಳೆ. ಆಕೆ ಧ್ವನಿ ಕೇಳುತ್ತಿದ್ದಂತೆ ನೆರೆಹೊರೆಯವರು ಆಕೆಯ ಸಹಾಯ ಧಾವಿಸಿದರು, ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ಆ ಕೂಡಲೇ ಆರೋಪಿ ಉಮೇಶ್​ ಟೆರೇಸ್‌ನಿಂದ ಹಾರಿ ತಪ್ಪಿಸಿಕೊಳ್ಳಲು ಮುಂದಾಗಿದ್ದ. ಆದ್ರೆ ಎಸ್ಕೇಪ್​ ಆಗುವ ಬರದಲ್ಲಿ ಆರೋಪಿ ತನ್ನನ್ನು ತಾನೇ ಗಾಯಮಾಡಿಕೊಂಡು ಸಿಕ್ಕಿಬಿದ್ದಿದ್ದಾನೆ. ಹೀಗಾಗಿ ರೇಖಾ ಹಾಗೂ ಆರೋಪಿ ಉಮೇಶ್​ನನ್ನು ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ಉಮೇಶ್ ಆಗಾಗ ರೇಖಾಳ ಮನೆಗೆ ಭೇಟಿ ನೀಡುತ್ತಿದ್ದನಂತೆ. ಕಳೆದ ವರ್ಷ ಆಗಸ್ಟ್ 31 ರಂದು, ರೇಖಾ ಉಮೇಶ್​ ಜೊತೆಗೆ ಮನೆಯಿಂದ ಓಡಿ ಹೋಗಿದ್ದಳಂತೆ. ಇದಾದ ಬಳಿ ಈ ವಿಚಾರ ತಿಳಿದ ಆಕೆಯ ಕುಟುಂಬಸ್ಥರು ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದು. ಮತ್ತೆ ಫೆಬ್ರವರಿ 10 ರಂದು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ರೇಖಾಳನ್ನು ಮತ್ತೆ ಕುಟುಂಬಸ್ಥರು ಮನೆಗೆ ಕರೆದುಕೊಂಡು ಬಂದಿದ್ದಾರೆ. ಘಟನೆಯ ನಂತರ, ರೇಖಾ ತನ್ನ ತಪ್ಪನ್ನು ಅರಿತುಕೊಂಡು ಉಮೇಶ್‌ನಿಂದ ದೂರವಾಗಿದ್ದಳಂತೆ. ಇದೇ ಕೋಪದಲ್ಲಿ ಆಕೆಯ ಪ್ರಾಣ ತೆಗೆಯಲು ಪ್ರಯತ್ನಿಸಿದ್ದಾನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment