ಬಜೆಟ್ ವಿವರವನ್ನು ಅಷ್ಟೊಂದು ಗೌಪ್ಯವಾಗಿ ಕಾಪಾಡುವುದು ಹೇಗೆ?
ಬಜೆಟ್ ಮಂಡನೆಗೂ ಹತ್ತು ದಿನಗಳ ಮುಂಚೆ ಏನೆಲ್ಲಾ ನಡೆಯುತ್ತದೆ?
70 ವರ್ಷಗಳಿಂದ ಯಾವ ಬಜೆಟ್ನ ಮಾಹಿತಿಯೂ ಸೋರಿಕೆಯಾಗಿಲ್ಲ
ನವದೆಹಲಿ: ಕೇಂದ್ರ ಸರ್ಕಾರದ ಮೂರನೇ ಅವಧಿಯ ಬಜೆಟ್ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಈ ಮೂಲಕ ಸತತವಾಗಿ 7ನೇ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ತಮ್ಮದಾಗಿಸಿಕೊಳ್ಳಲಿದ್ದಾರೆ. ಇಡೀ ದೇಶವನ್ನೇ ಉದ್ದೇಶಿಸಿ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ದೇಶದ ಆರ್ಥಿಕ ಆರೋಗ್ಯದ ಸಂಪೂರ್ಣ ವಿವರದೊಂದಿಗೆ ಹೊಸ ಹೊಸ ಯೋಜನೆಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ. ಯಾವುದೆಲ್ಲ ಜನಸಾಮಾನ್ಯರಿಗೆ ಹೊರೆ, ಬರೆ, ಇಳಿಕೆ ಸರಳಿಕೆ ಅನ್ನೋದರ ಮಾಹಿತಿ ಇಂದು ಗೊತ್ತಾಗಲಿದೆ. ಈ ಒಂದು ಬಜೆಟ್ ಮಂಡನೆಗಾಗಿ ಇಡೀ ಹಣಕಾಸು ಮಂತ್ರಾಲಯವೇ ಹಲವು ತಿಂಗಳುಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಬಜೆಟ್ನ ಒಂದೇ ಒಂದು ಅಂಶವು ಕೂಡ ಆಚೆ ಬರದಂತೆ ಗೌಪ್ಯವಾಗಿ ಕಾಪಾಡುತ್ತದೆ.
ಹಾಗಿದ್ರೆ ಬಜೆಟ್ ಮಾಹಿತಿಯನ್ನು ಇಷ್ಟು ಗೌಪ್ಯವಾಗಿ ಕಾಪಾಡಿಕೊಳ್ಳುವುದು ಏಕೆ ಮತ್ತು ಹೇಗೆ.? ಬಜೆಟ್ ಮಂಡನೆಗೂ ಮುನ್ನ ಈ ಬಗ್ಗೆ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಸೋರಿಕೆಯಾಗಿತ್ತು ಮೊದಲ ಬಾರಿ ಮಂಡಿಸಿದ ಬಜೆಟ್ ಮಾಹಿತಿ
ಈಗಾಗಲೇ ನಿಮಗೆ ತಿಳಿದಿರುವಂತೆ ಭಾರತದ ಮೊದಲ ಬಜೆಟ್ ಮಂಡಿಸಿದ್ದು ಶಣ್ಮುಖಮ್ ಚೆಟ್ಟಿ. 1947-48ರ ಸಾಲಿನ ಬಜೆಟ್ನ್ನು ಅಂದಿನ ಕೇಂದ್ರ ಸಚಿವ ಶಣ್ಮುಖಮ್ ಚೆಟ್ಟಿ ಮಂಡಿಸಿದ್ದರು. ಅವರು ಬ್ರಿಟಿಷ್ ಜಸ್ಟಿಸ್ ಪಾರ್ಟಿಯ ಪರವಾಗಿದ್ದ ಕಾರಣ ಆ ವೇಳೆ ಬಜೆಟ್ ಹಲವು ಮಾಹಿತಿಗಳು ಸೋರಿಕೆಯಾಗಿದ್ದವು. ಬಜೆಟ್ಗೂ ಮುನ್ನ ಇಂಗ್ಲೆಂಡ್ನ ಚಾನ್ಸಲರ್ ಹಗ್ ಡೆಲ್ಟಾನ್ ಸಹಜವಾಗಿ ಮಾಧ್ಯಮಗಳ ಎದುರು ತೆರಿಗೆಯಲ್ಲಾಗುವ ಬದಲಾವಣೆಯ ಮಾಹಿತಿಗಳನ್ನು ಬಿಚ್ಚಿಟ್ಟಿದ್ದರು. ಬಜೆಟ್ ಭಾಷಣಕ್ಕೂ ಮುಂಚೆ ಬಜೆಟ್ನ ಬಹುತೇಕ ಮಾಹಿತಿಗಳು ಸೋರಿಕೆಯಾಗಿದ್ವು. ಇದು ದೊಡ್ಡ ವಿವಾದವಾಗಿ ಪರಿಣಮಿಸಿತ್ತು. ಅಂದಿನಿಂದ ಬಜೆಟ್ ವಿವವರನ್ನು ಸಂಪೂರ್ಣವಾಗಿ ರಹಸ್ಯದಿಂದ ಇಡಲಾಯ್ತು. ಇದರ ಪರಿಣಾಮವಾಗಿ 1950 ರಿಂದ ಇಲ್ಲಿಯವರೆಗೂ ಬಜೆಟ್ ಸೋರಿಕೆಯಂತ ಒಂದೇ ಒಂದು ಘಟನೆ ಭಾರತದಲ್ಲಿ ನಡೆದಿಲ್ಲ.
ಇದನ್ನೂ ಓದಿ: ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್.. ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆಯಾಗುತ್ತಾ? ಎಷ್ಟಿದೆ?
ಬಜೆಟ್ನ್ನು ಇಷ್ಟೊಂದು ಗೌಪ್ಯವಾಗಿ ಕಾಪಾಡಲು ಹಲವು ಪ್ರಕ್ರಿಯೆಗಳು ನಡೆಯುತ್ತವೆ. ಅದರಲ್ಲೂ ಅಂತರ್ಜಾಲದ ಇಂದಿನ ಯುಗದಲ್ಲಿ ಬಜೆಟ್ನ್ನು ಅಷ್ಟೊಂದು ಗೌಪ್ಯವಾಗಿ ಕಾಪಾಡುವುದು ಸರಳ ಮಾತಲ್ಲ. ಆದ್ರೆ ಕಳೆದ 7 ದಶಕಗಳಿಂದ ಈ ಸವಾಲನ್ನು ಭಾರತದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳು ಸರಳವಾಗಿ ಎದುರಿಸಿವೆ.
1951 ರಿಂದ 1980ರವರೆಗೂ ಬಜೆಟ್ನ ವಿವರಗಳು ಮಿಂಟೋ ರೋಡ್ ಪ್ರಿಂಟಿಂಗ್ ಪ್ರೆಸ್ನಲ್ಲಿ ಮುದ್ರಣಗೊಳ್ಳುತ್ತಿದ್ದವು. ನಂತರ ಇದಕ್ಕಾಗಿ ವಿಶೇಷವಾದ ವ್ಯವಸ್ಥೆಯನ್ನು ನಾರ್ಥ್ ಬ್ಲಾಕ್ನ ಹಣಕಾಸು ಸಚಿವಾಲಯದ ಕಟ್ಟಡಕ್ಕೆ ಶಿಫ್ಟ್ ಮಾಡಲಾಯ್ತು. ಬಜೆಟ್ ಮಂಡನೆಯಾಗುವ ಒಂದು ವಾರದ ಮೊದಲು ಇಡೀ ಹಣಕಾಸು ಸಚಿವಾಲಯವೇ ಹೆಚ್ಚು ಕಡಿಮೆ ಕ್ವಾರಂಟೈನ್ಗೆ ಒಳಗಾಗುತ್ತದೆ. ಬಜೆಟ್ ಮಂಡನೆಯಾಗುವವರೆಗೂ ಮಾಧ್ಯಮಗಳ ಸಹಿತ ಯಾವುದೇ ವ್ಯಕ್ತಿಗೆ ಅಲ್ಲಿಗೆ ಭೇಟಿ ಮಾಡಲು ಅವಕಾಶ ಇರುವುದಿಲ್ಲ. ಎಂಟ್ರಿ- ಎಕ್ಸಿಟ್ಗಳಲ್ಲಿ ಬಹುದೊಡ್ಡ ಭದ್ರತೆಯನ್ನು ಒದಗಿಸಲಾಗುತ್ತದೆ. ಬಜೆಟ್ ವಿವರಗಳ ತಯಾರಿಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ಅಧಿಕಾರಿ ಕೂಡ ಗುಪ್ತಚರ ಇಲಾಖೆಯ ಹದ್ದಿನ ಕಣ್ಣಿನಡಿ ಇರುತ್ತಾರೆ. ಇನ್ನು ಗುಪ್ತಚರ ಇಲಾಖೆಯ ಹಲವು ಅಧಿಕಾರಿಗಳು ಕೂಡ ಈ ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುತ್ತಾರೆ. ಅವರ ಫೋನ್ ಕಾಲ್ಗಳು ಕೂಡ ಟ್ರ್ಯಾಕ್ ಮಾಡಿ ಇಡಲಾಗಿರುತ್ತದೆ.
ಸುಮಾರು 10 ದಿನಗಳ ಕಾಲ ಸುಮಾರು 100 ಜನ ಹಣಕಾಸು ಸಚಿವಾಲಯದ ಅಧಿಕಾರಿಗಳು ಈ ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುತ್ತಾರೆ. ಈ ಸಮಯದಲ್ಲಿ ಅವರು ಯಾರೊಂದಿಗೆ ಸಂಪರ್ಕ ಹೊಂದಿರುವುದಿಲ್ಲ. ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಲೂ ಕೂಡ ಅವರಿಗೆ ನಿರ್ಬಂಧವಿರುತ್ತದೆ. ಕುಟುಂಬದವರಿಗೆ ತುರ್ತು ಸಂದರ್ಭದಲ್ಲಿ ಮಾತ್ರ ಒಂದು ಸಂದೇಶ ಕಳುಹಿಸಲು ಅವರಿಗೆ ಹಣಕಾಸು ಇಲಾಖೆಯದ್ದೆ ಒಂದು ನಂಬರ್ ನೀಡಲಾಗಿರುತ್ತದೆ. ಆದ್ರೆ ಯಾವುದೇ ಸಂದರ್ಭದಲ್ಲಿಯೂ ಕೂಡ ಬಜೆಟ್ ತಯಾರಿಕೆಯಲ್ಲಿ ನಿರತರಾಗಿರುವ ಅಧಿಕಾರಿಗಳು ಅವರೊಂದಿಗೆ ಮಾನಾಡುವಂತಿಲ್ಲ.
ಕೇವಲ ಹಣಕಾಸು ಸಚಿವರು ಮಾತ್ರ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶವಿರುತ್ತದೆ. ಗುಪ್ತಚರ ಇಲಾಖೆಯ ಮುಖ್ಯಸ್ಥರು ಯಾವಾಗ ಬೇಕಾದರೂ ಸರ್ಪ್ರೈಸ್ ವಿಸಿಟ್ ನೀಡುವ ಸಾಧ್ಯತೆ ಕೂಡ ಇರುತ್ತದೆ
ಇದನ್ನೂ ಓದಿ:ಬಜೆಟ್ಗೂ ಮುನ್ನ ಬಂಗಾರದ ಬೆಲೆ ಇಳಿಕೆ! ಇಂದು ಎಷ್ಟಿದೆ ಗೊತ್ತಾ?
ಸಿಹಿ ಹಲ್ವಾ ಕಾರ್ಯಕ್ರಮ ಆದ ಬಳಿಕವೇ ಬಜೆಟ್ ಮುದ್ರಣ ಕಾರ್ಯಗಳು ಆರಂಭವಾಗುತ್ತವೆ. ಇಲಾಖೆಯ ಎಲ್ಲಾ ಕಂಪ್ಯೂಟರ್ಗಳು ಸೈಬರ್ ಕಳುವನ್ನು ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಮಾಹಿತಿ ಕೇಂದ್ರದ ಸಂಪರ್ಕದಿಂದ ಡಿಲಿಂಕ್ಡ್ ಆಗಿರುತ್ತವೆ. ಅತ್ಯಂತ ಪ್ರಭಾವಶಾಲಿ ಮೊಬೈಲ್ ಜಾಮರ್ನ್ನು ಹಣಕಾಸು ಇಲಾಖೆಯ ಕಟ್ಟಡದಲ್ಲಿ ಅಳವಡಿಸಿರಲಾಗುತ್ತದೆ. 10 ದಿನಗಳ ಕಾಲ ಇದೇ ಕಟ್ಟಡದಲ್ಲಿ ವೈದ್ಯರ ತಂಡವೊಂದು ಬೀಡು ಬಿಟ್ಟಿರುತ್ತದೆ. ಯಾವುದೇ ಅಧಿಕಾರಿಗಳ ಆರೋಗ್ಯದಲ್ಲಿ ದಿಢೀರ್ ಏರುಪೇರಾದರೆ ಅವರ ಸಹಾಕ್ಕೆಂದು ವೈದ್ಯರು ಬಂದಿರುತ್ತಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಜೆಟ್ ವಿವರವನ್ನು ಅಷ್ಟೊಂದು ಗೌಪ್ಯವಾಗಿ ಕಾಪಾಡುವುದು ಹೇಗೆ?
ಬಜೆಟ್ ಮಂಡನೆಗೂ ಹತ್ತು ದಿನಗಳ ಮುಂಚೆ ಏನೆಲ್ಲಾ ನಡೆಯುತ್ತದೆ?
70 ವರ್ಷಗಳಿಂದ ಯಾವ ಬಜೆಟ್ನ ಮಾಹಿತಿಯೂ ಸೋರಿಕೆಯಾಗಿಲ್ಲ
ನವದೆಹಲಿ: ಕೇಂದ್ರ ಸರ್ಕಾರದ ಮೂರನೇ ಅವಧಿಯ ಬಜೆಟ್ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಈ ಮೂಲಕ ಸತತವಾಗಿ 7ನೇ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ತಮ್ಮದಾಗಿಸಿಕೊಳ್ಳಲಿದ್ದಾರೆ. ಇಡೀ ದೇಶವನ್ನೇ ಉದ್ದೇಶಿಸಿ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ದೇಶದ ಆರ್ಥಿಕ ಆರೋಗ್ಯದ ಸಂಪೂರ್ಣ ವಿವರದೊಂದಿಗೆ ಹೊಸ ಹೊಸ ಯೋಜನೆಗಳ ಬಗ್ಗೆ ಘೋಷಣೆ ಮಾಡಲಿದ್ದಾರೆ. ಯಾವುದೆಲ್ಲ ಜನಸಾಮಾನ್ಯರಿಗೆ ಹೊರೆ, ಬರೆ, ಇಳಿಕೆ ಸರಳಿಕೆ ಅನ್ನೋದರ ಮಾಹಿತಿ ಇಂದು ಗೊತ್ತಾಗಲಿದೆ. ಈ ಒಂದು ಬಜೆಟ್ ಮಂಡನೆಗಾಗಿ ಇಡೀ ಹಣಕಾಸು ಮಂತ್ರಾಲಯವೇ ಹಲವು ತಿಂಗಳುಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಬಜೆಟ್ನ ಒಂದೇ ಒಂದು ಅಂಶವು ಕೂಡ ಆಚೆ ಬರದಂತೆ ಗೌಪ್ಯವಾಗಿ ಕಾಪಾಡುತ್ತದೆ.
ಹಾಗಿದ್ರೆ ಬಜೆಟ್ ಮಾಹಿತಿಯನ್ನು ಇಷ್ಟು ಗೌಪ್ಯವಾಗಿ ಕಾಪಾಡಿಕೊಳ್ಳುವುದು ಏಕೆ ಮತ್ತು ಹೇಗೆ.? ಬಜೆಟ್ ಮಂಡನೆಗೂ ಮುನ್ನ ಈ ಬಗ್ಗೆ ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಎಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಸೋರಿಕೆಯಾಗಿತ್ತು ಮೊದಲ ಬಾರಿ ಮಂಡಿಸಿದ ಬಜೆಟ್ ಮಾಹಿತಿ
ಈಗಾಗಲೇ ನಿಮಗೆ ತಿಳಿದಿರುವಂತೆ ಭಾರತದ ಮೊದಲ ಬಜೆಟ್ ಮಂಡಿಸಿದ್ದು ಶಣ್ಮುಖಮ್ ಚೆಟ್ಟಿ. 1947-48ರ ಸಾಲಿನ ಬಜೆಟ್ನ್ನು ಅಂದಿನ ಕೇಂದ್ರ ಸಚಿವ ಶಣ್ಮುಖಮ್ ಚೆಟ್ಟಿ ಮಂಡಿಸಿದ್ದರು. ಅವರು ಬ್ರಿಟಿಷ್ ಜಸ್ಟಿಸ್ ಪಾರ್ಟಿಯ ಪರವಾಗಿದ್ದ ಕಾರಣ ಆ ವೇಳೆ ಬಜೆಟ್ ಹಲವು ಮಾಹಿತಿಗಳು ಸೋರಿಕೆಯಾಗಿದ್ದವು. ಬಜೆಟ್ಗೂ ಮುನ್ನ ಇಂಗ್ಲೆಂಡ್ನ ಚಾನ್ಸಲರ್ ಹಗ್ ಡೆಲ್ಟಾನ್ ಸಹಜವಾಗಿ ಮಾಧ್ಯಮಗಳ ಎದುರು ತೆರಿಗೆಯಲ್ಲಾಗುವ ಬದಲಾವಣೆಯ ಮಾಹಿತಿಗಳನ್ನು ಬಿಚ್ಚಿಟ್ಟಿದ್ದರು. ಬಜೆಟ್ ಭಾಷಣಕ್ಕೂ ಮುಂಚೆ ಬಜೆಟ್ನ ಬಹುತೇಕ ಮಾಹಿತಿಗಳು ಸೋರಿಕೆಯಾಗಿದ್ವು. ಇದು ದೊಡ್ಡ ವಿವಾದವಾಗಿ ಪರಿಣಮಿಸಿತ್ತು. ಅಂದಿನಿಂದ ಬಜೆಟ್ ವಿವವರನ್ನು ಸಂಪೂರ್ಣವಾಗಿ ರಹಸ್ಯದಿಂದ ಇಡಲಾಯ್ತು. ಇದರ ಪರಿಣಾಮವಾಗಿ 1950 ರಿಂದ ಇಲ್ಲಿಯವರೆಗೂ ಬಜೆಟ್ ಸೋರಿಕೆಯಂತ ಒಂದೇ ಒಂದು ಘಟನೆ ಭಾರತದಲ್ಲಿ ನಡೆದಿಲ್ಲ.
ಇದನ್ನೂ ಓದಿ: ಇಂದು ಮೋದಿ 3.0 ಸರ್ಕಾರದ ಮೊದಲ ಬಜೆಟ್.. ಪೆಟ್ರೋಲ್-ಡೀಸೆಲ್ ಬೆಲೆ ಕಡಿಮೆಯಾಗುತ್ತಾ? ಎಷ್ಟಿದೆ?
ಬಜೆಟ್ನ್ನು ಇಷ್ಟೊಂದು ಗೌಪ್ಯವಾಗಿ ಕಾಪಾಡಲು ಹಲವು ಪ್ರಕ್ರಿಯೆಗಳು ನಡೆಯುತ್ತವೆ. ಅದರಲ್ಲೂ ಅಂತರ್ಜಾಲದ ಇಂದಿನ ಯುಗದಲ್ಲಿ ಬಜೆಟ್ನ್ನು ಅಷ್ಟೊಂದು ಗೌಪ್ಯವಾಗಿ ಕಾಪಾಡುವುದು ಸರಳ ಮಾತಲ್ಲ. ಆದ್ರೆ ಕಳೆದ 7 ದಶಕಗಳಿಂದ ಈ ಸವಾಲನ್ನು ಭಾರತದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳು ಸರಳವಾಗಿ ಎದುರಿಸಿವೆ.
1951 ರಿಂದ 1980ರವರೆಗೂ ಬಜೆಟ್ನ ವಿವರಗಳು ಮಿಂಟೋ ರೋಡ್ ಪ್ರಿಂಟಿಂಗ್ ಪ್ರೆಸ್ನಲ್ಲಿ ಮುದ್ರಣಗೊಳ್ಳುತ್ತಿದ್ದವು. ನಂತರ ಇದಕ್ಕಾಗಿ ವಿಶೇಷವಾದ ವ್ಯವಸ್ಥೆಯನ್ನು ನಾರ್ಥ್ ಬ್ಲಾಕ್ನ ಹಣಕಾಸು ಸಚಿವಾಲಯದ ಕಟ್ಟಡಕ್ಕೆ ಶಿಫ್ಟ್ ಮಾಡಲಾಯ್ತು. ಬಜೆಟ್ ಮಂಡನೆಯಾಗುವ ಒಂದು ವಾರದ ಮೊದಲು ಇಡೀ ಹಣಕಾಸು ಸಚಿವಾಲಯವೇ ಹೆಚ್ಚು ಕಡಿಮೆ ಕ್ವಾರಂಟೈನ್ಗೆ ಒಳಗಾಗುತ್ತದೆ. ಬಜೆಟ್ ಮಂಡನೆಯಾಗುವವರೆಗೂ ಮಾಧ್ಯಮಗಳ ಸಹಿತ ಯಾವುದೇ ವ್ಯಕ್ತಿಗೆ ಅಲ್ಲಿಗೆ ಭೇಟಿ ಮಾಡಲು ಅವಕಾಶ ಇರುವುದಿಲ್ಲ. ಎಂಟ್ರಿ- ಎಕ್ಸಿಟ್ಗಳಲ್ಲಿ ಬಹುದೊಡ್ಡ ಭದ್ರತೆಯನ್ನು ಒದಗಿಸಲಾಗುತ್ತದೆ. ಬಜೆಟ್ ವಿವರಗಳ ತಯಾರಿಯಲ್ಲಿ ನಿರತರಾಗಿರುವ ಪ್ರತಿಯೊಬ್ಬ ಅಧಿಕಾರಿ ಕೂಡ ಗುಪ್ತಚರ ಇಲಾಖೆಯ ಹದ್ದಿನ ಕಣ್ಣಿನಡಿ ಇರುತ್ತಾರೆ. ಇನ್ನು ಗುಪ್ತಚರ ಇಲಾಖೆಯ ಹಲವು ಅಧಿಕಾರಿಗಳು ಕೂಡ ಈ ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುತ್ತಾರೆ. ಅವರ ಫೋನ್ ಕಾಲ್ಗಳು ಕೂಡ ಟ್ರ್ಯಾಕ್ ಮಾಡಿ ಇಡಲಾಗಿರುತ್ತದೆ.
ಸುಮಾರು 10 ದಿನಗಳ ಕಾಲ ಸುಮಾರು 100 ಜನ ಹಣಕಾಸು ಸಚಿವಾಲಯದ ಅಧಿಕಾರಿಗಳು ಈ ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಭಾಗಿಯಾಗಿರುತ್ತಾರೆ. ಈ ಸಮಯದಲ್ಲಿ ಅವರು ಯಾರೊಂದಿಗೆ ಸಂಪರ್ಕ ಹೊಂದಿರುವುದಿಲ್ಲ. ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಲೂ ಕೂಡ ಅವರಿಗೆ ನಿರ್ಬಂಧವಿರುತ್ತದೆ. ಕುಟುಂಬದವರಿಗೆ ತುರ್ತು ಸಂದರ್ಭದಲ್ಲಿ ಮಾತ್ರ ಒಂದು ಸಂದೇಶ ಕಳುಹಿಸಲು ಅವರಿಗೆ ಹಣಕಾಸು ಇಲಾಖೆಯದ್ದೆ ಒಂದು ನಂಬರ್ ನೀಡಲಾಗಿರುತ್ತದೆ. ಆದ್ರೆ ಯಾವುದೇ ಸಂದರ್ಭದಲ್ಲಿಯೂ ಕೂಡ ಬಜೆಟ್ ತಯಾರಿಕೆಯಲ್ಲಿ ನಿರತರಾಗಿರುವ ಅಧಿಕಾರಿಗಳು ಅವರೊಂದಿಗೆ ಮಾನಾಡುವಂತಿಲ್ಲ.
ಕೇವಲ ಹಣಕಾಸು ಸಚಿವರು ಮಾತ್ರ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲು ಅವಕಾಶವಿರುತ್ತದೆ. ಗುಪ್ತಚರ ಇಲಾಖೆಯ ಮುಖ್ಯಸ್ಥರು ಯಾವಾಗ ಬೇಕಾದರೂ ಸರ್ಪ್ರೈಸ್ ವಿಸಿಟ್ ನೀಡುವ ಸಾಧ್ಯತೆ ಕೂಡ ಇರುತ್ತದೆ
ಇದನ್ನೂ ಓದಿ:ಬಜೆಟ್ಗೂ ಮುನ್ನ ಬಂಗಾರದ ಬೆಲೆ ಇಳಿಕೆ! ಇಂದು ಎಷ್ಟಿದೆ ಗೊತ್ತಾ?
ಸಿಹಿ ಹಲ್ವಾ ಕಾರ್ಯಕ್ರಮ ಆದ ಬಳಿಕವೇ ಬಜೆಟ್ ಮುದ್ರಣ ಕಾರ್ಯಗಳು ಆರಂಭವಾಗುತ್ತವೆ. ಇಲಾಖೆಯ ಎಲ್ಲಾ ಕಂಪ್ಯೂಟರ್ಗಳು ಸೈಬರ್ ಕಳುವನ್ನು ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಮಾಹಿತಿ ಕೇಂದ್ರದ ಸಂಪರ್ಕದಿಂದ ಡಿಲಿಂಕ್ಡ್ ಆಗಿರುತ್ತವೆ. ಅತ್ಯಂತ ಪ್ರಭಾವಶಾಲಿ ಮೊಬೈಲ್ ಜಾಮರ್ನ್ನು ಹಣಕಾಸು ಇಲಾಖೆಯ ಕಟ್ಟಡದಲ್ಲಿ ಅಳವಡಿಸಿರಲಾಗುತ್ತದೆ. 10 ದಿನಗಳ ಕಾಲ ಇದೇ ಕಟ್ಟಡದಲ್ಲಿ ವೈದ್ಯರ ತಂಡವೊಂದು ಬೀಡು ಬಿಟ್ಟಿರುತ್ತದೆ. ಯಾವುದೇ ಅಧಿಕಾರಿಗಳ ಆರೋಗ್ಯದಲ್ಲಿ ದಿಢೀರ್ ಏರುಪೇರಾದರೆ ಅವರ ಸಹಾಕ್ಕೆಂದು ವೈದ್ಯರು ಬಂದಿರುತ್ತಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ